(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ)
ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ ಕುತೂಹಲವಿರುತ್ತಿತ್ತು, ಆದರೆ ನನ್ನ ವೃತ್ತಿಯ ಸಮಯಮಿತಿಯಲ್ಲಿ ಪ್ರಾಕೃತಿಕ ಸತ್ಯಗಳನ್ನು ಮೀರಿದ ಇನ್ಯಾವುದರಲ್ಲೂ ತೊಡಗಿಕೊಳ್ಳಲು ನನಗೆ ಕಷ್ಟವೇ ಆಗುತ್ತಿತ್ತು; ಖಂಡಿತಕ್ಕೂ ತಿರಸ್ಕಾರವಿರಲಿಲ್ಲ. ಹಾಗೆ ಉಪಯುಕ್ತತೆಯನ್ನಷ್ಟೇ ಲೆಕ್ಕ ಹಾಕಿ ಉಳಿದುಕೊಂಡ ಸಂಬಂಧಗಳು ಮಾತ್ರ ಬಹುತೇಕ ಗಾಢವಾಗಿರುತ್ತಿತ್ತು. ಅಂಥಾ ಸಂಬಂಧಗಳಲ್ಲಿ ಅಮೆದಿಕ್ಕೆಲ್ ನೆಪದಿಂದ ಒದಗಿದ ನೆರಿಯ ಹೆಬ್ಬಾರರ ಕುಟುಂಬದ ಪರಿಚಯ, ನನಗೆ ಹೆಚ್ಚು ಸ್ಮರಣೀಯವಾಗಿರುವುದು ವನ್ಯಬಂಧದಿಂದ.
ನಾನು ಸುಮಾರು ೧೯೭೪ರಿಂದ ೧೯೮೫ರವರೆಗೆ, ಅಂದರೆ ನನ್ನ ಮಂಗಳೂರು ವಾಸದ ಮೊದಲ ದಿನಗಳಲ್ಲಿ ಕೇವಲ ಸಾಹಸ ಚಟುವಟಿಕೆಗಳ ತೋರಗಾಣ್ಕೆಯ ದಿನಚರಿ ಪುಸ್ತಕವನ್ನೇ ಇಟ್ಟಿದ್ದೆ. ಅದು ಡೈರಿಯೊಂದರಲ್ಲಿ ಯಾವ ಔಪಚಾರಿಕ ಅಂಚುಗಳನ್ನೂ ಉಳಿಸದೆ ಒತ್ತೊತ್ತಾಗಿ ತುಂಬಿದ, ಕೇವಲ ಟಿಪ್ಪಣಿ ರೂಪದ ದಾಖಲೆಯಾದರೂ ಸುಮಾರು ಎಪ್ಪತ್ತು ಪುಟಗಳಷ್ಟಿದೆ. ಮುಂದೆ, ಅಂದರೆ ಸುಮಾರು ೧೯೮೫ರಿಂದ ೨೦೦೦ದವರೆಗೆ ನನ್ನದೇ ನಕ್ಷೆಯೊಡನೆ ಅಂಕಿಸಂಕಿಗಳಕಾರ್ಡುಗಳನ್ನು ಮಾಡುತ್ತ ಬಂದೆ.
ನಾನು ಸುಮಾರು ೧೯೭೪ರಿಂದ ೧೯೮೫ರವರೆಗೆ, ಅಂದರೆ ನನ್ನ ಮಂಗಳೂರು ವಾಸದ ಮೊದಲ ದಿನಗಳಲ್ಲಿ ಕೇವಲ ಸಾಹಸ ಚಟುವಟಿಕೆಗಳ ತೋರಗಾಣ್ಕೆಯ ದಿನಚರಿ ಪುಸ್ತಕವನ್ನೇ ಇಟ್ಟಿದ್ದೆ. ಅದು ಡೈರಿಯೊಂದರಲ್ಲಿ ಯಾವ ಔಪಚಾರಿಕ ಅಂಚುಗಳನ್ನೂ ಉಳಿಸದೆ ಒತ್ತೊತ್ತಾಗಿ ತುಂಬಿದ, ಕೇವಲ ಟಿಪ್ಪಣಿ ರೂಪದ ದಾಖಲೆಯಾದರೂ ಸುಮಾರು ಎಪ್ಪತ್ತು ಪುಟಗಳಷ್ಟಿದೆ. ಮುಂದೆ, ಅಂದರೆ ಸುಮಾರು ೧೯೮೫ರಿಂದ ೨೦೦೦ದವರೆಗೆ ನನ್ನದೇ ನಕ್ಷೆಯೊಡನೆ ಅಂಕಿಸಂಕಿಗಳಕಾರ್ಡುಗಳನ್ನು ಮಾಡುತ್ತ ಬಂದೆ.

