ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ ನಲ್ವತ್ತಕ್ಕೂ ಮಿಕ್ಕು ವರ್ಷಗಳ ವೃತ್ತಿ ಹಾಗೂ ವಾಸದ ಬಲದಲ್ಲಿ ನಾನು ನಿಸ್ಸಂದೇಹವಾಗಿ ಮಂಗಳೂರಿಗ. ಆದರೂ ನನ್ನ ಮೂಲ ಕುಟುಂಬ ಮೈಸೂರಿನಲ್ಲಿ ಖಾಯಂ ನೆಲೆ ನಿಂತದ್ದರಿಂದ ನನ್ನ
ಜೀವನದಲ್ಲಿ ಅದಕ್ಕೆ ಮಹತ್ವ ಹೆಚ್ಚು. ಪ್ರಾಸಂಗಿಕವಾಗಿ ಮೈಸೂರು ನನಗೆ ಶೈಕ್ಷಣಿಕ ಉನ್ನತಿಯನ್ನು ಮಹಾರಾಜ ಕಾಲೇಜು ಹಾಗೂ ಮಾನಸಗಂಗೋತ್ರಿಯಲ್ಲಿ ಒದಗಿಸಿತು. ಇಲ್ಲೇ ಎನ್ಸಿಸಿ ಮತ್ತು ದಖ್ಖಣ ಪರ್ವತಾರೋಹಣ ಸಂಸ್ಥೆಯ ಹವ್ಯಾಸೀ ಚಟುವಟಿಕೆಗಳು ನನ್ನ ಮನೋಭೂಮಿಕೆಯನ್ನು ವೃತ್ತಿ ಸಾಹಸಕ್ಕೆ ಸಜ್ಜುಗೊಳಿಸಿದವು. ಎಲ್ಲಕ್ಕೂ ಮುಖ್ಯವಾಗಿ ತನ್ನ ಸಮೃದ್ಧ ಮತ್ತು ಸಹಜ ಪುಸ್ತಕ ಸಂಸ್ಕೃತಿಯಿಂದ, ನನ್ನ ವೃತ್ತಿಜೀವನಕ್ಕೆ ದೃಢ ಉಡ್ಡಯನ ಕೇಂದ್ರವಾಗಿ ನಿಂತದ್ದು ಮೈಸೂರು.
ಜೀವನದಲ್ಲಿ ಅದಕ್ಕೆ ಮಹತ್ವ ಹೆಚ್ಚು. ಪ್ರಾಸಂಗಿಕವಾಗಿ ಮೈಸೂರು ನನಗೆ ಶೈಕ್ಷಣಿಕ ಉನ್ನತಿಯನ್ನು ಮಹಾರಾಜ ಕಾಲೇಜು ಹಾಗೂ ಮಾನಸಗಂಗೋತ್ರಿಯಲ್ಲಿ ಒದಗಿಸಿತು. ಇಲ್ಲೇ ಎನ್ಸಿಸಿ ಮತ್ತು ದಖ್ಖಣ ಪರ್ವತಾರೋಹಣ ಸಂಸ್ಥೆಯ ಹವ್ಯಾಸೀ ಚಟುವಟಿಕೆಗಳು ನನ್ನ ಮನೋಭೂಮಿಕೆಯನ್ನು ವೃತ್ತಿ ಸಾಹಸಕ್ಕೆ ಸಜ್ಜುಗೊಳಿಸಿದವು. ಎಲ್ಲಕ್ಕೂ ಮುಖ್ಯವಾಗಿ ತನ್ನ ಸಮೃದ್ಧ ಮತ್ತು ಸಹಜ ಪುಸ್ತಕ ಸಂಸ್ಕೃತಿಯಿಂದ, ನನ್ನ ವೃತ್ತಿಜೀವನಕ್ಕೆ ದೃಢ ಉಡ್ಡಯನ ಕೇಂದ್ರವಾಗಿ ನಿಂತದ್ದು ಮೈಸೂರು.
