(ಶರಾವತಿ ಸಾಗರದ ಉದ್ದಕ್ಕೆ ಕೊನೆಯ ಅರ್ಧ)
ಬುತ್ತಿಯೂಟ ಮುಗಿಸಿದ್ದೇ ಹಿತ್ತಲಿನ ಗುಡ್ಡೆಯತ್ತ ಪಾದ ಬೆಳೆಸಿದೆವು. ಗುಡ್ಡೆಯ ಮೇಲೆ ಅಡ್ವೆಂಚರ್ ಬಳಗದ್ದೇ ಹೆಚ್ಚುವರಿ ವಾಸದ ಕಟ್ಟಡಗಳು ಕಾಣಿಸಿದವು. ಅಡ್ವೆಂಚರರ್ಸಿನಲ್ಲಿ ಜಲಕ್ರೀಡೆಗಳಲ್ಲದೆ ಚಾರಣ ಶಿಬಿರಗಳೂ ನಡೆಯುತ್ತವೆ. ನೆಲದ ಸತ್ವ ಬೆಳಗುವಂತೆ ಜನಪದ, ಮಹಿಳಾಪರ ಮುಂತಾದ ವಿವಿಧ ಅನುಭವ ಸಂಗ್ರಹ ಮತ್ತು ವಿಚಾರ ಸಂಕಿರಣಗಳಿಗೂ (ಕನ್ನಡ ವಿವಿ ಸಹಯೋಗ) ಇದು ನೆಲೆಯಾಗುತ್ತದೆ. ಇವಕ್ಕೆಲ್ಲ ಅಖಿಲ ಭಾರತ ಮಟ್ಟದಲ್ಲೂ (ಐಯೇಎಸ್, ಐಪೀಯೆಸ್ ವಿದ್ಯಾರ್ಥಿಗಳು ಇತ್ಯಾದಿ) ಹಲವು
ತಂಡಗಳು ಅನಿಯತವಾಗಿ, ಅದೂ ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲೇ ಬರುವುದಿದೆಯಂತೆ. ಬಹುಶಃ ಅಂಥ ಸಂದರ್ಭಗಳಲ್ಲಿ ಈ ಕಟ್ಟಡಗಳೂ ಬಳಕೆಗೊದಗುವುದಿರಬೇಕು. ಅಲ್ಲೇ ಆಚೆಗೆ ಇನ್ನೊಂದು ದೊಡ್ಡ ದುಂಡು ಚಪ್ಪರ ರಚನೆಯ ಕೊನೆಯ ಹಂತದಲ್ಲಿತ್ತು. "ಇನ್ನೊಂದೆರಡು ತಿಂಗಳಲ್ಲಿ ಪರಿಸರ ಸಂಬಂಧೀ ಭಾರೀ ಸಂಕಿರಣವನ್ನು ನಡೆಸುವ ಮೂಲಕ ಅದರ ಕಾರ್ಯಾಚರಣೆಯಾಗಲಿದೆ" ಎಂದೇ ಸ್ವಾಮಿದಂಪತಿ ಹೇಳಿದ್ದರು. ಮತ್ತದಕ್ಕೆ ನಮ್ಮೆಲ್ಲರಿಗೆ ಸ್ವಯಂಸೇವಕರಾಗಿ ಬಂದು ಭಾಗವಹಿಸಲು ಮುಂಗಡ ಆಮಂತ್ರಣವನ್ನೂ ಕೊಟ್ಟದ್ದು ನೆನಪಾಯ್ತು.
ತಂಡಗಳು ಅನಿಯತವಾಗಿ, ಅದೂ ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲೇ ಬರುವುದಿದೆಯಂತೆ. ಬಹುಶಃ ಅಂಥ ಸಂದರ್ಭಗಳಲ್ಲಿ ಈ ಕಟ್ಟಡಗಳೂ ಬಳಕೆಗೊದಗುವುದಿರಬೇಕು. ಅಲ್ಲೇ ಆಚೆಗೆ ಇನ್ನೊಂದು ದೊಡ್ಡ ದುಂಡು ಚಪ್ಪರ ರಚನೆಯ ಕೊನೆಯ ಹಂತದಲ್ಲಿತ್ತು. "ಇನ್ನೊಂದೆರಡು ತಿಂಗಳಲ್ಲಿ ಪರಿಸರ ಸಂಬಂಧೀ ಭಾರೀ ಸಂಕಿರಣವನ್ನು ನಡೆಸುವ ಮೂಲಕ ಅದರ ಕಾರ್ಯಾಚರಣೆಯಾಗಲಿದೆ" ಎಂದೇ ಸ್ವಾಮಿದಂಪತಿ ಹೇಳಿದ್ದರು. ಮತ್ತದಕ್ಕೆ ನಮ್ಮೆಲ್ಲರಿಗೆ ಸ್ವಯಂಸೇವಕರಾಗಿ ಬಂದು ಭಾಗವಹಿಸಲು ಮುಂಗಡ ಆಮಂತ್ರಣವನ್ನೂ ಕೊಟ್ಟದ್ದು ನೆನಪಾಯ್ತು.









