Showing posts with label ಪರಿಸರ ಸಂರಕ್ಷಣೆ. Show all posts
Showing posts with label ಪರಿಸರ ಸಂರಕ್ಷಣೆ. Show all posts

15 May 2019

ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ....


ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ "ಶೆರಿ, ಶಿರಿಯಾಕ್ಕೆ ಶಲೋ..." ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ ಮುಗಿಸಿದ ಹೊಸತರಲ್ಲಿ, ನಾನು ಅಂತರ್ಜಾಲದಲ್ಲಿ (ಗೂಗಲಿಸಿ) ಹುಡುಕಾಡಿದಾಗ, ಕುತೂಹಲ ಮೂಡಿಸಿತ್ತು ಈ ಶಿರಿಯಾ ಹೊಳೆ. ಮಂಗಳೂರು - ಕಾಸರಗೋಡು ದಾರಿಯನ್ನು ಬಂದ್ಯೋಡಿನಿಂದ ತುಸು ಮುಂದೆ, ಪೂರ್ವ- ಉತ್ತರದಿಂದ ಇಳಿದು, ಅಡ್ಡ ಹಾಯುವ ತೋರ ನೀಲಿ ರೇಖೆಯಿದು. ಮತ್ತೆ ಒತ್ತಿನಲ್ಲೇ ಹರಿಯುವ ರೈಲ್ವೇ ದಾರಿಯನ್ನು ದಾಟಿ, ಸ್ಪಷ್ಟ ದಕ್ಷಿಣ ತಿರುವು ತೆಗೆಯುತ್ತದೆ. ಅಲ್ಲಿ ಎಡ ಮಗ್ಗುಲಿನಲ್ಲೊಂದು ಸಣ್ಣ ಭೂಭಾಗ ಕತ್ತರಿಸಿಟ್ಟು (ಶಿರಿಯಾ ಪಾರ್ಕ್ ಎಂಬ ಕುದುರು, ಅರ್ಥಾತ್ ನದಿ ದ್ವೀಪ), ಬಲ ಹೊರಳಿ ಸಮುದ್ರ ಸೇರುತ್ತದೆ.
ಆದರೆ ಅದೇನು ಭೂ ರಚನಾ ಚೋದ್ಯವೋ - ನೀಲ ಹರಹು ಮಾತ್ರ ಅತ್ತ ಸಮುದ್ರಕ್ಕೊಂದು ಕಂದು ಮರಳರೇಖೆ ಇಟ್ಟು ಸಮಾಂತರದಲ್ಲಿ, ಸುಮಾರು ಐದು ಕಿಮೀ ಉದ್ದಕ್ಕೆ, ಅಂದರೆ ಕುಂಬ್ಳೆಯವರೆಗೂ ವ್ಯಾಪಿಸಿರುವುದು ಕಾಣುತ್ತಿತ್ತು. 

ಹೊಳೆಗೆ ನಮ್ಮ ದೋಣಿ ಇಳಿಸುವುದೆಲ್ಲಿ, ಸುತ್ತುವ ಪರಿಸರ ಎಂತದ್ದು ಎಂಬಿತ್ಯಾದಿ ಮುನ್ನೋಟಕ್ಕಾಗಿ, ಮಾರಣೇ ದಿನವೇ ಸಂಜೆ ಬೈಕಿನಲ್ಲಿ ದೇವಕಿಯನ್ನು ಬೆನ್ನಿಗೆ ಹಾಕಿಕೊಂಡು ಹೋಗಿದ್ದೆ. ಮಂಗಳೂರಿನಿಂದ ಸುಮಾರು ಮೂವತ್ಮೂರು

30 April 2019

ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ


‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ ಇಳಿಯುವುದನ್ನೇ ಕಾದಿದ್ದಂತೆ, ಮೂಡಿಗೆರೆ ಬಸ್ ನಮ್ಮನ್ನು ತುಂಬಿಕೊಂಡಿತು. ಐದೂಮುಕ್ಕಾಲಕ್ಕೆ ರಕ್ಷಿದಿಯಲ್ಲಿದ್ದೆವು. ನಾಟಕ ಒಂಬತ್ತೂಕಾಲರ ಅಂದಾಜಿಗೆ ಮುಗಿದಿತ್ತು. ಮತ್ತೆ ಪ್ರಸಾದರ ಕೃಪೆಯಲ್ಲಿ ಸಕಲೇಶಪುರ, ಬಸ್ಸಿಡಿದು ಅಪರಾತ್ರಿಯಲ್ಲೇ ಮಂಗಳೂರಿಗೆ ಮರಳಿದ್ದೆವು. ಪ್ರತಿಯಾಗಿ ನಾನು ಪ್ರಸಾದರಿಗೆ ಕಳಿಸಿದ ಕೃತಜ್ಞತಾ ಸಂದೇಶದ ಭರತ ವಾಕ್ಯ ಹೀಗಿತ್ತು - ‘ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ಒಂದು ನಾಟಕವೇ ಅಲ್ಲ!’

04 February 2019

ಪರಿಸರ ವರ್ತಮಾನದ ತಲ್ಲಣಗಳು

[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಆಕಾಶವಾಣಿ ಮಂಗಳೂರು ಜಂಟಿಯಾಗಿ ಆಯೋಜಿಸಿ ಸಂತ ಏಗ್ನೆಸ್ ಕಾಲೇಜಿನಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ, ನಾನು ಮಂಡಿಸಿದ ಆಶಯ ಭಾಷಣ.] 

ಮಿತ್ರರೇ 

ನಾನು ಔಪಚಾರಿಕ ಭಾಷಣಕಾರನಲ್ಲ. ಮತ್ತೆ ಸ್ವಂತ ಅನುಭವಕ್ಕೆ ದಕ್ಕದೇ ಇರುವುದರ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಕೊರೆಯುವುದು ನನಗೆ ಒಗ್ಗುವುದೂ ಇಲ್ಲ. ಹಾಗಾಗಿ ನೂರೆಂಟು ವಿಚಾರಗಳ ಕಾಡಿನಲ್ಲಿ, ಇಂದಿನ ಗುರಿ ಕಳೆದುಹೋಗದಂತೆ ಬರೆದು ತಂದದ್ದನ್ನೇ ಆದಷ್ಟೂ ನಿಧಾನಕ್ಕೆ ಓದುತ್ತೇನೆ. 

01 October 2018

ಫಲ್ಗುಣಿ - ಒಂದು ನದಿಯ ಅವಹೇಳನ ದರ್ಶನ


ಮಂಗಳೂರಿನ ನಾವು ನಾಲ್ಕೈದು ದೋಣಿಮಿತ್ರರು ಮಳೆಗಾಲ ತಗ್ಗುವುದನ್ನು ಕಾದಿದ್ದೆವು. ನಾವಿನ್ನೂ ಕಡಲಿಗಿಳಿಯುವ ಕಲಿಗಳಲ್ಲ, ನದಿಗಳಲ್ಲೂ ಮಳೆಗಾಲದ ಸೆಳವು, ಸೆಡೆತಗಳೊಡನೆ ಸೆಣಸುವ ಸಾಹಸಿಗಳೂ ಅಲ್ಲ. ಸಣ್ಣದಕ್ಕೆ ಬಡಕಲು ಫಲ್ಗುಣಿ ನದಿಯನ್ನು ಆಯ್ದುಕೊಂಡೆವು. ಸುಲ್ತಾನ್ ಬತೇರಿಯಿಂದ ಕೂಳೂರು, (ಸ್ವಚ್ಛಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?) ಕೂಳೂರಿನಿಂದ ಮೇಲಿನೊಂದು ಕುದ್ರುವಿನವರೆಗೆ (ಫಲ್ಗುಣಿಯ ಮೇಲೊಂದು ಪಲುಕು) ಎರಡು ಕಂತು ದೋಣಿಯಾನ ಹಿಂದೆ ಮಾಡಿದ್ದೆವು. ಆ ಸರಣಿಯನ್ನೇ
ಈ ಬಾರಿ (೧೬-೯-೧೮) ಮುಂದುವರಿಸುವ ಹೊಳಹು ನಮ್ಮದು. ಆದರೆ ಅದಕ್ಕಿದ್ದ ಸಣ್ಣ ಅಡ್ಡಿ ಮಳವೂರು ಕಟ್ಟೆ. ಕಟ್ಟೆಯ ತೂಬುಗಳಿಗೆ ಹಲಿಗೆ ಇಳಿಸಿದ್ದರೆ ತೇಲಿ ಸಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ. ಈಗ ಅದು ಮುಚ್ಚಿರದಿದ್ದರೂ ಕಂಡಿಗಳಲ್ಲಿನ ಹರಿವಿನ ವಿರುದ್ಧ ನಮ್ಮ ರಟ್ಟೆಬಲ ಪರೀಕ್ಷಿಸಲು ಧೈರ್ಯವಿರಲಿಲ್ಲ. ಹಾಗಾಗಿ ಅದರಿಂದಲೂ ತುಸು ಮೇಲೆಯೇ ನಮ್ಮ ದೋಣಿಗಳನ್ನು ನೀರಿಗಿಳಿಸಿ, ಮೇಲ್ಮುಖವಾಗಿ ಸಾಗಬೇಕು. ಗುರುಪುರ ಮತ್ತು ಪೊಳಲಿ ಸೇತುವೆಗಳನ್ನು ದಾಟಿ, ಮೂಲರಪಟ್ನದ ಕುಸಿದ ಸೇತುವೆಗೆ ಮುಗಿಸಬೇಕು.

09 September 2018

ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?


ಕೇರಳ, ಕೊಡಗುಗಳಲ್ಲಿ ಜನ, ಸೊತ್ತುಗಳ ಮೇಲೆ ಮಳೆಗಾಲ ಬೀರಿದ ದುಷ್ಪ್ರಭಾವ ದೊಡ್ಡ ಸುದ್ದಿ ನಿಜ, ಯುದ್ಧಸ್ತರದಲ್ಲಿ ಕೆಲಸವಾಗಬೇಕಾದ್ದೂ ಸರಿ. ಆದರೆ ಇದು ಇಂಥದ್ದೇ ಅನ್ಯ ಪ್ರಾಕೃತಿಕ ಅನಾಹುತಗಳಿಗೊಂದು ತಾರ್ಕಿಕ ಕೊನೆ ಕೊಡದುಳಿಯಲು, ರಕ್ಷಣೆ ಪರಿಹಾರ ಕಾರ್ಯಗಳ ಕುರಿತು, ಮುಖ್ಯವಾಗಿ ಆಡಳಿತ ಮತ್ತು ಮಾಧ್ಯಮಗಳು ಮರೆತುಬಿಡುವುದು ತಪ್ಪು. ಹಾಗಾಗಿಯೇ ನಾನು ‘ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ’ ಮೊದಲ ಪ್ರಾಶಸ್ತ್ಯದಲ್ಲಿ ನೋಡಿ ಬಂದೆ, ತಿಳಿದಷ್ಟು ಬರೆದೆ. ಮತ್ತೂ ತಲೆಯಲ್ಲಿ
ಕೊರೆಯುತ್ತಲೇ ಉಳಿದಿತ್ತು, ತುಸು ಹಿಂದಿನ ಇನ್ನೊಂದು ಸಮಸ್ಯೆ - ಮೂಸೋಡಿಯದ್ದು. 
ಮೂಸೋಡಿ - ಎಲ್ಲಿ, ಏನು: ‘ಪಡ್ಡಾಯಿ’ ಚಿತ್ರೀಕರಣದ ಅಗತ್ಯಕ್ಕೆ ಕಡಲ ಕೊರೆತಕ್ಕೀಡಾದ ಮನೆಗಳನ್ನು ಹುಡುಕಿ ಅಭಯ, ನಾನು ಕಳೆದ ವರ್ಷ ಓಡಾಡಿದ್ದು, ಮೂಸೋಡಿ ಸಿಕ್ಕಿದ್ದು ನಿಮಗೆಲ್ಲ ತಿಳಿದೇ ಇದೆ (ಇಲ್ಲದವರು ಅವಶ್ಯ ಓದಿ : ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು. ಮೂಸೋಡಿಯಲ್ಲಿ ಅಂದು ಉಳಿದಂತೆ ಕಾಣುತ್ತಿದ್ದದ್ದು ಹಮೀದರ ಒಂದೇ ಮನೆ. ಅದೂ ಬಿದ್ದು

11 August 2018

ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!


ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು "ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!" ಎಂದು ಈ ಸೇತು ಕೊಟ್ಟರು: 

ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ "ಅಯ್ಯೋ ಇದು ನಮ್ಮ ಉಚ್ಚಿಲ ಬಟಪಾಡಿಯ ತ್ರಿವೇಣೀ!"

14 May 2018

ಮೂಸೋಡೀ ರಕ್ಷಣೆ ?

"ಕೌಟುಂಬಿಕ ಕಲಾಪಗಳಲ್ಲಿ ಪುತ್ತೂರು, ಕೊಣನೂರು, ಬೆಂಗಳೂರು ಎಂದೆಲ್ಲಾ ಓಡಾಡಿ ಓಡಾಡೀ ನನ್ನನ್ನು ಮರೆತದ್ದಾ?" ಕೇಳಿತು ಸೈಕಲ್. "ಮರೆಯಲಾಗದ್ದು ಮತ್ತು ಮರೆಯಬಾರದ್ದೂ ತುಂಬಾ ಇದೆ" ಎಂದು ಅದನ್ನು ಸಮಾಧಾನಿಸುತ್ತ, ಇಂದು ಬೆಳಿಗ್ಗೆಯೇ ಸವಾರಿ ಹೊರಟೆ. ಆ ಮರೆಯಬಾರದ ವಿಚಾರ - ಕಳೆದ ತಿಂಗಳು ಬಂದ ಉಬ್ಬರದ ಅಲೆಗಳಿಂದ, ಈಗ ಬರುತ್ತಿರುವ ಅಕಾಲಿಕ ಮಳೆಯಿಂದ ಮೂಸೋಡಿಯ ರಶೀದ್ ಮನೆ ಏನಾಗಿರಬಹುದು, ಒಂದನ್ನೇ ಧ್ಯಾನಿಸುತ್ತ ಕಾಸರಗೋಡಿನತ್ತ ಪೆಡಲಿದೆ. ನಿನ್ನೆ ಸಂಜೆಯ

01 May 2018

ಫಲ್ಗುಣಿಯ ಮೇಲೊಂದು ಪಲುಕು.....


ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ "ಅದರ ಬಳಕೆ ಮಾತ್ರ ಕಡಿಮೆ" ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ  ‘ಆದಿತ್ಯವಾರ (೨೯-೪-೧೮) ಕೂಳೂರು - ಮರವೂರು’ ಕರೆ ಕೊಟ್ಟೆ. ನಾನು ಕಂಡಂತೆ ಸೈಕಲ್ ಮೆಟ್ಟುವ ಹವ್ಯಾಸ/ಕ್ರೀಡೆ/ವ್ಯಾಯಾಮ ಈ ವಲಯದಲ್ಲಿ ಕಾಡಬೆಂಕಿಯಂತೆ, ಬಹಳ
ವೇಗದಿಂದ ಹಬ್ಬಿಕೊಂಡಿತು. ನಿತ್ಯ ಓಡಾಡಿದ್ದೇ ಗಬ್ಬೆದ್ದ ದಾರಿ, ಅಶಿಸ್ತಿನ ಇತರ ವಾಹನ ಸಮ್ಮರ್ದ, ಪ.ಘಟ್ಟಗಳ ತಪ್ಪಲಾದ್ದರಿಂದ ವಿಪರೀತ ಏರಿಳುಕಲು, ರಣಗುಡುವ ಬಿಸಿಲು, ಭೋರ್ಗರೆವ ಮಳೆ ಎಲ್ಲವನ್ನೂ ಸುಧಾರಿಸಿಕೊಂಡು, ಲಕ್ಷದ ಮೇಲಿನ ಹಣ ಹಾಕಿಯೂ ಸೈಕಲ್ಲಿಗರು ಹೆಚ್ಚಿದರು. ಇದು ಖಂಡಿತವಾಗಿಯೂ ಸಂತೋಷದ ವಿಚಾರ. ಆದರೆ ಅಸಂಖ್ಯ ನದಿ, ಹಿನ್ನೀರ ಹರಹು, ಸಾಕ್ಷಾತ್ ಅರಬ್ಬೀ ಸಮುದ್ರವೇ ನಮ್ಮಲ್ಲಿದೆ. ಇವೆಲ್ಲವೂ ಪರಿಚಯಿಸುವ ಪ್ರಾಕೃತಿಕ ಲೋಕ ಅಸಾಧಾರಣ, ನಿತ್ಯ

28 April 2018

ತುಳುಕಿದ ಸಾಗರ ಮತ್ತು ಅಂಚಿನ ನರಹುಳು

ಬೆಳಗ್ಗೆ ಪತ್ರಿಕೆ ನೋಡಿದ್ದೇ ಉಚ್ಚಿಲದತ್ತ ಸೈಕಲ್ಲೋಡಿಸಿದೆ (೨೩-೪-೧೮ ಸೈಕಲ್ ಸರ್ಕೀಟ್ ೪೦೧). ಭೂಕಂಪ, ಮಳೆ, ಚಂಡಮಾರುತಗಳ ಪ್ರಭಾವವಿಲ್ಲದೆಯೂ ಸಾಗರಬೋಗುಣಿ ಯಾಕೋ ತುಸು ಅಂಡು ಕುಸುಕಿತ್ತು. ಪರಿಣಾಮವಾಗಿ ಎರಡು ಆವರ್ತಗಳಲ್ಲಿ ತುಳುಕಿದ ಕಡಲು ಎಂದಿನಂತಲ್ಲದೆ ಈ ವಲಯದ ಮೀನುಗಾರಿಕಾ ದಾರಿಯವರೆಗೂ ನೆಲ ನೆಕ್ಕಿತ್ತು. ಆ ಅಗಾಧತೆಯ ಸ್ಪರ್ಷವೂ ಹುಲುಮಾನವ(ಅ?)ವ್ಯವಸ್ಥೆಗೆ ಕುಸಿಯುವ ಅನುಭವವನ್ನೇ ತರುತ್ತದೆ ಎನ್ನುವುದನ್ನು ಕೆಲವು ಕಡೆಗಳಲ್ಲಿ ಕಂಡೆ. ಬಟಪಾಡಿ
ಭೂಶಿರದಲ್ಲಿ ನಾಗರಿಕ ಹಾಳಮೂಳ ಪೇರಿಸಿ ‘ನಾವು’ ಎತ್ತರಿಸಿದ ನೆಲಕ್ಕೆ ಏರಿಬಂದ ಅಲೆಗಳು, ಎಲ್ಲವನ್ನು ಚಂದಕ್ಕೆ ಮರಳ ಸಮಾಧಿಗೊಳಪಡಿಸಿದ್ದವು. ನಮ್ಮ ತ್ರಿವೇಣೀ ಸರೋವರ (ಉಚ್ಚಿಲ, ತಲಪಾಡಿ ಮತ್ತು ಕುಂಜತ್ತೂರು ಹೊಳೆಗಳ ಸಂಗಮ) ಸಮುದ್ರಕ್ಕೆ ತೆರೆದುಕೊಂಡಿರಲಿಲ್ಲ. ಆದರೆ ನಡುವೆ ಇದ್ದ ಮರಳದಂಡೆಯ ಹಸಿರು ಮತ್ತು ಕಸರಾಶಿಯನ್ನಷ್ಟೂ ಉಬ್ಬರದಲೆಗಳು ನಿವಾರಿಸಿ, ಒಪ್ಪಗೊಳಿಸಿತ್ತು. ಹಾಗೇ ಸರೋವರದ ಸಂಪತ್ತಿಗಷ್ಟು ಉಪ್ಪುನೀರು ಬೆರೆತದ್ದೂ ಇರಬಹುದು. ಅದು
ಮೇಲ್ದಂಡೆಯ ಕೃಷಿ, ಜೀವನಕ್ಕೆಲ್ಲ ರಗಳೆ ಕೊಟ್ಟಿರಬಹುದು ಎಂದು ಬರಿದೇ ಊಹಿಸಿದೆ.

16 April 2018

ಸೈಕಲ್ಲಿನಿಂದ ಸಕಲ ಸಂಚಾರಿವರೆಗೆ

(ಚಕ್ರೇಶ್ವರ ಪರೀಕ್ಷಿತ ೨೩)
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ 

ಛಲ ಬಿಡದ ತ್ರಿವಿಕ್ರಮನಂತೆ ಸರ್ಕೀಟಿಗೆ ಸಜ್ಜುಗೊಂಡು ನಾನು ಸೈಕಲ್ ಕೊಟ್ಟಿಗೆಗೆ ಹೋದೆ. ಸೈಕಲ್ ಕತ್ತಲ ಮೂಲೆಯಲ್ಲಿ ಶೀರ್ಷಾಸನ ಮಾಡಿತ್ತು. ದೀಪ ಹಾಕಿ, ಕೀಲೆಣ್ಣೇ ಬಿಟ್ಟು ಸಮಾಧಾನಿಸಿದೆ. ಹೊರಗೆ ಆಕಾಶರಾಯ ಉತ್ತರಿಸಿದ “ಟ-ಠ-ಡ-ಢ-ಣ!” ಅರ್ಥವಾಗಲಿಲ್ವಾ - ಇಂದು ಸರ್ಕೀಟಿಗೆ ರಜೆ. ಅ(ಹ)ವಮಾನ ಶಾಸ್ತ್ರಿಗಳು ಹೇಳಿದ್ದು ನಿಜವಾದರೆ ಇನ್ನೆಂದು ಸೈಕಲ್ ಸರ್ಕಿಟೋ ತಿಳಿದಿಲ್ಲ :-( (೭-೬-೨೦೧೫) 


ವರುಣನ ಮೇಲೆ ತರಣಿ ವಿಜಯ ನೋಡಿ ನಾನು ನಿನ್ನೆ ಸೈಕಲ್ ಏರಿದ್ದೆ. ಲೇಡಿಹಿಲ್, ಕೊಟ್ಟಾರ, ಕೂಳೂರಿಗಾಗಿ ತಣ್ಣೀರುಬಾವಿಯತ್ತ ಹೊರಳಿದೆ. ಅದುವರೆಗೆ `ಮೊದಲ ಮಳೆ’ ಅನೇಕ ಕಡೆ ಚರಂಡಿ ಉಕ್ಕಿಸಿ ಕೊಟ್ಟ ಬೆದರಿಕೆಗಳ ಉತ್ತರಕ್ರಿಯೆಯಾಗಿ ಪೌರ ಕಾರ್ಮಿಕರು ಅರೆಮನಸ್ಕತೆಯಲ್ಲಿ ಕಳೆ ಕಿತ್ತು, ಇಲ್ಲದ ಚರಂಡಿ ಬಿಡಿಸುತ್ತಿದ್ದದ್ದು ಗಮನಿಸಿದ್ದೆ. ಆದರಿಲ್ಲಿ,

09 April 2018

ಸೈಕಲ್ ಆಗಬೇಕು ಸರಳತೆಯ ಸಂಕೇತ

(ಚಕ್ರೇಶ್ವರ ಪರೀಕ್ಷಿತ ೨೨)
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ 


ಸೈಕಲ್ ತತ್ತ್ವಜ್ಞಾನ:
ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ, ತೀವ್ರ ಏರಿಳಕಲುಗಳನ್ನಷ್ಟೇ ಆಯ್ದು `ಜಯಿಸುವುದ'ಕ್ಕಾಗಿ ನಡೆಯುವುದು, ಅದರ `ಬೆಂಬಲ'ಕ್ಕಾಗಿ ಅಸಂಖ್ಯ ಪೆಟ್ರೋಲ್ ವಾಹನಗಳು ಓಡಾಡುವಂತಾಗುವುದು, ಆ ಸವಾರರು ನಿತ್ಯಾಹಾರ ಮೀರಿ ಶಕ್ತಿವರ್ಧಕಗಳನ್ನು
ಆಶ್ರಯಿಸುವುದು ಎಲ್ಲಾ ಸರಿ ಅಲ್ಲ. ಹತ್ತೆಂಟು ಸಲಕರಣೆಗಳನ್ನು ಸೈಕಲ್ಲಿಗೆ ಹೇರಿ ಸ್ವಾನುಭವಕ್ಕೆ ತೆರೆದುಕೊಳ್ಳುವುದಕ್ಕಿಂತ ಸ್ವಮೋಹದಲ್ಲಿ ಕಳೆದುಹೋಗುವುದು ನನಗಂತೂ ಹಿಡಿಸಿದ್ದೇ ಇಲ್ಲ. ಇಲ್ಲೆಲ್ಲ `ಪ್ರಕೃತಿಯೊಡನೆ ಸಂವಾದ' ಎನ್ನುವುದು ಕೇವಲ ಮಾತಿನ ಅಲಂಕಾರ, ವ್ಯಕ್ತಿ ಅಹಂಕಾರದ ಇನ್ನೊಂದು ರೂಪವಾಗಿಯೇ ಸೈಕಲ್ ಕಾಣುತ್ತದೆ. ಚಿತ್ರದಲ್ಲಿ ಹೇಗೋ ಬರವಣಿಗೆಯಲ್ಲೂ ‘ಸ್ವಂತೀ’ಗಳನ್ನು (selfie) ನಿರಾಕರಿಸಿ, ಸ್ವಾನುಭವದ ಮಿತಿಯಿದ್ದರೂ ಲೋಕಹಿತದ ದೃಷ್ಟಿಕೋನದಲ್ಲೇ ನನ್ನ ದೈನಂದಿನ ಸೈಕಲ್ ಸರ್ಕೀಟುಗಳು ರೂಪುಗೊಳ್ಳುತ್ತವೆ.

06 April 2018

‘ಕಡಲ ಗುಳಿಗೆ’ ದಿನೇಶ್ ಉಚ್ಚಿಲ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೩)

(ಚಕ್ರೇಶ್ವರ ಪರೀಕ್ಷಿತ ೨೧)


ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ - ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು ಇಪ್ಪತ್ತೈದು ಮಂದಿ ಆಳ ಸಮುದ್ರದ ಮೀನುಗಾರಿಕಾ ಅನುಭವ ನೋಡಲು ಹೋಗಿಬಂದದ್ದು ಅವಿಸ್ಮರಣೀಯ. (ನೋಡಿ: ಸಾಗರ ಸವಾರರು) ಒಂದು ಕಾಲದಲ್ಲಿ ಕಡಲಿನಲ್ಲಿ ಮೀನು ಗುರುತಿಸುವಲ್ಲಿ, ಬಲೆಬೀಸುವ ಜಾಣ್ಮೆ ಹಾಗೂ ತಾಕತ್ತಿನಲ್ಲಿ ಕಡಲ ಗುಳಿಗನೆಂದೇ ಖ್ಯಾತಿವೆತ್ತ ದಿನೇಶರು ಇಂದು ಪ್ರಾಯ ಸಹಜವಾಗಿ ಮೀನುಗಾರಿಕೆಯಿಂದ ನಿವೃತ್ತರಾಗಿ, ಅದೇ ಕಣ್ವತೀರ್ಥದ ಬಳಿಯ ಕಡಲಕಿನಾರೆಯ ಮನೆಯಲ್ಲೇ ಇದ್ದಾರೆ.

02 April 2018

ಕುತ್ತಿಗೆವರೆಗೆ ಹುಗಿದು, ಆನೆಯಿಂದ ಮೆಟ್ಟಿಸಿ....


(ಚಕ್ರೇಶ್ವರ ಪರೀಕ್ಷಿತ ೨೦)

ನಿನ್ನೆ ಸಂಜೆಯ ಸೈಕಲ್ ಸವಾರಿಗೆ ಪೀಠಿಕೆಯಾಗಿ ಒಂದು ಕತೆ:
ತೆನ್ನಾಲಿರಾಮನ ಮೇಲೆ ರಾಜದ್ರೋಹದ ಆರೋಪ ಬಂತು. ಅವನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು, ಆನೆಯಿಂದ ಮೆಟ್ಟಿಸಿ ಕೊಲ್ಲುವ ಆಜ್ಞೆ ಆಯ್ತು. ರಾಜಭಟರು ರಾಮನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು ನಿಲ್ಲಿಸಿ, ಆನೆ ತರಲು ಹೋದರು. ಇತ್ತ ಒಬ್ಬ ಗೂನನ ಸವಾರಿ ಬಂತು. ಆತ ಆಶ್ಚರ್ಯದಲ್ಲಿ ಕೇಳಿದ "ಏನಿದು?" ರಾಮ ಅರೆನಿಮೀಲಿತ ನೇತ್ರನಾಗಿ, ಗಂಭೀರಧ್ವನಿ ತೆಗೆದಿದ್ದಾನೆ "ಧ್ಯಾನ ಭಂಗ ಮಾಡಬೇಡ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ನನ್ನ ಬೆನ್ನಹುರಿ ನೇರವಾಗಲಿದೆ!" ಅಪ್ರತಿಭ ಗೂನ ಆ ಸೆಕೆಂಡುಗಳು ಸಲ್ಲುವುದನ್ನು ಕಾದು, ಅವಸರವಸರವಾಗಿ ರಾಮನನ್ನು ಮಣ್ಣಬಂಧನದಿಂದ ಬಿಡಿಸಿದ. ಮತ್ತೆ

31 March 2018

ಸೀ ವಾಕ್, ಸನ್‍ಸೆಟ್ ಪಾಯಿಂಟ್ ಮತ್ತೆ.........?

ಚಕ್ರೇಶ್ವರ ಪರೀಕ್ಷಿತ - ೧೯


ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ ಬಲದ ಪೆರ್ಮನ್ನೂರಿಗಿಳಿದೆ. ಬಂದ ದಿಕ್ಕಿಗೇ ಮರಳಿದಂತೆ, ರೈಲ್ವೇ ಹಳಿಯ ಸಮಾನಾಂತರದ ದಾರಿಯನ್ನೇ ಆಯ್ದುಕೊಳ್ಳುತ್ತ ಹೋದೆ. ಸವೇರಪುರ್ಬುಗಳ (ನೋಡಿ: `ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು) ಮನೆಯ ಬಳಿ ಮತ್ತೆ ನೇತ್ರಾವತಿ ದರ್ಶನ.

30 March 2018

ಡೆಮಾಲಿಷ್ ಮಾಡಿ, ಹೊಸ್ತು ಕಟ್ಟಿ...


ಚಕ್ರೇಶ್ವರ ಪರೀಕ್ಷಿತ - ೧೮


ಸಂಜೆ ಸೈಕಲ್ ಸುತ್ತಾಟ ಪಣಂಬೂರು ಕಡಲ ಕಿನಾರೆ ಮುಟ್ಟಿದಲ್ಲಿಂದ ತೊಡಗಿತು. ನಿರಂತರ ತೊಳತೊಳಸುತ್ತಿದ್ದ ಸಮುದ್ರದಲ್ಲಿ ಒಂದು ಕಣ್ಣು ಕೀಲಿಸಿದ್ದಂತೆ, ಹಿತವಾಗಿ ತೀಡುತ್ತಿದ್ದ  ಗಾಳಿಗೆ ಮೈಯೊಡ್ಡಿ ಪೆಡಲೊತ್ತುತ್ತಿದ್ದರೆ ಬೈಕಂಪಾಡಿ, ಹೊಸಬೆಟ್ಟು ಕವಲುಗಳು ಕಳೆದದ್ದೇ ಗೊತ್ತಾಗಲಿಲ್ಲ. ಮೊದಲು, ಪಣಂಬೂರಿನಲ್ಲಿ ಒಂದು ಕಂಟೇನರ್-ಸಂಪರ್ಕದಲ್ಲಿ ಪ್ರಗತಿ ವಿಚಾರಿಸಿಕೊಂಡಿದ್ದೆ. ಹಿಂದಿರುಗುವ ಮೊದಲು, ಎಂಸಿಎಫ್ ಹಿಂದೆಯಿದ್ದ ಇನ್ನೊಂದೇ ಕಂಟೇನರ್-ಸಂಪರ್ಕವನ್ನೂ ವಿಚಾರಿಸುವ ಅಗತ್ಯವಿತ್ತು. ಹಾಗಾಗಿ ಸುರತ್ಕಲ್ ಕವಲನ್ನು ಗುರುತಿಟ್ಟು, ಬಲ ಹೊರಳಿ, ಹೆದ್ದಾರಿ ಸೇರಿದೆ. ಮಂಗಳೂರುಮುಖಿಯಾಗಿ, ಎನ್ನೆಂಪೀಟೀ ವಸತಿ ಸಮೂಹ ಮತ್ತು ಶಾಲಾದಾರಿಯಲ್ಲಿ ಎಡ ಕವಲು ಹಿಡಿದೆ. ನೇರ ದಾರಿ ಉದ್ಯಮ ರಕ್ಷಣಾ ದಳದ ಕಚೇರಿಯಲ್ಲಿ ಬಹುತೇಕ ಮುಗಿದಂತಿತ್ತು. ಬಲದ ಕವಲಿಗಾಗಿ ಹೋಗಿ, ಅನಿವಾರ್ಯವಾಗಿ ಬಳಕೆ ತಪ್ಪಿ ಹೋದಂತಿದ್ದ ಪೂರ್ವ ದಿಶೆಗೆ ತಿರುಗಿಕೊಂಡೆ.  ಅಲ್ಲಿ ಈ ‘ಹಾಳೂರು’ ಕಾಣ ಸಿಕ್ಕಿತು!

26 March 2018

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

(ಚಕ್ರೇಶ್ವರ ಪರೀಕ್ಷಿತ ೧೭) 
ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ 



ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ...” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್ ಕೇವಲ ನನ್ನ ವ್ಯಾಯಾಮವೇ” ಎಂಬ ಯೋಚನೆಯಲ್ಲೇ ಸೈಕಲ್ ಮೆಟ್ಟತೊಡಗಿದೆ. ಪಂಪ್ವೆಲ್, ಪಡೀಲ್, ಪರಂಗಿಪೇಟೆ ಕಳೆಯುವವರೆಗೂ ನನಗೆ ದಾರಿ ಖರ್ಚಿಗೆ ಅದೇ ಒದಗಿತು! ಅಲ್ಲಿ ತುಂಬೆಯ ಹೊಸ ಅಣೆಕಟ್ಟು ನೋಡುವ ಮಿದುಳಲೆ ಬಂದದ್ದಕ್ಕೆ ನಿಂತೆ. ನೇತ್ರಾವತಿ ಹೋರಾಟಗಾರ, ಜೋಡುಮಾರ್ಗದ ಗೆಳೆಯ ಸುಂದರರಾಯರ ಕಿವಿ ಚರವಾಣಿಯಲ್ಲೇ ಕಚ್ಚಿ “ಬರ್ತೀರಾ” ಕೇಳಿದೆ. ಅವರು ಮಂಚಿಯ ಕಾರಂತೋತ್ಸವದಲ್ಲಿ `ಬೆಪ್ತಕ್ಕಡಿ ಭೋಳೇಶಂಕರ’ ನೋಡಲು ಹೊರಟು ನಿಂತಿದ್ದರು. ಇನ್ನು ಮುಂದುವರಿದು ವಾಪಾಸಾಗುವ ಕತ್ತಲ ದಾರಿಯಲ್ಲಿ ನಾನೂ ಅದೇ (ಬೆಪ್ತಕ್ಕಡಿ....) ಆಗುವುದು ಬೇಡವೆಂದು ಹಿಮ್ಮುಖನಾದೆ.

05 March 2018

ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ

(ಚಕ್ರೇಶ್ವರ ಪರೀಕ್ಷಿತ ೧೬)


೧. ಆಭಾ ಕರೆದಮೇಲೇ ಹೋಗದಿರಲಾದೀತೇ?:

ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ (ಸೊಸೆ) ಆಭಾ (ಮೊಮ್ಮಗಳು) ನಮ್ಮೊಡನಿದ್ದರು. ನಮ್ಮ ಮನೆಯಲ್ಲೇ ಅವತರಿಸಿ, ಗಾಳಿಯನ್ನು ಕಲಕಿ ಝಾಡಿಸುತ್ತಿದ್ದಂತೆ ಬೆಂಗಳೂರಿಸಿದ್ದ ಮೊಮ್ಮಗು, ಈಗ ಮಗುಚಿ, ಹರಿಯುವಷ್ಟಾಗಿತ್ತು. ಸಹಜವಾಗಿ ಮನೆಯ ನೆಲದಲ್ಲಿ ವಿರಮಿಸಿದ್ದ ಡಬ್ಬಿ, ಚೀಲಗಳು ಹೆದರಿ ಕಾಲ್ಮಣೆ, ಮೇಜುಗಳನ್ನೇರಿ ಕುಳಿತವು. ಕಾಲೊರಸುಗಳು, ಬಟ್ಟೆದೋಟಿಗಳು ಬಚ್ಚಲು, ಹಿತ್ತಲು ಸೇರಿ ಬಾಗಿಲೆಳೆದುಕೊಂಡವು. ಆಭಾ ವಿಕಾಸಪಥದ ಮುಂದಿನ ನಾಲ್ಕೆಂಟು ದಿನಗಳು (ಸರೀಸೃಪಗಳು ನಾಲ್ಗಾಲಿನವಾದ) ಜೀವವಿಕಾಸ ಬೃಹನ್ನಾಟಕದ ಕಿರುರೂಪಕವೇ ಆಗಿತ್ತು. ಆಕೆ
ನಿರಾತಂಕವಾಗಿ ತೆವ
ಳುತ್ತಿದ್ದ ಕುರ್ಚಿಯ ತಳ ಈಗ ತಲೆಗೆ ಹೆಟ್ಟತೊಡಗಿತ್ತು; ನೆಲಕ್ಕೆ ಕೈಕೊಟ್ಟು ಎದೆ ಎತ್ತುತ್ತಿದ್ದಳು. ನುಸುಳಿ ಸಾಗುತ್ತಿದ್ದ ಟೀಪಾಯ್ ಸಂದು ಇರುಕಿಸಿತ್ತು; ನಾಲ್ಗಾಲು ತೊಡಗಿದ್ದಳು. ಕುರ್ಚಿ ಹತ್ತಿ ಕುಳಿತಳು, ಟೀಪಾಯ್ ಮೇಜುಗಳೆಲ್ಲವೂ ಕೈಯಾಸರೆಯಲ್ಲಿ ನಿಲ್ಲುವ ತಾಣಗಳಾದವು. ಅಗಮ್ಯವೆಂದೇ ಬಿಟ್ಟಿದ್ದ ಮಹಡಿಗೇರುವ ಸೋಪಾನಸರಣಿಯ ಬುಡಕ್ಕೆ ಹೋಗಿ ಈಗ ಆಕೆ “ಹತ್ತಿ” ಎಂದು ಮೊಣಕಾಲಿಕ್ಕಿದರೆ ಸಾಕು, ಬೆಂಗಾವಲಿನವರು ಥೇಟ್ ‘ವಿಕೆಟ್ ಕೀಪರ್’ಗಳಾಗಲೇಬೇಕು! ಎರಡೂ ಹಸ್ತ ಅರಳಿಸಿ ಹಿಂದುರುಳದಂತೆ ಕಾಯಲೇಬೇಕು. ನಾವು ತಿನ್ನುವ ಯಾವುದಕ್ಕೂ ಅವಳ ಪೂರ್ಣ ತೆರೆದ ಬಾಯಿ ಪಾಲು ಕೇಳುತ್ತಿತ್ತು. ಹಾಗೆಂದು ಕುಶಿ ಹೆಚ್ಚಿ ಯಾವುದನ್ನೂ ಇದ್ದಂತೆ ಕೊಡುವಂತಿಲ್ಲ; ಇರುವ ಮೂರೂವರೆ ಹಲ್ಲು ತಪ್ಪಿಸಿ ಗಂಟಲು ಕಟ್ಟಿಬಿಟ್ಟರೆ? ಮೆತ್ತಗಿನ ದೋಸೆ, ರೊಟ್ಟಿಯಾದರೂ ಹಿಸಿದು ಕೊಡಬೇಕು. ಚಕ್ಕುಲಿ, ಚಿಪ್ಸ್ ಕುಟ್ಟಾಣಿಗಿಕ್ಕಿ ಪುಡಿ ಮಾಡಿ ಕೊಟ್ಟರೆ "ಎಷ್ಟು ತಿಂದರೂ ಸಾಲದು"! "ಆಂ" (=ತಿನ್ತೇನೆ?) ಸೌಮ್ಯ ಅರ್ಜಿ, "ಆಂಪುಡ್ಕ" (=ತಿನ್ನುವುದನ್ನು ಕೊಡೋ?) ಹಕ್ಕೊತ್ತಾಯ!

26 February 2018

ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು


೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ
ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಯೂ ಸಾಂಪ್ರದಾಯಿಕ ಸೂತಕ ಮತ್ತು ಶುದ್ಧಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಇದ್ದಷ್ಟು ಕಾಲ ತಾಯಿಯ ಬಾಹ್ಯ ಅಲಂಕಾರ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಯಾವುದೇ ಊನ ಬಾರದಂತೆ ಆಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೆವು. ಇದರ ಮೇಲೆ.....

ಅಪ್ಪಮ್ಮರ ಜತೆಗಿದ್ದು, ಮುಖ್ಯವಾಗಿ ಅವರ ಕಷ್ಟಗಳಲ್ಲಿ ನೇರ
ಭಾಗಿದಾರಿಕೆ ವಹಿಸಿಕೊಂಡ ಅನಂತ - ನಮ್ಮೂವರಲ್ಲಿ ಕಿರಿಯ. ಹಿರಿಯನಾದ ನಾನು ಮತ್ತು ಎರಡನೆಯವನಾದ ಆನಂದ ಹುಟ್ಟಿನ ಆಕಸ್ಮಿಕದ ಹಿರಿತನವನ್ನು ಅನಂತನ ಕ್ರಿಯಾ ಹಿರಿತನಕ್ಕೆ ಎಂದೋ ನಿಸ್ಸಂದೇಹವಾಗಿ ಒಪ್ಪಿಸಿದ್ದೆವು. ಹೋದವರಿಗಿಂತ ಇರುವವರ ಜೀವನ ಹೆಚ್ಚು ಹಸನಾಗಬೇಕೆಂಬ ಮಾತಿದೆ. ತಂದೆಯೂ ಈ ಮಾತನ್ನು ಒಪ್ಪುತ್ತಿದ್ದರು. ಅದಕ್ಕೇ ಅವರು ಸ್ವಂತಕ್ಕೆ ಯಾವ ವೈದಿಕ ಆಚರಣೆಗಳನ್ನು ಇಟ್ಟುಕೊಳ್ಳದಿದ್ದರೂ ತಾಯಿಯ ಪೂಜೆ, ವ್ರತಾದಿ ನಂಬಿಕೆಗಳಿಗೆ ಎಂದೂ ಭಂಗ ಉಂಟುಮಾಡುತ್ತಿದ್ದಿಲ್ಲ. ಅದೇ ರೀತಿಯಲ್ಲಿ, ಮೊದಲು ಅಪ್ಪನ ಉತ್ತರಕ್ರಿಯಾ ಆಶಯಕ್ಕೆ, ಮುಖ್ಯವಾಗಿ ಅಮ್ಮನ ಸಣ್ಣ ಆಸೆಗಳನ್ನೂ ಅನಂತರ ಅಮ್ಮನ ವಿದಾಯದಂದು ಅನಂತನ ಅಗತ್ಯಗಳಿಗಾಗಿಯೂ ಸಣ್ಣ

05 February 2018

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

(ಚಕ್ರೇಶ್ವರ ಪರೀಕ್ಷಿತ ೧೫)
ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ

ಬೆಪ್ಪನಾಗದ ಸೈಕಲ್ ಶಂಕರ: 
ಸೈಕಲ್ ಮಹಾಯಾನದ ಅಂತಿಮ ಕಂತಿಗೆ (ಬೆಂಗಳೂರು ಇನ್ನು ಹತ್ತಿರ) ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ...” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್ ಕೇವಲ ನನ್ನ ವ್ಯಾಯಾಮವೇ” ಎಂಬ ಯೋಚನೆಯಲ್ಲೇ ಸೈಕಲ್ ಮೆಟ್ಟತೊಡಗಿದೆ. ಪಂಪ್ವೆಲ್, ಪಡೀಲ್, ಪರಂಗಿಪೇಟೆ ಕಳೆಯುವವರೆಗೂ ನನಗೆ ದಾರಿ ಖರ್ಚಿಗೆ ಅದೇ ಒದಗಿತು! ಅಲ್ಲಿ ತುಂಬೆಯ ಹೊಸ ಅಣೆಕಟ್ಟು
ನೋಡುವ ಮಿದುಳಲೆ ಬಂದದ್ದಕ್ಕೆ ನಿಂತೆ. ನೇತ್ರಾವತಿ ಹೋರಾಟಗಾರ, ಜೋಡುಮಾರ್ಗದ ಗೆಳೆಯ ಸುಂದರರಾಯರ ಕಿವಿ ಕಚ್ಚಿ “ಬರ್ತೀರಾ” ಕೇಳಿದೆ. ಅವರು ಮಂಚಿಯ ಕಾರಂತೋತ್ಸವದಲ್ಲಿ `ಬೆಪ್ತಕ್ಕಡಿ ಭೋಳೇಶಂಕರ’ ನೋಡಲು ಹೊರಟು ನಿಂತಿದ್ದರು. ಇನ್ನು ಮುಂದುವರಿದು ವಾಪಾಸಾಗುವ ಕತ್ತಲ ದಾರಿಯಲ್ಲಿ ನಾನೂ ಅದೇ (ಬೆಪ್ತಕ್ಕಡಿ....) ಆಗುವುದು ಬೇಡವೆಂದು ಹಿಮ್ಮುಖನಾದೆ. 

04 January 2018

ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್


"ದೋಣಿ ಸಾಗಲಿ ಮುಂದೆ ಹೋಗಲಿ, ೨೦೧೮ ಸೇರಲಿ....." ಹಾಡುತ್ತ ಮೊನ್ನೆ (೩೧-೧೨-೨೦೧೭) ಮೂರು ಕಯಾಕ್‍ಗಳಲ್ಲಿ (ಫೈಬರ್ ಗ್ಲಾಸಿನ ಎರಡು ಪದರದ, ತೆಪ್ಪದಂಥ ದೋಣಿ) ನಾವು ಆರು ಮಂದಿ (ಪ್ರವೀಣ್, ಯಶಸ್, ಅನಿಲ್ ಶೇಟ್, ಶಿವಾನಂದ್, ದೇವಕಿ ಮತ್ತು ನಾನು) ಉಚ್ಚಿಲದ ತ್ರಿವೇಣಿ ಸಂಗಮದಲ್ಲಿ ಮನಸೋಯಿಚ್ಛೆ ವಿಹರಿಸಿ ಮರಳಿದೆವು. ಚಳಿಗಾಲದ ತೆಳು ಮಂಜು ಹರಿಯುವ ಸಮಯ ಕಾದು, ಅಂದರೆ ಸುಮಾರು ಎಂಟು ಗಂಟೆಯಿಂದ ಹನ್ನೊಂದೂವರೆಯವರೆಗೂ ಈ ‘ಸುಂದರಬನ’ದ ಮೂಲೆ
ಮೊಡಕುಗಳನ್ನು ನಿಶ್ಚಿಂತೆಯಿಂದ ತೊಳಸುಗೈಗಳಲ್ಲಿ ಹುಟ್ಟು ಹಾಕುತ್ತ, ತೇಲಾಡಿ, ಒಂದಿಬ್ಬರು ಈಜಿನ ಶಾಸ್ತ್ರ ಮಾಡಿಯೂ ಸಂತೋಷಿಸಿದೆವು.

ಈಚೆಗೆ ಪಡುಗಡಲಿನಿಂದ ಎರಗಿದ ಓಖಿ ಚಂಡಮಾರುತ ಉಚ್ಚಿಲ ಬಟಪಾಡಿಯ ಈ ಕೊನೆಯ ಭೌಗೋಳಿಕ ಲಕ್ಷಣಗಳನ್ನು ಪ್ರಭಾವಿಸಿದೆ ಎಂಬ ಸುದ್ದಿ ಬರುವಾಗ ನಾನು ಮೈಸೂರಿನಲ್ಲಿದ್ದೆ. ಮೊನ್ನೆ ಬಂದವನೇ ಅತ್ತ ಸೈಕಲ್