Showing posts with label ಭಾರತ ಅ-ಪೂರ್ವ ಕರಾವಳಿಯೋಟ. Show all posts
Showing posts with label ಭಾರತ ಅ-ಪೂರ್ವ ಕರಾವಳಿಯೋಟ. Show all posts

10 November 2020

WILDLIFE SANCTUARIES - Visited 1996


[‘ಭಾರತ ಅ-ಪೂರ್ವ ಕರಾವಳಿಯೋಟ’ - ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು ಬರೆದಿದ್ದೆ. ಅದರಲ್ಲಿ ನಾವು ಭೇಟಿ ಕೊಟ್ಟ ಪ್ರಾಕೃತಿಕ ವೈಶಿಷ್ಟ್ಯಗಳನ್ನಷ್ಟೇ ಲೆಕ್ಕಕ್ಕೆ ಹಿಡಿದು, ಸಂಬಂಧಿಸಿದ ಇಲಾಖೆಗಳಿಗೆ ಹೀಗೊಂದು ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸುವ ಕರ್ತವ್ಯವನ್ನು ನಿರ್ವಹಿಸಿದ್ದೆ. ಇದರಲ್ಲಿದ್ದ ಅಸಂಖ್ಯ ಭಾಷಾ ಸ್ಖಾಲಿತ್ಯವನ್ನು ಅಂದೇ ನನ್ನ ತಂದೆ ತಿದ್ದಿ ಕೊಟ್ಟಿದ್ದರು. ಉಳಿದಂತೆ, ನನ್ನದು ಕೇವಲ ಹಕ್ಕಿನೋಟ ಮತ್ತು ಅವಸರದ ದರ್ಶನ ಎಂಬ ಅರಿವು ನನಗಿದೆ. ಇವೆಲ್ಲವುಗಳ ಮೇಲೆ ‘ತಜ್ಞ ವರದಿ’ ಕೊಡುವಲ್ಲಿ ನನಗೆ ಪ್ರಾಮಾಣಿಕ ವನ್ಯ ಪ್ರೀತಿಯೊಂದೇ ಬೆಳಕು, ವಿಸ್ತಾರ ಅಧ್ಯಯನ ಅಲ್ಲ ಎಂಬ ಅರಿವೂ ನನಗಿದೆ. ಎಲ್ಲಕ್ಕೂ ಮುಖ್ಯವಾಗಿ ಇದು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ಪ್ರತ್ಯಕ್ಷ ಅನುಭವದ ಅಂದೇ ಬರೆದ ಸಾರಾಂಶ ಎನ್ನುವುದನ್ನೂ ಗಮನಿಸಿ.] 

From 14-4-96 to 18-5-96 we were on brief natural trail-cum-sight seeing tour of (mostly) eastern India. The travelogue in full is in Kannada - ಭಾರತ ಅ-ಪೂರ್ವ ಕರಾವಳಿಯೋಟ (16 parts) . This is a separate brief about the Wild life Sanctuaries or National parks visited by us, sent to different authorities listed in the end. 

06 November 2020

ಹಂಪಿ, ದುರ್ಗ, ಜಯ ಮಂಗಳಂ

(ಭಾರತ ಅ-ಪೂರ್ವ ಕರಾವಳಿಯೋಟ - ೧೬) 



ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ

30 October 2020

ವಿಜಯ ಧಾವಂತ ಕರ್ನೂಲಿನವರೆಗೆ

(ಭಾರತ ಅ-ಪೂರ್ವ ಕರಾವಳಿಯೋಟ - ೧೫) 



ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ "...ವಿಜಯವಾಡಾ ಇಲ್ಲಿಂದ ೬೪ ಕಿಮೀ ಮಾತ್ರ. ಅಲ್ಲಿ ಕಲ್ಕೂರರ ಇನ್ನೋರ್ವ ಗೆಳೆಯರ ಹೋಟೆಲ್ ನಮ್ಮನ್ನು ಕಾದಿದ್ದಂತೇ ನಾವಿಲ್ಲೇ ಉಳಿಯಬೇಕಾಯ್ತು..... ಒರಿಸ್ಸಾಕ್ಕೆ ಬಂದ ಮೇಲೆ ನಮ್ಮೂರಿನದೇ ವಾತಾವರಣ - ಬೆವರು ಬೆವರು. ಇಲ್ಲೆಲ್ಲ ಗೇರು ಕೃಷಿ ತುಂಬಾ ಕಾಣುತ್ತಿದೆ. ಮಾವಿನ ಹಣ್ಣು ರಾಶಿ ರಾಶಿ. ಇಲ್ಲೊಂದು ಜಾತಿಯ ಮಾವಿನ ಹಣ್ಣು (ರಸಾಲ) ಜೂಸ್ ಬಾಟಲಿನಂತೇ ಇದೆ ಗೊತ್ತಾ. ಹಣ್ಣನ್ನು ಹಾಗೇ ಹಗೂರಕ್ಕೆ ಎಲ್ಲ

26 October 2020

ಕಣ್ದಣಿಸಿದ ಬುರ್ರಾ, ಹೊಟ್ಟೆ ದಣಿಸಿದ ಕಾಕಿನಾಡ

(ಭಾರತ ಅ-ಪೂರ್ವ ಕರಾವಳಿಯೋಟ - ೧೪) 



ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು ಸಾಕಷ್ಟು ಕಂಡಿದ್ದೇನೆ, ಹೊಕ್ಕು ಹೊರಟಿದ್ದೇನೆ. ಗಟ್ಟಿ ಕೆಮ್ಮಣ್ಣಿನ ಹಾಸುಗಳಲ್ಲಿ ಬಿಳಿ-ಬೂದು ಬಣ್ಣದ ಮಿದು ಮಣ್ಣಿನ ಸೆಳಕುಗಳು ಅರ್ಥಾತ್ ಸೇಡಿ ಮಣ್ಣಿನ ಅಂಶಗಳು ಇರುತ್ತವೆ. ಅವು ನೂರಾರು ವರ್ಷಗಳ ನೀರ ಕೊರೆತದಲ್ಲಿ ತೊಳೆದು ಹೋಗಿ ಉಳಿದ ಖಾಲಿ ಜಾಗವೇ ಈ ಪೊಳ್ಳುಗಳು. ಇವು ಹೊರಲೋಕಕ್ಕೆ ಸಹಜವಾಗಿ ತೆರೆದಿರುವುದೂ ಇದೆ, ಕೆಲವೊಮ್ಮೆ ಮನುಷ್ಯ ಉದ್ದೇಶಪಟ್ಟೋ (ನೀರಿಗಾಗಿ) ಆಕಸ್ಮಿಕದಲ್ಲೋ ತೆರೆಯುವುದೂ ಇದೆ. ಅವನ್ನು

22 October 2020

ಪುರಿ, ಕೊನಾರ್ಕ ಮತ್ತು ಚಿಲ್ಕಾ

(ಭಾರತ ಅ-ಪೂರ್ವ ಕರಾವಳಿಯೋಟ - ೧೩) 



"ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು (ದಕ ಜಿಲ್ಲೆ) ಊರು ಬಿಟ್ಟಿದ್ದರು. ಅಪರಿಚಿತ ಊರು, ಅನಿಶ್ಚಿತ ಭವಿಷ್ಯಗಳ ನಡುವೆ ಆಂಧ್ರಪ್ರದೇಶವನ್ನು ವ್ಯಾಪಿಸಿ, ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತ ಅಂಥವರ ಸಾಹಸ ತುಂಬ ದೊಡ್ಡ ಕತೆ..." ಎಂದೇ ಕೂರಾಡಿ ಚಂದ್ರಶೇಖರ ಕಲ್ಕೂರರು (ಕೆ.ಸಿ ಕಲ್ಕೂರ) ಹೇಳಿದ್ದರು. ಅವರು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹಿರಿಯರ ಹೋಟೆಲ್ ಸಾಹಸವನ್ನು ಯಶಸ್ವೀಯಾಗಿಯೇ ಮುಂದುವರಿಸಿದ್ದರು. ನಾನು ಭಾರತ ಅ-ಪೂರ್‍ವ ಕರಾವಳಿಯೋಟದ ತಯಾರಿಯಂದು ಪತ್ರಮುಖೇನ ಅವರ ಸಹಕಾರ ಕೋರಿದ್ದೆ. ಅದೇ ವೇಳೆಗೆ (೧೯೯೬ ಫೆಬ್ರುವರಿಯ ಒಂದು ದಿನ) ಬ್ರಹ್ಮಾವರ ಸಮೀಪದ ಅವರ ಮೂಲ ನೆಲೆಗೆ ಇನ್ಯಾವುದೋ ಕಾರ್ಯದಲ್ಲಿ ಅವರು ಬರುವುದಿತ್ತು. ಆಗ ನನ್ನನ್ನೂ ಅಲ್ಲಿಗೆ ಕರೆಸಿಕೊಂಡು, ಅಗತ್ಯಕ್ಕೆ ತಕ್ಕ ಮಾಹಿತಿಯ ಮಹಾಪೂರವನ್ನೇ ಹರಿಸಿದ್ದರು. 

19 October 2020

ಮಾರ್ಗಕ್ರಮಣ ಮತ್ತು ಸೋರಿದ ಎಣ್ಣೆ

(ಭಾರತ ಅ-ಪೂರ್ವ ಕರಾವಳಿಯೋಟ - ೧೨) 



ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ, ಎರಡೇ ದಿನದ ಓಟದೊಳಗೇ ಬೈಕುಗಳು ಬಹಳ ಬಳಲಿದ್ದವು. ಹಾಗಾಗಿ ಸಂಜೆ ನಾಲ್ಕಕ್ಕೆ ದೊಡ್ಡ ಊರಾಗಿ ಸಿಕ್ಕಿದ ಬಿಲಾಸ್‍ಪುರದಲ್ಲಿ ಓಟ ಮುಗಿಸಿದ್ದೆವು. ತರಾತುರಿಯಿಂದ ಹೋಟೇಲ್ ಹಿಡಿದು, ಹೊರೆ ಇಳಿಸಿ, ಬೈಕುಗಳ ಸಮಗ್ರ ತನಿಖೆಗಾಗಿ ಹೀರೊಂಡಾ ಮಳಿಗೆಗೆ ಓಡಿದ್ದೆವು. ಆದರೆ

15 October 2020

ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ

(ಭಾರತ ಅ-ಪೂರ್ವ ಕರಾವಳಿಯೋಟ - ೧೧) 



ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ (ನೋಡಿ: ರಣಥೊಂಬರಾದ ಹುಲಿಗಳು). ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ, ಅವರು ‘ಇಂಡಿಯನ್ ಅಡ್ವೆಂಚರ್ಸ್’ ಎಂಬ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಪರಿಸರ ಮಾರ್ಗದರ್ಶಿ (ಗೈಡ್ ಅಲ್ಲ, ನ್ಯಾಚುರಲಿಸ್ಟ್). ೧೯೯೦ರ ನಮ್ಮ ಭಾರತ ಸೀಳೋಟಕ್ಕೆ ಅವರು ಚೆನ್ನಾಗಿಯೇ ಸೌಕರ್ಯಗಳ ವ್ಯವಸ್ಥೆ ಮಾಡಿದ್ದರು, ಸ್ವತಃ ನಿಂತು ನಿಭಾಯಿಸಲು ಅವಕಾಶ ಕಳೆದುಕೊಂಡಿದ್ದರು. ಈ ಬಾರಿ, "ನಾನು ಕಾನ್ಹಾ ವನಧಾಮದಲ್ಲೇ ಇದ್ದೇನೆ ಮತ್ತು ಸಮೀಪದ ಬಾಂಧವಘರ್‍ನಲ್ಲೂ ಏನು ಮಾಡಲು ಸಾಧ್ಯ ನೋಡ್ತೇನೆ..." ಎಂದೇ ಮುಂದಾಗಿಯೇ ಬರೆದಿದ್ದರು.

10 October 2020

ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ

(ಭಾರತ ಅ-ಪೂರ್ವ ಕರಾವಳಿಯೋಟ - ೧೦) 



ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ ಗಾಢವಾಗಿ ನಮಗೆ ಕುಟುಂಬದ ಸ್ನೇಹಿತರೂ ಹೌದು. ಅವರು ೧೯೯೫ರ ಸುಮಾರಿಗೆ ಯಾರಿಂದಲೋ ನನ್ನ ಪ್ರಥಮ ಭಾರತ ಯಾನದ ಸುದ್ದಿಯನ್ನು ಕೇಳಿದರಂತೆ. ಮುಂದುವರಿದು, ನಾನು ಎರಡನೇದಕ್ಕೆ ಸಜ್ಜುಗೊಳ್ಳುತ್ತಿರುವುದು ತಿಳಿದ ಕೂಡಲೇ ಅವರ ಸ್ವಭಾವಕ್ಕೆ ಭೂಷಣದಂತೇ ನನಗೆ ಖಡಕ್ ಸಂದೇಶ ಕಳಿಸಿದ್ದರು "...ಖಜುರಾಹೋ ಅವಶ್ಯ ನೋಡಿ..."! ಯೋಜನಾ ಹಂತದಲ್ಲಿ

06 October 2020

ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

(ಭಾರತ ಅ-ಪೂರ್ವ ಕರಾವಳಿಯೋಟ - ೯) 



ದೇವರು, ನಂಬಿಕೆಗಳ ಕುರಿತ ನನ್ನ ವೈಯಕ್ತಿಕ ನಿಲುವು ಎಂದೂ ನನ್ನ ವೃತ್ತಿಯ ಭಾಗವಾದ ಪುಸ್ತಕ ವೈವಿಧ್ಯದ ಸಂಗ್ರಹ ಮತ್ತು ಮಾರಾಟವನ್ನು ಪ್ರಭಾವಿಸಿದ್ದಿಲ್ಲ. (ಎಲ್ಲೂ ಇಲ್ಲದ್ದು ಅತ್ರಿಯಲ್ಲಿ ವಿಚಾರಿಸಿ!) ಹಾಗಾಗಿ ಮಠಾಧಿಪತಿಗಳೂ ಜ್ಯೋತಿಷ್ಯ ಮಾರ್ತಾಂಡರೂ ಸಕಲ ಧರ್ಮೀಯರೂ ಸಂಶಯಚಿತ್ತರೂ ನಾಸ್ತಿಕ ಪ್ರಚಂಡರೂ ನನ್ನಂಗಡಿಯನ್ನು ಪುಸ್ತಕಾಸಕ್ತಿಗಾಗಿ ಒಪ್ಪಿಕೊಳ್ಳುತ್ತಿದ್ದರು. ಮತ್ತೆ ಯಥಾಮಿತಿಯಲ್ಲಿ ನನ್ನೊಡನೆ ವಿಚಾರ ವಿನಿಮಯಿಸುವುದೂ ಇತ್ತು. ಅಂಥವರಲ್ಲಿ ಮಾಧವ ಭಟ್

03 October 2020

ನಲಂದಾ - ರಾಜಗಿರ್ ಮುಟ್ಟಿ, ಓಡು

(ಭಾರತ ಅ-ಪೂರ್ವ ಕರಾವಳಿಯೋಟ - ೮) 



ಎಂಟು ತಿಂಗಳ ಹಿಂದೆ ನಾನು ಅಭಯ ರೈಲೇರಿ ಕೊಯಂಬತ್ತೂರಿಗೆ ಹೋಗಿದ್ದೆವು. ಇಬ್ಬರಿಗೂ ಅಪರಿಚಿತ ನೆಲ. ಅಭಯ ಸಹಜವಾಗಿ ಕರದೊಳಿದ್ದ ‘ಮಾಯೆ’ಗೆ (ಚರವಾಣಿ) ನಾವಿಳಿದ ಪೋದನೂರು ಮತ್ತು ಹೋಗಬೇಕಾದ ‘ಶ್ರದ್ಧಾ ಟ್ರಾನ್ಸ್ಪೋರ್‍ಟ್’ ಮಂತ್ರಾನುಸಂಧಾನ ಮಾಡಿದ. ಮತ್ತೆ ನಮ್ಮ ೫ ಕಿಮೀ ನಡಿಗೆಯ ಉದ್ದಕ್ಕೂ ಮೇಲಿನ ಲೋಕದಿಂದ, ಭೂ ಲಕ್ಷಣಗಳ ಯಥಾಚಿತ್ರದೊಡನೆ ಅಶರೀರವಾಣಿಯ ನಿಖರ ಮಾರ್ಗದರ್ಶನವೇ ಸಿಕ್ಕಿತ್ತು. ಆದರೆ ಇಲ್ಲಿ ನಾನು

28 September 2020

ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್

(ಭಾರತ ಅ-ಪೂರ್ವ ಕರಾವಳಿಯೋಟ - ೭) 



ಕಾಲೇಜು ದಿನಗಳಿಂದ ನನ್ನ ದೊಡ್ಡ ಕನಸು - ಡಾರ್ಜಿಲಿಂಗ್ ಭೇಟಿ ಮತ್ತು ತೇನ್ ಸಿಂಗ್ ಶಿಷ್ಯತ್ವ ಗಳಿಕೆ. ಸಿಕ್ಕ ಮೊದಲ ಅವಕಾಶ - ೧೯೭೧ರ ಅಸ್ಸಾಂ ಭೇಟಿ, ನಾನು ಮಿಂಚು ನೋಟಕ್ಕಾದರೂ ಡಾರ್ಜಿಲಿಂಗ್ ಎಂದು ತಿಣುಕಿದ್ದೆಲ್ಲ ನಿಮಗೆ ತಿಳಿದೇ ಇದೆ (ನೋಡಿ: ೫. ಮತ್ತೆ ಮತ್ತೆ ನಾಯಕತ್ವದ ಪ್ರಶ್ನೆ). ಹಾಗಾಗಿ ಪ್ರಸ್ತುತ ಸಾಹಸಯಾನ ಯೋಜಿಸುವಂದು, ತೇನ್‍ಸಿಂಗ್ ಇಲ್ಲದ ಡಾರ್ಜಿಲಿಂಗಿನಲ್ಲಿ ಒಂದು ರಾತ್ರಿಗಾದರೂ ನಿಂತು, ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬೇಕೆಂದು ನಿಶ್ಚೈಸಿದ್ದೆ. ಅದಕ್ಕನುಕೂಲ ಆರಂಭ ಬಿಂದುವಾಗಿ ನಮಗೊದಗಿದ್ದು ಸುಖ್ನಾ

25 September 2020

ಗಂಗಾ ಪಾತ್ರೆಯಲ್ಲಿ ಸ್ವಲ್ಪ ಉದ್ದಕ್ಕೆ...

(ಭಾರತ ಅ-ಪೂರ್ವ ಕರಾವಳಿಯೋಟ - ೬) 



‘ಆಸೇತು ಹಿಮಾಚಲ’ ಎನ್ನುವಲ್ಲಿ ಭಾರತದ ಉದ್ದ ಸ್ಪಷ್ಟ ಇದೆ. ಬಹುತೇಕ ಆ ‘ಸೇತು’ವಿನ (ದಕ್ಷಿಣ ಕೊನೆಯ ರಾಮಸೇತು) ಸಮೀಪವೇ ಇರುವ ನಾವು ಭಾರತಯಾನ ಎಂದೇ ಯೋಜಿಸುವಾಗ, ಹಿಮಾಲಯ ಮುಟ್ಟದೇ ಪರಿಪೂರ್ಣವಲ್ಲ ಎಂಬ ಭಾವವೂ ಸೇರಿತ್ತು. ಹಾಗಾಗಿ ಮೊದಲ ಹಂತದಲ್ಲಿ ಯೋಜನೆಯಂತೇ ರೈಲ್ವೇ, ನಗರದರ್ಶನ, ದೋಣಿಯಾನ ಎಂದೆಲ್ಲ ಎಂಟು ದಿನ ಸಂದರೂ ಆ ಬೆಳಿಗ್ಗೆ (೨೨-೪-೯೬) ನಿಜದ ಬೈಕ್ ಯಾನ ಮತ್ತು ‘ಹಿಮಾಚಲ’ ಮುಟ್ಟಲು ಹೊರಟಿದ್ದೆವು. 

17 September 2020

ಸುಂದರಬನದ ಕೂಳು ಭಕ್ಷಕರು!

ಭಾರತ ಅ-ಪೂರ್ವ ಕರಾವಳಿಯೋಟ - ೫



ವನಧಾಮಗಳ ವಿಚಾರ ಬರುತ್ತಿದ್ದಂತೆ ನನಗೆ ಮೊದಲು ಹೊಳೆಯುವ ಹೆಸರು - ವನ್ಯ ವಿಜ್ಞಾನಿ ಗೆಳೆಯ, ಉಲ್ಲಾಸ ಕಾರಂತ. ಅ-ಪೂರ್ವ ಕರಾವಳಿಯೋಟದ ಯೋಜನಾ ಹಂತದಲ್ಲೇ ನಾನವರನ್ನು ಸಂಪರ್ಕಿಸಿದ್ದೆ. ಭಾರತದ ವಿವಿಧ ವನಧಾಮಗಳಲ್ಲಿ ಅವರಿಗಿದ್ದ ವಿಸ್ತೃತ ಪರಿಚಯ ಬಲದಲ್ಲಿ ನನಗೆ ನಾಲ್ಕೆಂಟು ಪರಿಚಯ ಪತ್ರಗಳನ್ನೂ ಧಾರಾಳ ಸಲಹೆಗಳನ್ನೂ ನೀಡಿದ್ದರು. ಅದರಲ್ಲೂ ಭಾರತದ ಪ್ರಥಮ ‘ಟೈಗರ್ ಪ್ರಾಜೆಕ್ಟ್’ ತಾಣವೆಂದೇ ಖ್ಯಾತವಾದ ಸುಂದರಬನದಲ್ಲಿ ಹೆಚ್ಚಿನ

ಕಲ್ಕತ್ತಾ ದರ್ಶನ

(ಭಾರತ ಅ-ಪೂರ್ವ ಕರಾವಳಿಯೋಟ - ೪) 



ಈಶ್ವರಚಂದ್ರ ವಿದ್ಯಾ ಸಾಗರ ಸೇತುವೆ ಅಥವಾ ವಿದ್ಯಾಸಾಗರ್ ಸೇತು, ಹದಿಮೂರು ವರ್ಷಗಳ ನಿರ್ಮಾಣ ಸಮಯ ನುಂಗಿ ೧೯೯೨ರಲ್ಲಿ ಲೋಕಾರ್ಪಣೆಗೊಂಡಿತು. ಆದರೆ ಅದರ ಉತ್ತರೋತ್ತರ ಕೆಲಸಗಳು ನಾವು ಕಲ್ಕತ್ತಾಕ್ಕೆ ಹೋದಂದೂ ಪೂರ್ಣಗೊಂಡಿರಲಿಲ್ಲ. ಅಂದರೆ, ಎರಡೂ ದಂಡೆಗಳ ವಿವಿಧ ದಾರಿಗಳನ್ನು ತಡೆರಹಿತವಾಗಿ ಸೇರಿಕೊಳ್ಳುವ ಮೇಲು ಸೇತುವೆಗಳ ಜಾಲ ಮತ್ತು ವಾಹನ ಸಂಚಾರದ ಪ್ರಮುಖಧಾರೆಯನ್ನು ಇತ್ತ ಹರಿಬಿಡುವ ಕೆಲಸಗಳು

ಮೆಟ್ರೋದಲ್ಲಿ ಕಾಣೆಯಾದ ಮೂವರು!

(ಭಾರತ ಅ-ಪೂರ್ವ ಕರಾವಳಿಯೋಟ - ೩) 



ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು. ಮತ್ತೆ ನಿರ್ವಿಘ್ನವಾಗಿ.... 

ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ.

ರೈಲ್ವೇಯಲ್ಲಿ ಪ್ರಭಾವ, ವಿಭಾವಗಳು


(ಭಾರತ ಅ-ಪೂರ್ವ ಕರಾವಳಿಯೋಟ - ೨) 

೧೯೯೬ರ ಏಪ್ರಿಲ್ ಹದಿನಾಲ್ಕರಂದು ಮೋಟಾರ್ ಬೈಕ್ ಏರದೇ ನಮ್ಮ ಬೈಕ್ ಮಹಾಯಾನ ಮೊದಲ್ಗೊಂಡಿತ್ತು. ಅಂದು ಬೆಳಿಗ್ಗೆ ಕಿಶೋರ್ ಮತ್ತು ನಾನು ಬೈಕುಗಳನ್ನು ಮಂಗಳೂರು ರೈಲ್ವೇ ನಿಲ್ದಾಣಕ್ಕೊಯ್ದು ಗೆಳೆಯ ಕಿಶನ್ ಬಂಗೇರಾರ (ಇವರು ನಿಲ್ದಾಣದ ಸ್ವಾಗತಕಾರ) ಸಹಾಯಕರಿಗೊಪ್ಪಿಸಿದೆವು. ಬೈಕ್ ಯಾನದ ನಾಲ್ವರ ರೈಲ್ವೇ ಪ್ರಯಾಣದ ಟಿಕೇಟ್ ಒಟ್ಟು ರೂ. ೧೪೨೦/-ಶುಲ್ಕ ಕೊಟ್ಟು (ಮೂರು ಅಟ್ಟಳಿಗೆ ಮಲಗು ಸೌಕರ್ಯದ ಮೂರನೇ ದರ್ಜೆ ಡಬ್ಬಿ) ತಿಂಗಳ ಮುಂಚೆಯೇ ಕಾಯ್ದಿರಿಸಿದ್ದಾಗಿತ್ತು. ಈಗ ಬೈಕುಗಳಿಗೆ ‘ಪ್ಯಾಕಿಂಗ್’ ಶಾಸ್ತ್ರ ಮಾಡಿಸಿ, ಪ್ರಯಾಣದ ಟಿಕೆಟ್ಟಿಗೆ

ನವ ಭಾರತಾಹವಕ್ಕೆ ಅನ್ಯೋದ್ಯೋಗ ಪರ್ವ!


(ಭಾರತ ಅ-ಪೂರ್ವ ಕರಾವಳಿಯೋಟ - ೧) 


೧೯೯೦ರ ಪ್ರಾಕೃತಿಕ ಭಾರತ ಸೀಳೋಟ ಎರಡು ವರ್ಷ ಹಳತಾಗುತ್ತಿದ್ದಂತೆ ತಲೆಯೊಳಗೆ ಇನ್ನೊಂದೇ ಸಾಹಸಯಾನ ಮೊಳಕೆಯೊಡೆದಿತ್ತು. ಹಿಂದಿನಂತೆ ವ್ಯಾಪಾರ ಕಡಿಮೆಯಿರುವ ಬೇಸಗೆ ಕಾಲ, ಮತ್ತೆ ತಿಂಗಳ ಕಾಲ ಅಂಗಡಿ, ಮನೆ ಮತ್ತು ಮಗನ ನಿರ್ವಹಣೆಗೆ ತಂದೆ ತಾಯಿಯರಲ್ಲಿ ಬೇಡಿಕೆ ಇಡುವವನಿದ್ದೆ. ಅಷ್ಟರಲ್ಲಿ ನನ್ನ ಅಮೆರಿಕನ್ನಡಿಗ ತಮ್ಮ - ಆನಂದನಿಂದ, ಅವರಿಬ್ಬರಿಗೆ ಮಾಮೂಲೀ ಕರೆ - "ನಮ್ಮಲ್ಲಿಗೆ ಒಮ್ಮೆಯಾದರೂ ಬನ್ನಿ" ಹೊಸ ಭಾರೀ ಆಮಿಷದೊಡನೆ ಬಂದಿತ್ತು. "ಪ್ರಯಾಣ ನನ್ನ ಎರಡನೇ ವೈರಿ (ದೇವರು ಮೊದಲನೇ ವೈರಿ)" ಎಂದೇ ಸಾರುತ್ತಿದ್ದ ತಂದೆಗೆ ನಿರಾಕರಿಸಲಾಗದ ಆಮಿಷ - ಎಸ್. ಚಂದ್ರಶೇಖರ್ ಭೇಟಿ.