(ಭಾಗ ಆರು)
ನನ್ನ ಹೆಲೆನ್ ಟೀಚರ್
- ಬರೆದರೆ ಒಂದು ಅಧ್ಯಾಯವೇ ಬೇಕಾದೀತೇನೋ! ಕೆಲವೇ ತಿಂಗಳು ನನಗೆ ಶಿಕ್ಷಕಿಯಾಗಿ ವೃತ್ತಿಜೀವನದುದ್ದಕ್ಕೂ ನನ್ನ ಸಹೋದ್ಯೋಗಿಯಾಗಿ ಅವರೊಂದಿಗೆ ಬೆರೆತು ನಾನು ಕಲಿತ ಪಾಠಗಳು ನನ್ನ ಶಿಕ್ಷಕ ವೃತ್ತಿ ಬದುಕಿನ ಯಶಸ್ಸಿಗೆ ಕಾರಣಗಳಾಗಿವೆ. ಬಿಸಿಲ ಬೇಗೆಯಿಂದ ಬಳಲಿದವನಿಗೆ ವಿಶಾಲ ವೃಕ್ಷದ ನೆರಳಿನಂತೆ, ಹಸಿದ ಮಗುವಿಗೆ ತಾಯಿ ಎದೆಹಾಲು ದೊರೆತಂತೆ, ತಪ್ಪು ಮಾಡಿ ತಪ್ಪಿಸಿಕೊಳ್ಳಲು ಮಕ್ಕಳು ತಾಯ ಸೆರಗಿನಾಶ್ರಯ ಪಡೆದಂತೆ, ಕತ್ತಲೆಯಲ್ಲಿ ತಡಕಾಡುತ್ತಿದ್ದವನಿಗೆ ಹಣತೆಯ ದೀಪ ಕೈಗಿತ್ತಂತೆ ಅವರ ಸಹವಾಸ ಮತ್ತು ಪಾಠ ಪ್ರವಚನಗಳು ನನ್ನಲ್ಲಿ ಪ್ರಭಾವ ಬೀರಿದೆ.
ಅವರಿಂದ ಪಾಠ ಹೇಳಿಸಿಕೊಂಡವರಾರೂ ಅವರನ್ನು ಮರೆಯಲು ಸಾಧ್ಯವಿರಲಿಲ್ಲ. ಶಾಲೆ ಬಿಟ್ಟು ಎಷ್ಟೋ ವರ್ಷಗಳ ಬಳಿಕ ಅವರನ್ನು ಕಂಡು ಮಾತಾಡಲಿಕ್ಕಾಗಿಯೇ ಬರುತ್ತಿದ್ದ ಶಿಷ್ಯರಿದ್ದರು. ಅವರ ಅಧ್ಯಾಪನವು ಅಷ್ಟೊಂದು ವೈಶಿಷ್ಟಪೂರ್ಣವಾಗಿತ್ತು. ಅವರ ಶಿಷ್ಯವಾತ್ಸಲ್ಯ ಗಾಢವಾಗಿತ್ತು. ಗಣಿತ ಪಾಠವನ್ನು ಅವರ ಹಾಗೆ ಕಲಿಸುವ ಶಿಕ್ಷಕರನ್ನು ನಾನು ಕಂಡಿಲ್ಲ. ಗಣಿತದಲ್ಲಿ ಮಾರ್ಕ್ಸ್ ಕಡಿಮೆ ತೆಗೆದವರನ್ನು ಅವರು ಹರಸುವ ರೀತಿಯೇ ವಿನೂತನವಾಗಿತ್ತು. ಮಾರ್ಕ್ಸ್ ಕಡಿಮೆ ಆಯ್ತು ಅಂತ ಬೇಸರಿಸಬೇಡಿ. ತುಂಬಾ ಮಾರ್ಕ್ಸ್ ಪಡೆದವರು ಅವರು ಬಯಸಿದಂತೆ ಡಾಕ್ಟರೋ ಇಂಜಿನಿಯರೋ ಏನಾದರೂ ಆಗಲಿ. ನೀವು ನನ್ನ ಹಾಗೆ ಟೀಚರಾಗಿ ಆಯ್ತಾ ಎಂದು ಕೆನ್ನೆ ತಟ್ಟಿ ಸಮಾಧಾನ ಮಾಡಿದಾಗ ಯಾವ ವಿದ್ಯಾರ್ಥಿಯಲ್ಲೂ ಗಣಿತವನ್ನು ದ್ವೇಷಿಸದೆ ಪ್ರೀತಿಸುವ ಹುಮ್ಮಸ್ಸುಂಟಾಗುತ್ತಿತ್ತು. ಕೆಲವು ಪಾಠಗಳು ಮಕ್ಕಳಿಗೆ ಕಷ್ಟ ಎಂದು ಅನಿಸುವುದಕ್ಕೆ ಶಿಕ್ಷಕರ ವ್ಯಕ್ತಿತ್ವವೂ ಕಾರಣವಾಗಿರುತ್ತದೆಂಬುದು ಸಾಬೀತಾದ ಸತ್ಯ. ಟೀಚರನ್ನು ಪ್ರೀತಿಸಿದವರು ಅವರ ಪಾಠವನ್ನೂ ಪ್ರೀತಿಸಲು ತೊಡಗುತ್ತಾರೆ. ನಾನೂ ಅವರೂ ವೃತ್ತಿಯಿಂದ ನಿವೃತ್ತರಾದ ಮೇಲೂ ತಿಂಗಳಿಗೊಮ್ಮೆಯಾದರೂ ಭೇಟಿಯಾಗುತ್ತಿದ್ದೆವು. ಒಳ್ಳೆಯ ಓದುಗಳಾದ ಅವರಿಗೆ ನಾನು ಓದಿದ ಉತ್ತಮ ಪುಸ್ತಕಗಳನ್ನು ಕೊಡುತ್ತಿದ್ದೆ. ಪುಸ್ತಕದ ಧನಾತ್ಮಕ ಅಂಶಗಳನ್ನು ಲೋಪ ದೋಷಗಳನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಅದು ಗಂಭೀರ ಸಾಹಿತ್ಯ ಚರ್ಚೆಯೇನೂ ಅಲ್ಲದಿದ್ದರೂ ಅವರ ಸಾದಾ ಸರಳ ಜೀವನದ ಆದರ್ಶಗಳಿಗೆ ಪೂರಕವಾಗಿತ್ತು. ಯಾರಿಗೂ ತೊಂದರೆ ಕೊಡದೆ ಬದುಕಬೇಕೆಂಬ ವ್ರತ ತೊಟ್ಟ ಟೀಚರು ತನ್ನ ಮಗಳು ಎಷ್ಟೇ ಒತ್ತಾಯ ಮಾಡಿದರೂ ಮನೆ ಬಿಟ್ಟು ವಿದೇಶವಾಸಕ್ಕೆ ಒಪ್ಪಲಿಲ್ಲ. ನನಗೆ ಅವರನ್ನು ಕಂಡಾಗ ಗಾಂಧೀಜಿಯ ಸಂತತನದ ಹಠಮಾರಿತನವೂ, ಇಂದಿರಾಗಾಂಧಿಯ 'ಡಿಕ್ಟೇಟರ್ಶಿಪ್'ನ ಮೊಂಡುತನವೂ ಎರಡೂ ಸಮ್ಮಿಲನಗೊಂಡ ಮೂರ್ತಿಯಂತೆ ಭಾಸವಾಗುತ್ತಿತ್ತು. ೮೫ ವರ್ಷದಲ್ಲಿ ನಿಧನರಾಗುವವರೆಗೂ ಸಾಮಾನ್ಯರನ್ನು ಬಾಧಿಸುವ ಯಾವ ಕಾಯಿಲೆಗಳೂ ಅವರ ಹತ್ತಿರ ಸುಳಿಯಲಿಲ್ಲ. ಹೊಟ್ಟೆನೋವು ಎಂದರೇನೆಂದೇ ಗೊತ್ತಿಲ್ಲದ ಅವರು ಜ್ವರ ಬಂದು ಮಲಗಿದವರಲ್ಲ. ಈ ಅನುಭವವಿಲ್ಲದವರೂ ಇದ್ದಾರೆಂದರೆ ಈ ಕಾಲದಲ್ಲಿ ಯಾರೂ ನಂಬಲಾರರು ಅಲ್ಲವೇ? ಕೃಶ ಶರೀರದ ನೇರ ನಿಲುವಿನ ಅವರು ೮೦ ವರ್ಷದ ಬಳಿಕ ಸ್ವಲ್ಪ ಬಾಗಿದಂತೆ ಕಾಣುತ್ತಿದ್ದರು. ಹಗಲಲ್ಲಿ ಕೆಲಸದಾಳಿನ ಸಹಾಯ ಪಡೆದವರೂ ರಾತ್ರಿ ಒಂಟಿಯಾಗಿಯೇ ಬದುಕುತ್ತಿದ್ದ ಅವರ ಧೈರ್ಯವನ್ನು ಕಂಡರೆ ಅವರ ನಿರ್ಧಾರವನ್ನು ಎಲ್ಲರೂ ಆಕ್ಷೇಪಿಸುತ್ತಿದ್ದರು. ಯಾರ ಮಾತಿಗೂ ಸೊಪ್ಪು ಹಾಕದ ಅವರು ಕೊನೆಗಾಲದಲ್ಲಿ ಒಮ್ಮೆ ಮನೆಯೊಳಗೆ ಎಡವಿ ಬಿದ್ದು ಕಾಲಿನ ಮೂಳೆ ಮುರಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು. ಮಗಳು ವಿದೇಶದಿಂದ ಬಂದು ಆರೈಕೆಯಲ್ಲಿ ನಿರತಳಾದಳು. ಆದರೆ ಹೆಲೆನ್ ಟೀಚರು ಮೊದಲೇ ಮನಸ್ಸಿನಲ್ಲಿ ನಿರ್ಧಾರ ಮಾಡಿದಂತೆ 'ಸಲ್ಲೇಖನ ವ್ರತ' ಆಚರಿಸಿ ಆಸ್ಪತ್ರೆಯಿಂದ ಮನೆಗೆ ಮರಳಿದ ನಾಲ್ಕೇ ದಿನದಲ್ಲಿ ಮೃತರಾದರು. ಸಾವನ್ನು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾವಿನ ಭಯದಿಂದ ತಪ್ಪಿಸಿಕೊಳ್ಳುವವರು ವಿರಳ. ಪ್ರಪಂಚವೆಂಬ ಬಂಧೀಖಾನೆಯಲ್ಲಿ ನಾವೆಲ್ಲಾ ಕೈದಿಗಳಂತೆ ಬದುಕುತ್ತೇವೆ. ಬಾಗಿಲು ತೆರೆದು ಓಡಿ ಹೋಗಲು ಯಾರಿಗೂ ಸಾಧ್ಯವಿಲ್ಲ. ದೇವರು ಕರೆಯುವವರೆಗೂ ಕಾಯಬೇಕು ಎಂದು ನಂಬಿದ ಟೀಚರು ತಾನೇ ಬಾಗಿಲು ತೆರೆದು ಹೋದರೇ? 'ಸಲ್ಲೇಖನ ವ್ರತ'ವನ್ನು ತಪ್ಪು ಎಂದು ವಾದಿಸುವವರಿದ್ದಾರೆ. 'ದಯಾಮರಣ'ವನ್ನೂ ಅಪರಾಧವೆಂದು ಕಾನೂನು ಹೇಳುತ್ತದೆ. ಆತ್ಮಹತ್ಯೆಯಂತೂ ಮಹಾಪಾಪವೆಂದು ಎಲ್ಲಾ ಮತಗಳೂ ಸಾರುತ್ತವೆ. ಹಾಗಿದ್ದರೆ ನನಗೆ ಇನ್ನು ಬದುಕುವುದು ಇಷ್ಟವಿಲ್ಲ. ತನ್ನಿಂದ ಇತರರಿಗೆ ತೊಂದರೆಯಾಗುತ್ತದೆ. ನಾನು ಮಾಡಬೇಕಾದ ಕೆಲಸಗಳೆಲ್ಲಾ ಪೂರ್ಣಗೊಂಡಿವೆ. ಆದುದರಿಂದ ನಾನು ಮರಣವನ್ನು ಆಮಂತ್ರಿಸುತ್ತೇನೆ ಎಂದು ದೃಢಚಿತ್ತದಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿದ ಟೀಚರರ ನಿರ್ಧಾರವನ್ನು ಯಾರು ವಿರೋಧಿಸಿದರೂ ನನಗಂತೂ ಅದು ತಪ್ಪು ಎಂದು ಅನಿಸಲಿಲ್ಲ. ಸತ್ಕಾರ್ಯದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದರೆ ಸಾವಿನ ಭಯ, ನೋವು ಕಡಿಮೆಯಾಗುತ್ತದೆ. ಹೆಲೆನ್ ಟೀಚರು ತನ್ನ ಬದುಕಿನುದ್ದಕ್ಕೂ ವಿದ್ಯೆ ಮಾತ್ರ ಕಲಿಸಿದ್ದಲ್ಲ. ಅನೇಕ ಬಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸದ್ದಿಲ್ಲದೆ ಮಾಡಿದ ಇಂತಹ ಅನೇಕ ಉದಾಹರಣೆಗಳು ನನ್ನ ಕಣ್ಣ ಮುಂದಿವೆ. ಗಿಡದಲ್ಲಿ ಹೂ ಮೌನವಾಗಿ ಅರಳಿದಂತೆ, ಮರಗಳು ಯಾವುದೇ ಗೌಜಿಗದ್ದಲ ಮಾಡದೆ ಹಣ್ಣುಗಳನ್ನು ನೀಡಿದಂತೆ ಹೆಲೆನ್ ಟೀಚರರ ಜೀವನ ಸಾರ್ಥಕವಾಯಿತು. ಹೇಡಿಗಳು ಅನೇಕ ಸಲ ಸಾಯುತ್ತಾರಂತೆ, ಧೈರ್ಯವಂತರು ಮಾತ್ರ ಒಂದೇ ಸಲ ಸಾಯುತ್ತಾರಂತೆ. ಯಾರೋ ಹೇಳಿದ ಮಾತು ನೆನಪಾಗುತ್ತದೆ. ಹೌದು, ಸಾವು ಬೆಟ್ಟಕ್ಕಿಂತ ದೊಡ್ಡದೂ ಹೌದು, ಕೂದಲಿಗಿಂತ ಸಣ್ಣದೂ ಹೌದು. ಅದರ ಮಹತ್ವವನ್ನು ತಿಳಿಯುವುದು ಕಷ್ಟ. ತಿಳಿದವರೂ ವಿರಳ.
ಅವರಿಂದ ಪಾಠ ಹೇಳಿಸಿಕೊಂಡವರಾರೂ ಅವರನ್ನು ಮರೆಯಲು ಸಾಧ್ಯವಿರಲಿಲ್ಲ. ಶಾಲೆ ಬಿಟ್ಟು ಎಷ್ಟೋ ವರ್ಷಗಳ ಬಳಿಕ ಅವರನ್ನು ಕಂಡು ಮಾತಾಡಲಿಕ್ಕಾಗಿಯೇ ಬರುತ್ತಿದ್ದ ಶಿಷ್ಯರಿದ್ದರು. ಅವರ ಅಧ್ಯಾಪನವು ಅಷ್ಟೊಂದು ವೈಶಿಷ್ಟಪೂರ್ಣವಾಗಿತ್ತು. ಅವರ ಶಿಷ್ಯವಾತ್ಸಲ್ಯ ಗಾಢವಾಗಿತ್ತು. ಗಣಿತ ಪಾಠವನ್ನು ಅವರ ಹಾಗೆ ಕಲಿಸುವ ಶಿಕ್ಷಕರನ್ನು ನಾನು ಕಂಡಿಲ್ಲ. ಗಣಿತದಲ್ಲಿ ಮಾರ್ಕ್ಸ್ ಕಡಿಮೆ ತೆಗೆದವರನ್ನು ಅವರು ಹರಸುವ ರೀತಿಯೇ ವಿನೂತನವಾಗಿತ್ತು. ಮಾರ್ಕ್ಸ್ ಕಡಿಮೆ ಆಯ್ತು ಅಂತ ಬೇಸರಿಸಬೇಡಿ. ತುಂಬಾ ಮಾರ್ಕ್ಸ್ ಪಡೆದವರು ಅವರು ಬಯಸಿದಂತೆ ಡಾಕ್ಟರೋ ಇಂಜಿನಿಯರೋ ಏನಾದರೂ ಆಗಲಿ. ನೀವು ನನ್ನ ಹಾಗೆ ಟೀಚರಾಗಿ ಆಯ್ತಾ ಎಂದು ಕೆನ್ನೆ ತಟ್ಟಿ ಸಮಾಧಾನ ಮಾಡಿದಾಗ ಯಾವ ವಿದ್ಯಾರ್ಥಿಯಲ್ಲೂ ಗಣಿತವನ್ನು ದ್ವೇಷಿಸದೆ ಪ್ರೀತಿಸುವ ಹುಮ್ಮಸ್ಸುಂಟಾಗುತ್ತಿತ್ತು. ಕೆಲವು ಪಾಠಗಳು ಮಕ್ಕಳಿಗೆ ಕಷ್ಟ ಎಂದು ಅನಿಸುವುದಕ್ಕೆ ಶಿಕ್ಷಕರ ವ್ಯಕ್ತಿತ್ವವೂ ಕಾರಣವಾಗಿರುತ್ತದೆಂಬುದು ಸಾಬೀತಾದ ಸತ್ಯ. ಟೀಚರನ್ನು ಪ್ರೀತಿಸಿದವರು ಅವರ ಪಾಠವನ್ನೂ ಪ್ರೀತಿಸಲು ತೊಡಗುತ್ತಾರೆ. ನಾನೂ ಅವರೂ ವೃತ್ತಿಯಿಂದ ನಿವೃತ್ತರಾದ ಮೇಲೂ ತಿಂಗಳಿಗೊಮ್ಮೆಯಾದರೂ ಭೇಟಿಯಾಗುತ್ತಿದ್ದೆವು. ಒಳ್ಳೆಯ ಓದುಗಳಾದ ಅವರಿಗೆ ನಾನು ಓದಿದ ಉತ್ತಮ ಪುಸ್ತಕಗಳನ್ನು ಕೊಡುತ್ತಿದ್ದೆ. ಪುಸ್ತಕದ ಧನಾತ್ಮಕ ಅಂಶಗಳನ್ನು ಲೋಪ ದೋಷಗಳನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಅದು ಗಂಭೀರ ಸಾಹಿತ್ಯ ಚರ್ಚೆಯೇನೂ ಅಲ್ಲದಿದ್ದರೂ ಅವರ ಸಾದಾ ಸರಳ ಜೀವನದ ಆದರ್ಶಗಳಿಗೆ ಪೂರಕವಾಗಿತ್ತು. ಯಾರಿಗೂ ತೊಂದರೆ ಕೊಡದೆ ಬದುಕಬೇಕೆಂಬ ವ್ರತ ತೊಟ್ಟ ಟೀಚರು ತನ್ನ ಮಗಳು ಎಷ್ಟೇ ಒತ್ತಾಯ ಮಾಡಿದರೂ ಮನೆ ಬಿಟ್ಟು ವಿದೇಶವಾಸಕ್ಕೆ ಒಪ್ಪಲಿಲ್ಲ. ನನಗೆ ಅವರನ್ನು ಕಂಡಾಗ ಗಾಂಧೀಜಿಯ ಸಂತತನದ ಹಠಮಾರಿತನವೂ, ಇಂದಿರಾಗಾಂಧಿಯ 'ಡಿಕ್ಟೇಟರ್ಶಿಪ್'ನ ಮೊಂಡುತನವೂ ಎರಡೂ ಸಮ್ಮಿಲನಗೊಂಡ ಮೂರ್ತಿಯಂತೆ ಭಾಸವಾಗುತ್ತಿತ್ತು. ೮೫ ವರ್ಷದಲ್ಲಿ ನಿಧನರಾಗುವವರೆಗೂ ಸಾಮಾನ್ಯರನ್ನು ಬಾಧಿಸುವ ಯಾವ ಕಾಯಿಲೆಗಳೂ ಅವರ ಹತ್ತಿರ ಸುಳಿಯಲಿಲ್ಲ. ಹೊಟ್ಟೆನೋವು ಎಂದರೇನೆಂದೇ ಗೊತ್ತಿಲ್ಲದ ಅವರು ಜ್ವರ ಬಂದು ಮಲಗಿದವರಲ್ಲ. ಈ ಅನುಭವವಿಲ್ಲದವರೂ ಇದ್ದಾರೆಂದರೆ ಈ ಕಾಲದಲ್ಲಿ ಯಾರೂ ನಂಬಲಾರರು ಅಲ್ಲವೇ? ಕೃಶ ಶರೀರದ ನೇರ ನಿಲುವಿನ ಅವರು ೮೦ ವರ್ಷದ ಬಳಿಕ ಸ್ವಲ್ಪ ಬಾಗಿದಂತೆ ಕಾಣುತ್ತಿದ್ದರು. ಹಗಲಲ್ಲಿ ಕೆಲಸದಾಳಿನ ಸಹಾಯ ಪಡೆದವರೂ ರಾತ್ರಿ ಒಂಟಿಯಾಗಿಯೇ ಬದುಕುತ್ತಿದ್ದ ಅವರ ಧೈರ್ಯವನ್ನು ಕಂಡರೆ ಅವರ ನಿರ್ಧಾರವನ್ನು ಎಲ್ಲರೂ ಆಕ್ಷೇಪಿಸುತ್ತಿದ್ದರು. ಯಾರ ಮಾತಿಗೂ ಸೊಪ್ಪು ಹಾಕದ ಅವರು ಕೊನೆಗಾಲದಲ್ಲಿ ಒಮ್ಮೆ ಮನೆಯೊಳಗೆ ಎಡವಿ ಬಿದ್ದು ಕಾಲಿನ ಮೂಳೆ ಮುರಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು. ಮಗಳು ವಿದೇಶದಿಂದ ಬಂದು ಆರೈಕೆಯಲ್ಲಿ ನಿರತಳಾದಳು. ಆದರೆ ಹೆಲೆನ್ ಟೀಚರು ಮೊದಲೇ ಮನಸ್ಸಿನಲ್ಲಿ ನಿರ್ಧಾರ ಮಾಡಿದಂತೆ 'ಸಲ್ಲೇಖನ ವ್ರತ' ಆಚರಿಸಿ ಆಸ್ಪತ್ರೆಯಿಂದ ಮನೆಗೆ ಮರಳಿದ ನಾಲ್ಕೇ ದಿನದಲ್ಲಿ ಮೃತರಾದರು. ಸಾವನ್ನು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾವಿನ ಭಯದಿಂದ ತಪ್ಪಿಸಿಕೊಳ್ಳುವವರು ವಿರಳ. ಪ್ರಪಂಚವೆಂಬ ಬಂಧೀಖಾನೆಯಲ್ಲಿ ನಾವೆಲ್ಲಾ ಕೈದಿಗಳಂತೆ ಬದುಕುತ್ತೇವೆ. ಬಾಗಿಲು ತೆರೆದು ಓಡಿ ಹೋಗಲು ಯಾರಿಗೂ ಸಾಧ್ಯವಿಲ್ಲ. ದೇವರು ಕರೆಯುವವರೆಗೂ ಕಾಯಬೇಕು ಎಂದು ನಂಬಿದ ಟೀಚರು ತಾನೇ ಬಾಗಿಲು ತೆರೆದು ಹೋದರೇ? 'ಸಲ್ಲೇಖನ ವ್ರತ'ವನ್ನು ತಪ್ಪು ಎಂದು ವಾದಿಸುವವರಿದ್ದಾರೆ. 'ದಯಾಮರಣ'ವನ್ನೂ ಅಪರಾಧವೆಂದು ಕಾನೂನು ಹೇಳುತ್ತದೆ. ಆತ್ಮಹತ್ಯೆಯಂತೂ ಮಹಾಪಾಪವೆಂದು ಎಲ್ಲಾ ಮತಗಳೂ ಸಾರುತ್ತವೆ. ಹಾಗಿದ್ದರೆ ನನಗೆ ಇನ್ನು ಬದುಕುವುದು ಇಷ್ಟವಿಲ್ಲ. ತನ್ನಿಂದ ಇತರರಿಗೆ ತೊಂದರೆಯಾಗುತ್ತದೆ. ನಾನು ಮಾಡಬೇಕಾದ ಕೆಲಸಗಳೆಲ್ಲಾ ಪೂರ್ಣಗೊಂಡಿವೆ. ಆದುದರಿಂದ ನಾನು ಮರಣವನ್ನು ಆಮಂತ್ರಿಸುತ್ತೇನೆ ಎಂದು ದೃಢಚಿತ್ತದಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿದ ಟೀಚರರ ನಿರ್ಧಾರವನ್ನು ಯಾರು ವಿರೋಧಿಸಿದರೂ ನನಗಂತೂ ಅದು ತಪ್ಪು ಎಂದು ಅನಿಸಲಿಲ್ಲ. ಸತ್ಕಾರ್ಯದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದರೆ ಸಾವಿನ ಭಯ, ನೋವು ಕಡಿಮೆಯಾಗುತ್ತದೆ. ಹೆಲೆನ್ ಟೀಚರು ತನ್ನ ಬದುಕಿನುದ್ದಕ್ಕೂ ವಿದ್ಯೆ ಮಾತ್ರ ಕಲಿಸಿದ್ದಲ್ಲ. ಅನೇಕ ಬಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸದ್ದಿಲ್ಲದೆ ಮಾಡಿದ ಇಂತಹ ಅನೇಕ ಉದಾಹರಣೆಗಳು ನನ್ನ ಕಣ್ಣ ಮುಂದಿವೆ. ಗಿಡದಲ್ಲಿ ಹೂ ಮೌನವಾಗಿ ಅರಳಿದಂತೆ, ಮರಗಳು ಯಾವುದೇ ಗೌಜಿಗದ್ದಲ ಮಾಡದೆ ಹಣ್ಣುಗಳನ್ನು ನೀಡಿದಂತೆ ಹೆಲೆನ್ ಟೀಚರರ ಜೀವನ ಸಾರ್ಥಕವಾಯಿತು. ಹೇಡಿಗಳು ಅನೇಕ ಸಲ ಸಾಯುತ್ತಾರಂತೆ, ಧೈರ್ಯವಂತರು ಮಾತ್ರ ಒಂದೇ ಸಲ ಸಾಯುತ್ತಾರಂತೆ. ಯಾರೋ ಹೇಳಿದ ಮಾತು ನೆನಪಾಗುತ್ತದೆ. ಹೌದು, ಸಾವು ಬೆಟ್ಟಕ್ಕಿಂತ ದೊಡ್ಡದೂ ಹೌದು, ಕೂದಲಿಗಿಂತ ಸಣ್ಣದೂ ಹೌದು. ಅದರ ಮಹತ್ವವನ್ನು ತಿಳಿಯುವುದು ಕಷ್ಟ. ತಿಳಿದವರೂ ವಿರಳ.