Showing posts with label ಸಿನಿಮಾ. Show all posts
Showing posts with label ಸಿನಿಮಾ. Show all posts

03 May 2018

ಕಿರಿದರೊಳ್ ಪಿರಿದರ್ಥಮನ್....

(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೫)

ಆರು ಗಂಟೆಯ ಯಕ್ಷಗಾನ, ನೂರು ಮಿನಿಟಿನ ಸಿನಿಮಾದೊಳಗೆ?! 

‘ಪಡ್ಡಾಯಿ’ ಸಿನಿಮಾವನ್ನು ಪೂರ್ಣ ಆವರಿಸಿದ ಕಡಲು ಮತ್ತು ಮೀನುಗಾರಿಕೆ ಪ್ರಥಮದಲ್ಲೇ ಇದನ್ನು ಕರಾವಳಿಯ ಪ್ರತಿನಿಧಿ ಎಂದೇ ಸ್ಥಾಪಿಸುತ್ತದೆ. ಅದಲ್ಲದೆ ಪ್ರಾದೇಶಿಕತೆಯ ಹೆಚ್ಚಿನ ಮುದ್ರೆ ಒತ್ತಲು ಚಿತ್ರದಲ್ಲಿ ಬಳಸಿಕೊಂಡ ಇನ್ನೆರಡು ಬಹುಶಕ್ತ ಅಂಶಗಳು - ಭೂತಾರಾಧನೆ ಮತ್ತು ಯಕ್ಷಗಾನ. ಭೂತಾರಾಧನೆ ನೇರ ಕಥಾನಕದ ಭಾಗವಾಗಿಯೇ ಸೇರಿದೆ. 

18 April 2018

‘ಸಮುದ್ರ’ದ ತಡಿಯಲ್ಲಿ.... ನೊರೆತೆರೆಗಳಿಗಂಜಿದೊಡೆಂತಯ್ಯಾ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೪) 


‘ಪಡ್ಡಾಯಿ’ (ಪಶ್ಚಿಮ) - ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು ವಿವಿಧ ಋತುಮಾನಗಳಿಗೆ ಹಂಚಿಕೊಂಡು ದೀರ್ಘ ಕಾಲ ನಡೆಸುವ ಅನುಕೂಲ ಅಭಯನಿಗಿರಲಿಲ್ಲ; ಇದು ‘ಮಿತ ಹಣಕಾಸಿನ ಯೋಜನೆ.’ ಅಭಯ ಮಳೆಗಾಲದ ಕೊನೆಯ ಭಾಗ ಅಥವಾ
ಮೀನುಗಾರಿಕಾ ಋತುವಿನ ಮೊದಲ ಭಾಗ ಆಯ್ದುಕೊಂಡಿದ್ದ. ಮತ್ತು ಒಂದೇ ಹಂತದ ಚಿತ್ರೀಕರಣವನ್ನು ನಡೆಸಿದ. ಅದರಲ್ಲಿ ದೃಶ್ಯಗಳ ವಾಸ್ತವ ‘ವ್ಯವಸ್ಥೆ’ಯನ್ನೇ ತಮ್ಮ ಅನುಕೂಲಕ್ಕೆ ಸಮರ್ಥವಾಗಿ ಬಳಸಿಕೊಳ್ಳುವುದರಲ್ಲೇ ತೃಪ್ತನಾದ. 

ಚಿತ್ರದ ವೆಚ್ಚ ಉಳಿಸುವ ಒತ್ತಡದಲ್ಲಿ ನಟವರ್ಗ ಬಹುತೇಕ ಉಡುಪು ತೊಡಪುಗಳನ್ನು ಉದಾರವಾಗಿ ತಾವೇ ಒದಗಿಸಿಕೊಂಡಿತ್ತು. ಚಿತ್ರೀಕರಣ ಸುಮಾರು ಮೂರು ವಾರಗಳ ಅಂತರದಲ್ಲಿ, ಅದೂ ಹೆಚ್ಚಾಗಿ ತಂಡದ ಹೆಚ್ಚಿನ

06 April 2018

‘ಕಡಲ ಗುಳಿಗೆ’ ದಿನೇಶ್ ಉಚ್ಚಿಲ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೩)

(ಚಕ್ರೇಶ್ವರ ಪರೀಕ್ಷಿತ ೨೧)


ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ - ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು ಇಪ್ಪತ್ತೈದು ಮಂದಿ ಆಳ ಸಮುದ್ರದ ಮೀನುಗಾರಿಕಾ ಅನುಭವ ನೋಡಲು ಹೋಗಿಬಂದದ್ದು ಅವಿಸ್ಮರಣೀಯ. (ನೋಡಿ: ಸಾಗರ ಸವಾರರು) ಒಂದು ಕಾಲದಲ್ಲಿ ಕಡಲಿನಲ್ಲಿ ಮೀನು ಗುರುತಿಸುವಲ್ಲಿ, ಬಲೆಬೀಸುವ ಜಾಣ್ಮೆ ಹಾಗೂ ತಾಕತ್ತಿನಲ್ಲಿ ಕಡಲ ಗುಳಿಗನೆಂದೇ ಖ್ಯಾತಿವೆತ್ತ ದಿನೇಶರು ಇಂದು ಪ್ರಾಯ ಸಹಜವಾಗಿ ಮೀನುಗಾರಿಕೆಯಿಂದ ನಿವೃತ್ತರಾಗಿ, ಅದೇ ಕಣ್ವತೀರ್ಥದ ಬಳಿಯ ಕಡಲಕಿನಾರೆಯ ಮನೆಯಲ್ಲೇ ಇದ್ದಾರೆ.

19 March 2018

ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು

(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೨)


ಮನೆ, ಮನೆ - ಯಾಕ್ಟಿಂಗ್ ಸೂಪರ್ರ್!

ಸಿನಿಮಾಕ್ಕೆ ದೊಡ್ಡ ಹಣಕಾಸಿದ್ದರೆ ಮನೆ, ಪರಿಸರದ ‘ಆಯ್ಕೆ’ ಸುಲಭ. ಕತೆಗೆ ಬೇಕಾದ ಪರಿಸರ, ಮನೆಯನ್ನು, ಚುರುಕಾಗಿ ತತ್ಕಾಲೀನವಾಗಿ ಕಟ್ಟುವ ನಿಪುಣರು ಈ ಉದ್ಯಮದಲ್ಲಿದ್ದಾರೆ. ಈ ರಚನೆಗಳು ನಿರ್ದಿಷ್ಟ ಉದ್ದೇಶ ಮತ್ತು ಸನ್ನಿವೇಶದಲ್ಲಿ ಕ್ಯಾಮರಾ ಕಣ್ಣಿಗೆ ಮಾತ್ರ ಸಾಚಾ ಸಾಬೀತಾಗುತ್ತವೆ. ಆದರೆ ಕಿರು ಬಜೆಟ್ಟಿನ ‘ಪಡ್ಡಾಯಿ’ ಸಹಜವಾಗಿರುವ ವ್ಯವಸ್ಥೆಗಳನ್ನೇ ತಮ್ಮ ಅಭಿವ್ಯಕ್ತಿಗೆ ಒಗ್ಗಿಸಿಕೊಳ್ಳಬೇಕಿತ್ತು. ಹೆಚ್ಚಾಗಿ ಅಂಥವು ನಿತ್ಯ ಬಳಕೆಯ ಸ್ಥಳಗಳೂ ಆಗುವುದರಿಂದ ಅನುಮತಿ,
ಸಣ್ಣಪುಟ್ಟ ತಿದ್ದುಪಡಿ, ಸಂಭಾವನೆ ಇತ್ಯಾದಿ ಚೌಕಾಶಿಗಳನ್ನು ಮಾಡಿಕೊಳ್ಳುವುದು ಅವಶ್ಯ. ಕಡೇ ಗಳಿಗೆಯಲ್ಲಿ ಯಾವ್ಯಾವುದೋ ಕಾರಣಕ್ಕೆ ಕೆಲವೊಮ್ಮೆ ಅವು ತಪ್ಪುವುದು, ಚಿತ್ರ ತಂಡ ರಾಜೀ ಮಾಡಿಕೊಳ್ಳುವುದು - ಎಂದೂ ಮುಗಿಯದ ಕತೆ. ನಾಲ್ಕೈದು ಮನೆ, ಕಡಲ ಕೊರೆತದ ಹಾವಳಿ, ಮಾರುಕಟ್ಟೆ, ವಾಹನಗಳು, ಮಾಲ್, ರಸ್ತೆ, ‘ಮುಂಬೈ’, ಎಲ್ಲಕ್ಕೂ ಮುಖ್ಯವಾಗಿ

12 March 2018

‘ಪಡ್ಡಾಯಿ’ - ಹೊಸ ತುಳು ಸಿನಿಮಾದುದ್ದಕ್ಕೆ....

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೧)

ಅಭಯಸಿಂಹ (ಮಗ) ಮೂರು ವರ್ಷ ಪ್ರಾಯಕ್ಕೇ ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ, ಶಿಬಿರವಾಸ ಅನುಭವಿಸಿದ್ದ. ಆತನ ಕಾಲ ಕಸುವು ಹೆಚ್ಚಿದಂತೆಲ್ಲ ಕುದುರೆಮುಖ, ಕುಮಾರಪರ್ವತ, ಕೊಡಚಾದ್ರಿ, ಜಮಾಲಾಬಾದ್, ಹಿರಿಮರುದುಪ್ಪೆಯಾದಿ ಈ ವಲಯದ ಹಿರಿ ಶಿಖರಗಳು, ಕಾಡು, ಜಲಪಾತಾದಿಗಳ ಪರಿಸರಗಳಲ್ಲಿ ನನ್ನ ಮತ್ತು (ಹೆಂಡತಿ) ದೇವಕಿಯ ಹೆಜ್ಜೆ ಗುರುತು ಮೂಡಿದಲ್ಲೆಲ್ಲ ಪುಟ್ಟಪಾದದ ಗುರುತುಗಳು ಸೇರುತ್ತಲೇ ಇದ್ದವು. ಅವನು ಬಯಸಿದ ‘ವನವಾಸ’ವನ್ನು, ಚಳಿ ಬಿಸಿಲುಗಳಿರಲಿ, ಕುಮಾರಪರ್ವತದ ನೆತ್ತಿಯ ಮಳೆಗಾಲಕ್ಕೂ ನಿರಾಕರಿಸುವುದಾಗಲಿಲ್ಲ. ವಿಸ್ತರಿಸುವುದಿಲ್ಲ, ಒಟ್ಟಾರೆ ಇವನ ಬಾಲ್ಯ ಬಹು ದೊಡ್ಡ ಪ್ರಭಾಪ್ರಕೃತಿ, ಅದರ ತಾಜಾತನದಲ್ಲಿ. ಇನ್ನವನ ಆದರ್ಶ...

ಅಭಯ ತನ್ನ ಅನುಭವ ಮತ್ತು ಅಭಿವ್ಯಕ್ತಿಗೆ ಇನ್ನೂ ಪುಣೆಯಲ್ಲಿ ಚಲಚಿತ್ರದ ಮಾಧ್ಯಮ ರೂಢಿಸಿಕೊಳ್ಳುತ್ತಿದ್ದಾಗಲೇ (ಎಫ್.ಟಿ.ಐ.ಐ) ಸೂಕ್ತ

02 November 2017

ದ್ರೌಪದಿಯ ಪಂಚಪತಿತ್ವದ ಪ್ರಶ್ನೆ!


(ಒಂದು ದಾಖಲೀಕರಣದ ಆಯೋಜನಾ ಕಥನ)

ಕುಂಟು ನೆಪವೊಂದರಿಂದ ದ್ರೌಪದಿ ಪಾಂಡವರೈವರ ಪತ್ನಿಯಾದಳು. ಇದನ್ನೇ ನೆಪವಾಗಿಟ್ಟುಕೊಂಡು  ಬಳ್ಳಾರಿ ಮೂಲದ, ಬೆಂಗಳೂರು ವಾಸಿಯಾದ ವಸುಧೇಂದ್ರರು ಈ ಸಲದ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲೊಂದು ಲೇಖನ ಪ್ರಕಟಿಸಿದರು. ಹಿಂಬಾಲಿಸಿದಂತೆ ಲೇಖನವನ್ನು ೧೭-೧೦-೧೭ರಂದು ಫೇಸ್ ಬುಕ್ಕಿನ ತಮ್ಮ ಖಾತೆಗೂ ಏರಿಸಿದರು. ಅವರ ವಿಶ್ಲೇಷಣೆ ಚೆನ್ನಾಗಿಯೇ ಇತ್ತು. ಆದರೆ ಕರಾವಳಿ ಅರ್ಥಾತ್ ತಾಳಮದ್ದಳೆಯ ವಲಯದೊಳಗೆ ಸಾಕಷ್ಟು ಉಸಿರಾಡಿದ ನನಗೆ ಬಿಟ್ಟಿ ಸಲಹೆ ಕೊಡದಿರಲು ಸಾಧ್ಯವಾಗಲಿಲ್ಲ. ಯಕ್ಷಗಾನ ಅರ್ಥಧಾರಿಗಳು (ರಂಗದಲ್ಲೂ ಕೂಟದಲ್ಲೂ) ಇಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ, ನಿತ್ಯ ನೂರರಂತೆ ಪುರಾಣಪಾತ್ರಗಳಲ್ಲಿ ಉಸಿರಾಡುತ್ತಾರೆ. ಸ್ಥಳ, ಕಾಲ, ವ್ಯಕ್ತಿ ಪ್ರಭಾವದಲ್ಲಿ ಆ ಪಾತ್ರಗಳು ಎತ್ತಿ ಹಾಕುವ

27 July 2017

ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು


-     ಭಾರವಿ ದೇರಾಜೆ

[ಮಹಾರಾಜಾಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ - ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ ತಾಪೇದಾರಿ ನೆಚ್ಚದೆ, ತನ್ನ ಪದವಿಯನ್ನು ನಿತ್ಯ ಅಗ್ನಿಪರೀಕ್ಷೆಗೊಳಪಡಿಸುವಂತೆ, ಅದೂ ಎಳೆವರಯದಲ್ಲೇ (`ಚಿರಂತನ’ ಟ್ರಸ್ಟ್, ಸುರತ್ಕಲ್) ವೃದ್ಧಾಶ್ರಮ ಕಟ್ಟಿ, ನಡೆಸುತ್ತಲಿದ್ದಾನೆ. ಇನ್ನು ಅಜ್ಜ (ದೇರಾಜೆ ಸೀತಾರಾಮಯ್ಯ), ಅಪ್ಪ, ಮಾವ (ಐಂದ್ರಜಾಲಿಕ ಶಂಕರ್) ಇವರಿಂದ ಆನುವಂಶಿಕವೋ ಎಂಬಂತೆ ಹಲವು ಕಲಾಪರಿಣತಿಗಳನ್ನು ಸಾಧಿಸಿದ್ದಾನೆ ಮತ್ತು ಕೆಲವು ಕೂಟ ಸಂಘಟನೆಗಳಲ್ಲೂ ಯಶಸ್ವಿಯಾಗಿದ್ದಾನೆ. ಅಂಥವನಿಗೆ ತನ್ನ ವಿಶೇಷ ಪಾಂಡಿತ್ಯದ - ತಬ್ಲಾ ವಾದನದಲ್ಲಿ, ನಮ್ಮ ನಡುವೆ ಇದ್ದೂ ಮರವೆಗೆ ಸಂದಂತಿದ್ದ ಹಿರಿಯ ಕಲಾಕಾರರೊಬ್ಬರನ್ನು ಕಂಡಾಗ ಹೇಗನ್ನಿಸಿರಬೇಕು! ಅವರ ಬಗ್ಗೆ ಇದುವರೆಗಿನ ತನ್ನ ಅವಜ್ಞೆ, ಬಹುತೇಕ ಸಾರ್ವಜನಿಕರದ್ದೂ ಹೌದೆಂದೇ ಆತನಿಗೆ ಸರಿಯಾಗಿಯೇ ಕಾಣಿಸಿದೆ. ಹಾಗಾಗಿ ಒಂದು ಸಂಕ್ಷಿಪ್ತ ವ್ಯಕ್ತಿ ಪರಿಚಯವನ್ನು ಲೇಖಿಸಿದ್ದಾನೆ. ಈಗ ಓದಿ, ಕೇಳಿ ಭಾರವಿಯ ಬರಹ - ಅಶೋಕವರ್ಧನ]

16 March 2017

ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ

[ಮಣಿಪಾಲದ ಡಾ|ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಗೌರವಾಧ್ಯಕ್ಷೆ ವೈದೇಹಿಯವರು, ತಮ್ಮ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ ರೂಪಿಸಿದ್ದ ಎರಡು ದಿನಗಳುದ್ದದ (೨೫,೨೬-೨-೨೦೧೭) ವಿಚಾರ ಸಂಕಿರಣ `ಅಡುಗೆಮನೆ ಜಗತ್ತು’. ಇದರಲ್ಲಿ ಮೊದಲ ದಿನ ಅಭಯಸಿಂಹ ಪ್ರಸ್ತುತಪಡಿಸಿದ ಪ್ರಬಂಧ]

[ಸಂಪಾದಕೀಯ ಟಿಪ್ಪಣಿ: ನನ್ನ ಸೊಸೆ (ಅಭಯನ ಹೆಂಡತಿ), ಕೆಲವು ಸರಳ ಪಾಕಗಳ ವಿಶೇಷ ವಿಡಿಯೋ ಸರಣಿಯನ್ನು ತನ್ನದೇ ಜಾಲತಾಣದಲ್ಲಿ ಹರಿಬಿಟ್ಟಳು. ಅವು ಜನಪ್ರಿಯವಾಗಿವೆ. ನಾನು ಕಳೆದ ಒಂಬತ್ತು ವರ್ಷಗಳಿಂದ ಈ ಜಾಲತಾಣ ಹಾಗೂ ಫೇಸ್ ಬುಕ್ಕಿನಲ್ಲಿ ಕೆಲವೊಮ್ಮೆ ಪಾಕವಿಶೇಷಗಳ ಕುರಿತು ಪ್ರಕಟಿಸಿದ ಚಿತ್ರ/ ಬರೆಹಗಳು ನನ್ನದೇ ಇತರ ನಮೂದುಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾವೆ. ಅಭಯ, ರಶ್ಮಿಯ ಪ್ರೇರಕ. ಮತ್ತೆ ನನ್ನ ಅಂತರ್ಜಾಲದ ಚಟುವಟಿಕೆಗಳೆಲ್ಲದರ ನಿರ್ವಾಹಕ. ಕೊನೆಯದಾಗಿ ತನ್ನದೇ ಸಿನಿ-ಮಾಧ್ಯಮದ ಅಧ್ಯಯನಾತ್ಮಕ ಮತ್ತು ಪ್ರಾಯೋಗಿಕ ತಿಳುವಳಿಕೆಯುಳ್ಳವ. ಆತ ಈ ಎಲ್ಲ ಅಂಶಗಳನ್ನು ಮುಪ್ಪುರಿಗೊಳಿಸಿ ಈ ಪ್ರಬಂಧವನ್ನು ರೂಪಿಸಿದ್ದಾನೆ.]

ಭೋಗಕ್ಕಾಗಿ ಆಹಾರ, ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ ಎನ್ನುವ ವಿಚಾರದಲ್ಲಿ ಎಂದೂ ಅಡಿಗೆ ಮಾಡದತಿಂಡಿಪೋತನ ಕೆಲವು ವಿಚಾರಗಳನ್ನು ನಿವೇದಿಸಲು ಇಲ್ಲಿ ನಿಂತಿದ್ದೇನೆ.

24 June 2016

ದಟ್ಟಡವಿ, ಸಾಧಾರಣ ಮನೆ!

"ದಟ್ಟಡವಿ, ಸಾಧಾರಣ ಮನೆ!" ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ! ಎಲ್ಲೋ ಅನಂತನಾಗ್ ಅವರ ಹೊಸ ಸಿನಿಮಾ – ಗೋಧಿ ಬಣ್ಣ, ಸಾಧಾರಣ ಮೈಕಟ್ಟನ್ನು ತಪ್ಪಾಗಿ ಕೇಳಿಸಿಕೊಂಡೆನೋ ಅಂದರೆ ಇಲ್ಲ. ಇದು ಅವನ ಮುಂದಿನೊಂದು ಯೋಜನೆಯ ಬಹುಮುಖ್ಯ ಅಗತ್ಯ ಎಂದು ಮಾತ್ರ ತಿಳಿಯಿತು. ಹಾಗಾಗಿ ನನ್ನ ಅನುಭವ ಮತ್ತು ಸಂಪರ್ಕದ ಮಿತಿಯಲ್ಲಿ ಮುಂದಿನ ಎರಡು ದಿನ ನಾನೂ ಅದನ್ನೇ ಪುರಶ್ಚರಣ ಮಾಡುತ್ತಾ ಕಾರಿನೊಡನೆ ಅವನಿಗೆ ಜತೆಗೊಟ್ಟೆ.

ಬೆಳಿಗ್ಗೆ ಮನೆಯಲ್ಲೇ ಹೊಟ್ಟೆಭರ್ತಿ ಮಾಡಿ, ನಮ್ಮ ಸವಾರಿ ಹೊರಟಿತು. ಜೋಡುಮಾರ್ಗ, ಬೆಳ್ತಂಗಡಿ, ಉಜಿರೆ, ಮುಂಡಾಜೆ ಕಳೆದು ಇನ್ನೇನು ಘಟ್ಟ ಬಂತೆನ್ನುವಲ್ಲಿರುವ ಹಳ್ಳಿ ಕಕ್ಕಿಂಜೆ ನಮಗೆ ಮೊದಲ ಕವಲೂರು. ಸುಮಾರು ಮೂವತ್ತೆಂಟು ವರ್ಷಗಳ ಹಿಂದೆ, ಮಂಗಳೂರು ದಾವಣಗೆರೆ ಬಸ್ಸಿನಲ್ಲಿ ಅದೇ ಪ್ರಥಮ ಬಾರಿ ಎಂಬಂತೆ ನಾನು ಗೆಳೆಯ ಲೋಕೇಶನೊಡನೆ ಇಲ್ಲೇ ಬಂದಿಳಿದಿದ್ದೆ. ಆದರೆ ಅದು ಅಮಾವಾಸ್ಯೆಯ ಕಾರಿರುಳಿನ ಹನ್ನೊಂದು ಗಂಟೆ, ವಿದ್ಯುಚ್ಛಕ್ತಿಯ ಸೌಕರ್ಯ (ಅನಾನುಕೂಲ?) ತಿಳಿಯದ ವಲಯ, ಇದ್ದಿರಬಹುದಾದ ನಾಲ್ಕೆಂಟು ಗೂಡಂಗಡಿಗಳೂ ಮುಚ್ಚಿದ್ದ ಸಮಯ – ಕಂಡದ್ದೇನು?

02 May 2014

ಟಿವಿ-ಮಹಾಭಾರತ - ಕನ್ನಡದಲ್ಲಿ ಚರಟು! ಹಿಂದಿಯಲ್ಲಿ ರಸಗಬ್ಬು!

ವಾರದ ಐದು ದಿನ ಸಂಜೆ ಆರು ಗಂಟೆಯಿಂದ ಅರ್ಧ ಗಂಟೆಯುದ್ದಕ್ಕೆ ಉದಯ ಟೀವಿ `ಅಪ್ಪಟ ಕನ್ನಡ'ದಲ್ಲಿ ಧಾರಾವಾಹಿಸುತ್ತಿರುವ ಕನ್ನಡ ಮಹಾಭಾರತವನ್ನು ನೋಡಿ ತಡೆಯಲಾಗದ ಸಂಕಟದಿಂದ ಕೆಲವು ಮಾತುಗಳು. ಇದನ್ನು ನಾನು ಬಿಟ್ಟೂ ಬಿಡಲಾಗದೇ (ಮೂಲ ಮಹಾಭಾರತದ ಕುರಿತು ನನಗಿರುವ ಅಪಾರ ಪ್ರೀತಿ, ಗೌರವದಿಂದ) ಹಲವು ಬಾರಿ ನೋಡಿ, ಸಂಕಟದಲ್ಲಿ ಒದರಾಡಿ ಮನೆಯವರಿಗೆ ಅಪಾರ ಹಿಂಸೆ ಕೊಡುತ್ತಿರುತ್ತೇನೆ.

ಹಾಗೇ ಸುಮಾರು ಮೂರು ತಿಂಗಳಿನಿಂದೀಚೆಗೆ ಪರಿಚಯವಾದ ಹಿಂದಿಯ ಮಹಾಭಾರತ ಸರಣಿ (ಸ್ಟಾರ್ ಪ್ಲಸ್, ವಾರದ ಆರು ದಿನ ರಾತ್ರಿ ಎಂಟೂವರೆಗೆ ಮತ್ತು ಮರು ಬೆಳಗ್ಗೆ ಎಂಟಕ್ಕೆ) ಸಿಕ್ಕ ಮೇಲೆ ಹಿಂದಿ ಸುಲಭದಲ್ಲಿ ಅರ್ಥವಾಗದ ಕಷ್ಟಕ್ಕೆ ಎರಡು ಸಲ ನೋಡುತ್ತ, ಆದರೆ ಬಲು ಸಂತೋಷದಲ್ಲಿ ಎದೆಯುಬ್ಬಿಸಿಕೊಳ್ಳುತ್ತಿದ್ದೇನೆ. (ಹಿಂದಿ ಸರಣಿಯ ಎಲ್ಲ ಕಂತುಗಳೂ ಅಂತರ್ಜಾಲದಲ್ಲಿ ಉಚಿತವಾಗಿ ನೋಡಲು ಲಭ್ಯ ಒಮ್ಮೆ ಇದರ ರುಚಿ ಹತ್ತಿದ ಮೇಲೆ ವಿರಾಮದಲ್ಲಿ ಇದರೆ ಮೊದಲ ಕಂತಿನಿಂದ ಎಲ್ಲ ನೋಡಿ, ಮುಂದುವರಿದಿದ್ದೇನೆ. ಈ ಸೌಲಭ್ಯವನ್ನು ಕನ್ನಡ ಮಹಾಭಾರತ ಕೊಡುತ್ತಿಲ್ಲ.) ಆದರೆ ಅಷ್ಟಕ್ಕೆ ಸುಮ್ಮನಿರದಂತೆ ಕಾಡುತ್ತಿದೆ ನನ್ನ ಕನ್ನಡ ಪ್ರೀತಿ, ಯಾರೂ ತಿರಸ್ಕರಿಸಲಾಗದ ಕನ್ನಡದ ಶಕ್ತಿ ಮತ್ತು ಸಾರ್ವಕಾಲಿಕ ಮತ್ತು ಸರ್ವವ್ಯಾಪೀ ಮೌಲ್ಯಗಳ ಖನಿಯೇ ಆದ ಮಹಾಭಾರತದ ಯೋಗ್ಯತೆ.

18 October 2013

ನಾಲ್ಕು ಸಕ್ಕರೆ ಹನಿಗಳು

ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು ಈಗಾಗಲೇ ಮೂರು ಸಿನಿಮಾಗಳಲ್ಲಿ (ಗುಬ್ಬಚ್ಚಿಗಳು, ಶಿಕಾರಿ - ಕನ್ನಡ ಮತು ಮಲಯಾಳದಲ್ಲಿ) ಗಳಿಸಿದ ಗಟ್ಟಿ ಅನುಭವದ ಮುನ್ನೆಲೆಯಲ್ಲಿ ಸ್ವಂತ ಕತೆ ಹಾಗೂ ನಿರ್ದೇಶನದಲ್ಲಿ ಕಥಾಚಿತ್ರ ‘ಸಕ್ಕರೆ’ ಅಚ್ಚನ್ನು ರುಚಿರುಚಿಯಾಗಿಯೇ ಕಟ್ಟಿದ್ದಾನೆ. ಯಶಸ್ಸಿನ ಅನೇಕಾನೇಕ ಉತ್ತುಂಗ ಶಿಖರಗಳನ್ನು ಏರಿದ ಗಣೇಶ್, ದೀಪಾಸನ್ನಿಧಿ, ಅನಂತನಾಗ್, ವಿನಯಾಪ್ರಸಾದ್, ಅಚ್ಯುತ, ಅನುಪ್ರಭಾಕರ್ ಮುಂತಾದ ನಟವೃಂದದ ಭಾವಾನುರಕ್ತಿ ‘ಸಕ್ಕರೆ’ಯಲ್ಲಿ ಹರಳುಗಟ್ಟಿ ನಿಂತಿದೆ. ಅಭಯನ ಪುಣೆ ಕಲಿಕೆಯಲ್ಲಿ ಕ್ಯಾಮರಾ ಸಹಪಾಠಿಯಾಗಿ ಮತ್ತೆ ಮೂರೂ ಚಿತ್ರಗಳಲ್ಲಿ ದೃಶ್ಯಸರ್ವಸ್ವವಾಗಿ ತೊಡಗಿಕೊಂಡ ವಿಕ್ರಂ ಶ್ರೀವಾಸ್ತವ ಇಲ್ಲೂ ಬೆರಗಿನ ಬೆಳಕಿನಾಟವನ್ನು ತುಂಬಿಕೊಟ್ಟಿದ್ದಾನೆ. ಪ್ರಾಕೃತಿಕವಿಲ್ಲದಲ್ಲಿ ದೃಶ್ಯ ಸೌಂದರ್ಯಕ್ಕೆ ವೈವಿಧ್ಯ ಕಟ್ಟಿಕೊಟ್ಟವರು ಶಶಿಧರ ಅಡಪ. ಅದಕ್ಕೆ ಶ್ರಾವ್ಯದಲ್ಲಿ ರಾಗದ ಮೆರುಗು ಕೊಡುವಲ್ಲಿ ಹರಿಕೃಷ್ಣ, ಸಾಹಿತ್ಯ ಭಾವ ಮಿಡಿಯುವಲ್ಲಿ ಜಯಂತ ಕಾಯ್ಕಿಣಿ ಮತ್ತು ಯೋಗರಾಜ ಭಟ್, ಚಲನೆಯ ಲಯ ಹಿಡಿಯುವಲ್ಲಿ ಹರ್ಷ ಮತ್ತು ಚಿನ್ನಿ ಪ್ರಕಾಶ್ ಹೆಸರಿಗೆ ತಕ್ಕಂತೆ ಅಸಾಮಾನ್ಯವನ್ನೇ ಸಾಧಿಸಿದ್ದಾರೆ. ಸೆನ್ಸಾರ್ ಯಾವ ಹಿಡಿತ ಹಿಂಜರಿಕೆಗಳಿಲ್ಲದೆ ಸಾರ್ವಜನಿಕ ವೀಕ್ಷಣೆಗೆ ಉತ್ತಮ ರಹದಾರಿಯನ್ನೇ ಕೊಟ್ಟಿದೆ. ಮೊದಲಾಗಿ ಬಿಡುಗಡೆಗೊಂಡ ಹಾಡುಗಳು ನಿರೀಕ್ಷೆ ಮೀರಿ ರಾಜ್ಯಾದ್ಯಂತ ಅನುರಣಿಸುತ್ತಿವೆ. ‘ಗೆಲ್ಲಿಸು’ವ ಮಂತ್ರಗಳು, ಪ್ರಚಾರ ತಂತ್ರಗಳ ಸಿದ್ಧಿ ಮೀಡಿಯಾ ಹೌಸಿಗೆ ಹೊಸತೇನೂ ಅಲ್ಲ. ಆದರೂ ನಿರ್ಮಾಪಕದ್ವಯರಾದ ಬಿ.ಸುರೇಶ್, ಶೈಲಜಾ ನಾಗ್ ಅವರಿಗೆ ‘ಸಕ್ಕರೆ’ ಬಿಡುಗಡೆಯ ದಿನ ನಿಗದಿಯಲ್ಲಿ ತಡವರಿಕೆ ಕಾಡಿದ್ದಿದ್ದರೆ ನಾನು ಮೊದಲೇ ಹೇಳಿದಂತೆ ವಾಣಿಜ್ಯ ವಹಿವಾಟಿನದು ಮಾತ್ರ. ಈಗ ಅದನ್ನೂ ಉತ್ತರಿಸಿ ಇಂದು (೧೮-೧೦-೨೦೧೩, ಶುಕ್ರವಾರ) ರಾಜ್ಯಾದ್ಯಂತ ಒಂದು ಅವಧಿಯಲ್ಲಿ ಕನಿಷ್ಠ ನೂರಕ್ಕೂ ಮಿಕ್ಕು ಬೆಳ್ಳಿತೆರೆಗಳಲ್ಲಿ ರಂಗಿನಾಟವಾಡಿ, ಲಕ್ಷಾಂತರ ಮನಗಳಲ್ಲಿ ಉತ್ಸಾಹದ ಉಕ್ಕೇರಿಸಲಿದೆ ‘ಸಕ್ಕರೆ.’ ಶುದ್ಧ ಮನರಂಜನೆಯ ಪ್ರವಾಹ ವಾರ, ತಿಂಗಳುಗಳ ಲೆಕ್ಕದಲ್ಲಿ ಜನಮನವನ್ನು ವ್ಯಾಪಿಸಲಿ ಎಂದು ಹಾರೈಸುವುದಷ್ಟೇ ನಮಗುಳಿದಿದೆ!

23 August 2013

ಸಕ್ಕರೆಯೊಂದಿಗೊಂದಷ್ಟು ಅಕ್ಕರೆಯ ಸುತ್ತು

ಸಿನಿಮ ನಿರ್ದೇಶಕ ಪುತ್ರ, ನಟೀಮಣಿ ಸೊಸೆ ಪಡೆದ ನಮ್ಮ ಭಾಗ್ಯವನ್ನು ಕೊಂಡಾಡುವ ಬಹುತೇಕ ಮಂದಿಗೆ ಸಿನಿಮ ಎಂದರೆ ಗ್ಲಾಮರ್ ಮಾತ್ರ! ಅಂಥವರಿಗೆ ನನ್ನ ಶಿರೋಭೂಮಿಯಲ್ಲಿ ಸೋತು ಹಿಮ್ಮೆಟ್ಟುತ್ತ ದಿಕ್ಕೇಡಿಯಾದ ಕೇಶ ಶೃಂಗಾರ, ನೋಟಕರಲ್ಲಿ ಹಾಸ, ಹಾಸ್ಯ, ಭಯವನ್ನು ಏಕಕಾಲಕ್ಕೆ ಉದ್ದೀಪಿಸುವ ಪೊದರುಗಟ್ಟಿದ ಮೀಸೆ, ಒಮ್ಮೊಮ್ಮೆ ಕತ್ತು ಕೈಗಳ ಅಂಚಿನಲ್ಲಿ ನೂಲು ಕಿತ್ತ ದಗಳೆ ಜುಬ್ಬಾ, ಇಸ್ತ್ರಿಯಿಲ್ಲದ ಇಜಾರ ಕಂಡು ಅಪಾರ ಕನಿಕರ. (ಪುಣ್ಯಕ್ಕೆ ಯಾರೂ ಇದುವರೆಗೆ ನೇರ ನನ್ನಲ್ಲಿ ಕೇಳಿಲ್ಲ ಅಭಯ ಓಕೇ ನೀವು ಯಾಕೇ?”) ಯಾವುದೇ ಒಂದು ಮಾಮೂಲೀ ಮುಂಜಾನೆ ಅಭಯನ ಚರವಾಣಿ ಕರೆ ಬರಬಹುದು. “ಅಪ್ಪಾ ಈಗೊಂದು ಕತೆಯ ಹೊಳಹು ಮಿಂಚಂಚೆ ಕಳಿಸಿದ್ದೇನೆ. ನಿಮ್ಮಿಬ್ಬರ ಅಭಿಪ್ರಾಯ ಬೇಕು.” ನಾವೇನಾದರೂ ಹೇಳಲಿ, ಹೇಳದಿರಲಿ ಆತ ಮತ್ತೆಂದೋ ಹೀರೋಗೆಕತೆ ಹೇಳುತ್ತಾನೆ. ಎಲ್ಲೋ ಏನೋ ಕುದುರಿದರೆ, ನಿರ್ಮಾಪಕರೊಡನೆಚರ್ಚೆ ಮಾಡಿ,’ ಇತರ ಕಲಾವಿದ, ತಾಂತ್ರಿಕ ಬಳಗ, ಸ್ಥಳ, ಸಮಯ, ಕ್ರಿಯೆ ಎಲ್ಲವನ್ನೂ ನಿಶ್ಚಯವೋ ರಾಜಿಯೋ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಹೀಗೆ ಬಸವನಹುಳಕ್ಕಿಂತಲೂ ನಿಧಾನವಾಗಿ ನಡೆಯುವ ಸಿನಿಮದಲ್ಲಿ ಸಾರ್ವಜನಿಕಕ್ಕೆ ಬೆಳ್ಳಿತೆರೆಯ ಮೇಲೆ ಸಿಗುವ ಪ್ರದರ್ಶನ ಒಂದೆರಡು ಗಂಟೆಯ ದೀರ್ಘ ಎಂದು ಕಂಡರೂ ವಾಸ್ತವದಲ್ಲಿ ಅದೊಂದು ಮಿಂಚು; ಕ್ಷಣಿಕ! ಈ ಸ್ಪಷ್ಟ ಅರಿವಿನೊಡನೆ ನಾವು ಅವರಿಬ್ಬರ ವೃತ್ತಿ ಕೌಶಲ್ಯದ ವಿಕಾಸವನ್ನಷ್ಟೇ ಪ್ರೀತಿಸುತ್ತೇವೆ; ಪ್ರಭಾವಳಿಯನ್ನಲ್ಲ. ಆಗ ಕಾಣುವ, ಕಾಡುವ ಚಿತ್ರಗಳೇ ಬೇರೆ.

12 February 2011

೧೨೭ ಗಂಟೆಗಳು!

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ, ಹೆಚ್ಚು ಕಡಿಮೆ ಐದೂಕಾಲು ದಿನ ಅಥವಾ ೧೨೭ ಗಂಟೆಗಳ ಕಾಲ ಈತ ಏಕಾಂಗಿಯಾಗಿಯೇ ನಡೆಸಿದ ಅಸಾಧಾರಣ ದೇಹ-ಮನಸ್ಸುಗಳ ಸಾಹಸದ ಫಲವಾಗಿ ಬದುಕಿ ಬರುತ್ತಾನೆ. ಇದು ಒಂದು ಸತ್ಯ ಘಟನೆ. ಇಂದೂ ತನ್ನ ಮೊಂಡುಗೈಯೊಡನೆ ಈ ಅಮೆರಿಕನ್ ಪ್ರಜೆ ಸಾಹಸಾನ್ವೇಷಣೆಯನ್ನು ಮುಂದುವರಿಸಿದ್ದಾನೆ! ಅದರ ಕಥಾ ಸಿನಿಮಾ ರೂಪವೇ ‘127 Hours’.

23 January 2009

ಗೋವಾ ಚಿತ್ರೋತ್ಸವ ಭಾಗ - ೩

ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ ಹಸನ್ಮುಖಿಗಳಾಗಿ ನಿಂತು ಸ್ವಾಗತಿಸಿದ್ದರು. ನಿಗದಿತ ಸಮಯಕ್ಕೆ ಒಂದೆರಡು ಮಿನಿಟು ಮೊದಲೇ ಕಾರ್ಯಕರ್ತನೊಬ್ಬ ಅಂದಿನ ಚಿತ್ರದ ಕಿರು ಜಾತಕ ಘೋಷಿಸಿ ನೇರ `ರೀಲು’ ಬಿಚ್ಚಲು ಅನುವುಮಾಡಿಕೊಟ್ಟ! (ನಮ್ಮಲ್ಲಿ ನಾಲ್ಕಾಣೆ ಮಗ್ಗಿ ಪುಸ್ತಕ ಬಿಡುಗಡೆ ಮಾಡುವುದಿದ್ದರೂ ಕನಿಷ್ಠ ನಿರ್ವಾಹಕನಿಂದ ತೊಡಗಿ ಪ್ರಾರ್ಥನೆ, ಉದ್ಘಾಟಕ, ಅಧ್ಯಕ್ಷ, ಪ್ರಸ್ತಾವನೆಕಾರ, ಸ್ವಾಗತಕಾರ, ಅತಿಥಿ, ಲೇಖಕ, ವಂದನಾರ್ಪಣೆ ಎಂಬ ಅಷ್ಟೂಗಿರಗಳ ಮೆರೆತದಲ್ಲಿ ಮುಖ್ಯ ವಿಷಯ ಮತ್ತು ಪ್ರೇಕ್ಷಕ ಚಟ್ಟಕ್ಕೇರುವುದು ನಿಸ್ಸಂದೇಹ!)

Fallen Angels ಅಥವಾ ಧರೆಗೆಬಿದ್ದ ಅಪ್ಸರೆಯರು, ಹಾಂಕಾಂಗಿನ ಚಿತ್ರ, ನಿರ್ದೇಶಕ ವಾಂಗ್ ಕರ್ ವಾಯ್ (ಅಭಯನ ಅನುಭವದಲ್ಲಿ ಬಹುಖ್ಯಾತನಂತೆ). ಕ್ಷೌರ, ಧಾಬಾ, ಕಸಹೊಡೆಯುವುದು, ಸೂಳೇಗಾರಿಕೆ ಮುಂತಾದ ನಗಣ್ಯ ಆದರೆ ಅನಿವಾರ್ಯ ವೃತ್ತಿಪರತೆಗಳ ಪಟ್ಟಿಯಲ್ಲಿ ಇಲ್ಲಿ ಕೊಲೆಗಡುಕತನವೂ ಇದೆ ಎಂಬುದು ಭಾರೀ ಆಘಾತಕರ ಅನುಭವ. ಚಿತ್ರ ನನ್ನ ಅನುಭವ ಸ್ತರಕ್ಕೆ ಅಪರಿಚಿತ ಮಾಹಿತಿಗಳ ಓಣಿಯ ಓಟದ ಹಾಗನ್ನಿಸಿತು. ದೇಶ, ಭಾಷೆಗಳ ಅಂತರವೂ ಪ್ರಯಾಣದ ಆಯಾಸವೂ ನನ್ನ ಗ್ರಹಿಕೆಗಳನ್ನು ಮಸಕುಗೊಳಿಸಿರುವ ಸಾಧ್ಯತೆಗಳೂ ಇರುವುದರಿಂದ ಇಷ್ಟು ಸಾಕು.

22 January 2009

ಗೋವಾ ಚಿತ್ರೋತ್ಸವ ಭಾಗ - ೨


ಪಂಚತಾರಾ ಪಂಚ್!

ಉಡ್‌ಲ್ಯಾಂಡ್ಸ್‌ನಲ್ಲಿ ಪುತ್ತಪ್ಪ ಬ್ಯಾರಿ!

ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ ಐವರನ್ನೇ ಉತ್ಸವಾಂಗಣಕ್ಕೆ ಒಯ್ದು ಬಿಟ್ಟಿತು. ಉತ್ಸವದ ಪ್ರಧಾನ ಆಡಳಿತ ಕಚೇರಿ ಬದಿಯ ಹಳೆಯ ಕಟ್ಟಡದಲ್ಲಿತ್ತು (ಅಲ್ಲಿ ಹಿಂದೆ ವೈದ್ಯಕೀಯ ಕಾಲೇಜ್ ಇತ್ತು). ಉತ್ಸವದ ಅತಿಥಿಗಳಿಗೆ ತಲಾ ನಾಲ್ಕು `ಉಪ ಅತಿಥಿ’ಗಳನ್ನು ಸೇರಿಸಿಕೊಳ್ಳುವ ಅವಕಾಶವಿದ್ದುದರಿಂದ ನಮ್ಮಿಬ್ಬರಿಗೆ ಪರಿಚಯ ಬಿಲ್ಲೆ ಮತ್ತು ರಹದಾರಿ ಪತ್ರ ಸಂಗ್ರಹಿಸಿಕೊಂಡೆವು. ಒಟ್ಟಾರೆ ವಠಾರ ಪ್ರವೇಶದಲ್ಲೇ ಅತಿಥಿ ಪತ್ರದ ತಪಾಸಣೆ, ವೈಯಕ್ತಿಕ ಚೀಲ ಹಾಗೂ ದೇಹ ತಡಕುವುದು, ಲೋಹ ಪರೀಕ್ಷಕ ಯಂತ್ರಕ್ಕೆ ಒಡ್ಡುವುದೆಲ್ಲ ಇತ್ತು. ಮುಂದೆ `ನಮ್ಮ’ ಗುರುತಿನ ಪದಕವಿದ್ದರೂ ವಿಸ್ತಾರ ವಠಾರದಲ್ಲಿ ಹರಡಿದ್ದ ಪ್ರತಿ ಕಛೇರಿ, ಪ್ರದರ್ಶನಾಲಯ, ಥಿಯೇಟರ್‌ಗಳ ದ್ವಾರಗಳಲ್ಲೂ ತಡಕು ಸೇವೆ, ಲೋಹ ಪರೀಕ್ಷಕ ಚೌಕಟ್ಟು ಕಡ್ಡಾಯವಾಗಿ ನಡೆದಿದ್ದು ಹರ್ಷದ ಹೊಳೆಯಾಳದ ಅನೂಹ್ಯ ಭಯಗಳನ್ನು ನೆನಪಿಸುತ್ತಲೇ ಇತ್ತು. ಹೆಚ್ಚುವರಿಯಾಗಿ ಥಿಯೇಟರ್ ಪ್ರವೇಶದಲ್ಲಿ ನಮ್ಮ ನೀರಬಾಟಲಿಗಳನ್ನು ಹೊರಗಿಡಿಸುತ್ತಿದ್ದರು. ಇದು ಭದ್ರತೆಯ ಕ್ರಮವಲ್ಲ, ಶುಚಿತ್ವದ ಆವಶ್ಯಕತೆ ಎಂದು ತಿಳಿದಾಗ ನಮ್ಮ `ಸಂಸ್ಕೃತಿ’ಯ ಬಗ್ಗೆ ನಾಚಿಕೆಯೂ ಆಯ್ತು.

18 January 2009

ಗೋವಾ ಚಿತ್ರೋತ್ಸವ ಭಾಗ - ೧



ಮೂಡಿತು ಗರಿ

ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ) `ಗುಬ್ಬಚ್ಚಿಗಳು’ ಸಾರ್ವಜನಿಕಕ್ಕೆ ಬರುವ ಮೊದಲು ಅಲ್ಲಲ್ಲಿ ಕುಪ್ಪಳಿಕೆಗಳನ್ನು ನಡೆಸಿತು. ಲಾಸ್ ಎಂಜಲೀಸ್, ನ್ಯೂಯಾರ್ಕ್, ಟೊರೊಂಟೋ, ಕೋಲ್ಕೊತ್ತಾಗಳಲ್ಲಿ ಚೂರುಪಾರು ಕುಕ್ಕಿ, ಹೆಕ್ಕಿ ಭಾರತೀಯ ಚಿತ್ರೋತ್ಸವಕ್ಕಾಗುವಾಗ ಭಾರತೀಯ ಇಪ್ಪತ್ತೈದರಲ್ಲಿ, ಕನ್ನಡದ ಮೂರರಲ್ಲಿ ಒಂದಾಗಿ ನಿಂತಿತು. ಸುಮಾರು ಈ ಹೊತ್ತಿಗೆ ಅಭಯನಿಗೆ ರಶ್ಮಿಯೊಡನೆ ಮದುವೆಯಾಯ್ತು. ಬೆನ್ನಿಗೆ ಇವಳಿಗೆ ಪರೀಕ್ಷೆ ಕಾಟ! ಸರಿ ಅವನು ಬೆಂಗಳೂರು, ಇವಳು ಮಂಗಳೂರು. ನಿಮಗೆಲ್ಲಾ ಗೊತ್ತಿರುವಂತೆ ಈಚಿನ ವರ್ಷಗಳಲ್ಲಿ ಭಾರತದ ಅಧಿಕೃತ ಅಂತಾರಾಷ್ಟ್ರೀಯ ಉತ್ಸವಕ್ಕೆ ಖಾಯಂ ನಿವೇಶನ ಗೋವಾ. ಇದಕ್ಕೆ ಹೊಂದಿದಂತೆ ರಶ್ಮಿಯ ಸೆಮೆಸ್ಟರ್ ಪರೀಕ್ಷೆ ಮುಗಿದು ರಜೆ ಆರಂಭವಾಗುವುದೂ ಗೊತ್ತಾಯ್ತು. ಸರಿ, ನವದಂಪತಿಗೆ ಆಧುನಿಕ ಸಂಪ್ರದಾಯವೇ ಆಗಿರುವ ಮಧುಚಂದ್ರವೂ ಚಿತ್ರೋತ್ಸವವೂ ಒಟ್ಟಿಗೇ ನಡೆಯಲಿ ಎಂದೇ ನಾವೆಲ್ಲ ಹಾರೈಸಿದೆವು. ಚಿತ್ರೋತ್ಸವ ಸಮಿತಿ ನಿರ್ಮಾಪಕ (ಬಿ.ಸುರೇಶ) ಮತ್ತು ನಿರ್ದೇಶಕರಿಗೆ ಮಾತ್ರ ನಿರ್ಮಾಣ ಕೇಂದ್ರದಿಂದ ಅಂದರೆ ಬೆಂಗಳೂರಿನಿಂದ ಗೋವಾಕ್ಕೆ ಹೋಗಿಬರುವ ವಿಮಾನ ಸೌಲಭ್ಯ ಕೊಡುತ್ತಿತ್ತು. ಉಳಿದಂತೆ ಅಲ್ಲಿನ ವಸತಿ ವ್ಯವಸ್ಥೆ, ಯಾವುದೇ ಚಿತ್ರ ವೀಕ್ಷಣಾ ವ್ಯವಸ್ಥೆಗಳನ್ನು ನಾಮಾಂಕಿತರೊಡನೆ ನಾಲ್ವರು ಅತಿಥಿಗಳಿಗೆ ಸಮಿತಿ ಉಚಿತವಾಗಿ ಒದಗಿಸುತ್ತಿತ್ತು.  ಹಾಗಾಗಿ ಅಭಯ ಅಲ್ಲಿಗೆ ತಲಪುವ ದಿನ ನೋಡಿಕೊಂಡು ರಶ್ಮಿಯನ್ನು ಮಂಗಳೂರಿನಿಂದ ಅಲ್ಲಿಗೊಯ್ದು ಮುಟ್ಟಿಸುವ ಜವಾಬ್ದಾರಿಯಷ್ಟೇ ನನಗೆ ಬಂತು. ಮತ್ತದಕ್ಕೂ `ಸಂಭಾವನೆ’ ರೂಪದಲ್ಲಿ ಅಭಯನಿರುವ ಉದ್ದಕ್ಕೂ ನಾನಲ್ಲಿದ್ದು ಚಿತ್ರೋತ್ಸವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದಿತ್ತು. ಆದರೆ ನನ್ನ ಅಂಗಡಿಯ ಕೆಲಸ ಮತ್ತೂ ಮುಖ್ಯವಾಗಿ ಅವರಿಬ್ಬರ ಏಕಾಂತತೆಯ ಅವಕಾಶ ಹಾಳು ಮಾಡದ ಎಚ್ಚರದಲ್ಲಿ ಬರಿಯ ಹೋದ ಹಗಲಿನ ಕಾರ್ಯಕ್ರಮದಲ್ಲಷ್ಟೇ ಭಾಗಿಯಾಗಿ ಮರಳುವಂತೆ ಟಿಕೇಟ್ ಮಾಡಿಕೊಂಡೇ ಹೊರಟೆ.