Showing posts with label ಪಡ್ಡಾಯಿ. Show all posts
Showing posts with label ಪಡ್ಡಾಯಿ. Show all posts

03 May 2018

ಕಿರಿದರೊಳ್ ಪಿರಿದರ್ಥಮನ್....

(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೫)

ಆರು ಗಂಟೆಯ ಯಕ್ಷಗಾನ, ನೂರು ಮಿನಿಟಿನ ಸಿನಿಮಾದೊಳಗೆ?! 

‘ಪಡ್ಡಾಯಿ’ ಸಿನಿಮಾವನ್ನು ಪೂರ್ಣ ಆವರಿಸಿದ ಕಡಲು ಮತ್ತು ಮೀನುಗಾರಿಕೆ ಪ್ರಥಮದಲ್ಲೇ ಇದನ್ನು ಕರಾವಳಿಯ ಪ್ರತಿನಿಧಿ ಎಂದೇ ಸ್ಥಾಪಿಸುತ್ತದೆ. ಅದಲ್ಲದೆ ಪ್ರಾದೇಶಿಕತೆಯ ಹೆಚ್ಚಿನ ಮುದ್ರೆ ಒತ್ತಲು ಚಿತ್ರದಲ್ಲಿ ಬಳಸಿಕೊಂಡ ಇನ್ನೆರಡು ಬಹುಶಕ್ತ ಅಂಶಗಳು - ಭೂತಾರಾಧನೆ ಮತ್ತು ಯಕ್ಷಗಾನ. ಭೂತಾರಾಧನೆ ನೇರ ಕಥಾನಕದ ಭಾಗವಾಗಿಯೇ ಸೇರಿದೆ. 

18 April 2018

‘ಸಮುದ್ರ’ದ ತಡಿಯಲ್ಲಿ.... ನೊರೆತೆರೆಗಳಿಗಂಜಿದೊಡೆಂತಯ್ಯಾ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೪) 


‘ಪಡ್ಡಾಯಿ’ (ಪಶ್ಚಿಮ) - ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು ವಿವಿಧ ಋತುಮಾನಗಳಿಗೆ ಹಂಚಿಕೊಂಡು ದೀರ್ಘ ಕಾಲ ನಡೆಸುವ ಅನುಕೂಲ ಅಭಯನಿಗಿರಲಿಲ್ಲ; ಇದು ‘ಮಿತ ಹಣಕಾಸಿನ ಯೋಜನೆ.’ ಅಭಯ ಮಳೆಗಾಲದ ಕೊನೆಯ ಭಾಗ ಅಥವಾ
ಮೀನುಗಾರಿಕಾ ಋತುವಿನ ಮೊದಲ ಭಾಗ ಆಯ್ದುಕೊಂಡಿದ್ದ. ಮತ್ತು ಒಂದೇ ಹಂತದ ಚಿತ್ರೀಕರಣವನ್ನು ನಡೆಸಿದ. ಅದರಲ್ಲಿ ದೃಶ್ಯಗಳ ವಾಸ್ತವ ‘ವ್ಯವಸ್ಥೆ’ಯನ್ನೇ ತಮ್ಮ ಅನುಕೂಲಕ್ಕೆ ಸಮರ್ಥವಾಗಿ ಬಳಸಿಕೊಳ್ಳುವುದರಲ್ಲೇ ತೃಪ್ತನಾದ. 

ಚಿತ್ರದ ವೆಚ್ಚ ಉಳಿಸುವ ಒತ್ತಡದಲ್ಲಿ ನಟವರ್ಗ ಬಹುತೇಕ ಉಡುಪು ತೊಡಪುಗಳನ್ನು ಉದಾರವಾಗಿ ತಾವೇ ಒದಗಿಸಿಕೊಂಡಿತ್ತು. ಚಿತ್ರೀಕರಣ ಸುಮಾರು ಮೂರು ವಾರಗಳ ಅಂತರದಲ್ಲಿ, ಅದೂ ಹೆಚ್ಚಾಗಿ ತಂಡದ ಹೆಚ್ಚಿನ

06 April 2018

‘ಕಡಲ ಗುಳಿಗೆ’ ದಿನೇಶ್ ಉಚ್ಚಿಲ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೩)

(ಚಕ್ರೇಶ್ವರ ಪರೀಕ್ಷಿತ ೨೧)


ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ - ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು ಇಪ್ಪತ್ತೈದು ಮಂದಿ ಆಳ ಸಮುದ್ರದ ಮೀನುಗಾರಿಕಾ ಅನುಭವ ನೋಡಲು ಹೋಗಿಬಂದದ್ದು ಅವಿಸ್ಮರಣೀಯ. (ನೋಡಿ: ಸಾಗರ ಸವಾರರು) ಒಂದು ಕಾಲದಲ್ಲಿ ಕಡಲಿನಲ್ಲಿ ಮೀನು ಗುರುತಿಸುವಲ್ಲಿ, ಬಲೆಬೀಸುವ ಜಾಣ್ಮೆ ಹಾಗೂ ತಾಕತ್ತಿನಲ್ಲಿ ಕಡಲ ಗುಳಿಗನೆಂದೇ ಖ್ಯಾತಿವೆತ್ತ ದಿನೇಶರು ಇಂದು ಪ್ರಾಯ ಸಹಜವಾಗಿ ಮೀನುಗಾರಿಕೆಯಿಂದ ನಿವೃತ್ತರಾಗಿ, ಅದೇ ಕಣ್ವತೀರ್ಥದ ಬಳಿಯ ಕಡಲಕಿನಾರೆಯ ಮನೆಯಲ್ಲೇ ಇದ್ದಾರೆ.

19 March 2018

ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು

(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೨)


ಮನೆ, ಮನೆ - ಯಾಕ್ಟಿಂಗ್ ಸೂಪರ್ರ್!

ಸಿನಿಮಾಕ್ಕೆ ದೊಡ್ಡ ಹಣಕಾಸಿದ್ದರೆ ಮನೆ, ಪರಿಸರದ ‘ಆಯ್ಕೆ’ ಸುಲಭ. ಕತೆಗೆ ಬೇಕಾದ ಪರಿಸರ, ಮನೆಯನ್ನು, ಚುರುಕಾಗಿ ತತ್ಕಾಲೀನವಾಗಿ ಕಟ್ಟುವ ನಿಪುಣರು ಈ ಉದ್ಯಮದಲ್ಲಿದ್ದಾರೆ. ಈ ರಚನೆಗಳು ನಿರ್ದಿಷ್ಟ ಉದ್ದೇಶ ಮತ್ತು ಸನ್ನಿವೇಶದಲ್ಲಿ ಕ್ಯಾಮರಾ ಕಣ್ಣಿಗೆ ಮಾತ್ರ ಸಾಚಾ ಸಾಬೀತಾಗುತ್ತವೆ. ಆದರೆ ಕಿರು ಬಜೆಟ್ಟಿನ ‘ಪಡ್ಡಾಯಿ’ ಸಹಜವಾಗಿರುವ ವ್ಯವಸ್ಥೆಗಳನ್ನೇ ತಮ್ಮ ಅಭಿವ್ಯಕ್ತಿಗೆ ಒಗ್ಗಿಸಿಕೊಳ್ಳಬೇಕಿತ್ತು. ಹೆಚ್ಚಾಗಿ ಅಂಥವು ನಿತ್ಯ ಬಳಕೆಯ ಸ್ಥಳಗಳೂ ಆಗುವುದರಿಂದ ಅನುಮತಿ,
ಸಣ್ಣಪುಟ್ಟ ತಿದ್ದುಪಡಿ, ಸಂಭಾವನೆ ಇತ್ಯಾದಿ ಚೌಕಾಶಿಗಳನ್ನು ಮಾಡಿಕೊಳ್ಳುವುದು ಅವಶ್ಯ. ಕಡೇ ಗಳಿಗೆಯಲ್ಲಿ ಯಾವ್ಯಾವುದೋ ಕಾರಣಕ್ಕೆ ಕೆಲವೊಮ್ಮೆ ಅವು ತಪ್ಪುವುದು, ಚಿತ್ರ ತಂಡ ರಾಜೀ ಮಾಡಿಕೊಳ್ಳುವುದು - ಎಂದೂ ಮುಗಿಯದ ಕತೆ. ನಾಲ್ಕೈದು ಮನೆ, ಕಡಲ ಕೊರೆತದ ಹಾವಳಿ, ಮಾರುಕಟ್ಟೆ, ವಾಹನಗಳು, ಮಾಲ್, ರಸ್ತೆ, ‘ಮುಂಬೈ’, ಎಲ್ಲಕ್ಕೂ ಮುಖ್ಯವಾಗಿ

12 March 2018

‘ಪಡ್ಡಾಯಿ’ - ಹೊಸ ತುಳು ಸಿನಿಮಾದುದ್ದಕ್ಕೆ....

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೧)

ಅಭಯಸಿಂಹ (ಮಗ) ಮೂರು ವರ್ಷ ಪ್ರಾಯಕ್ಕೇ ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ, ಶಿಬಿರವಾಸ ಅನುಭವಿಸಿದ್ದ. ಆತನ ಕಾಲ ಕಸುವು ಹೆಚ್ಚಿದಂತೆಲ್ಲ ಕುದುರೆಮುಖ, ಕುಮಾರಪರ್ವತ, ಕೊಡಚಾದ್ರಿ, ಜಮಾಲಾಬಾದ್, ಹಿರಿಮರುದುಪ್ಪೆಯಾದಿ ಈ ವಲಯದ ಹಿರಿ ಶಿಖರಗಳು, ಕಾಡು, ಜಲಪಾತಾದಿಗಳ ಪರಿಸರಗಳಲ್ಲಿ ನನ್ನ ಮತ್ತು (ಹೆಂಡತಿ) ದೇವಕಿಯ ಹೆಜ್ಜೆ ಗುರುತು ಮೂಡಿದಲ್ಲೆಲ್ಲ ಪುಟ್ಟಪಾದದ ಗುರುತುಗಳು ಸೇರುತ್ತಲೇ ಇದ್ದವು. ಅವನು ಬಯಸಿದ ‘ವನವಾಸ’ವನ್ನು, ಚಳಿ ಬಿಸಿಲುಗಳಿರಲಿ, ಕುಮಾರಪರ್ವತದ ನೆತ್ತಿಯ ಮಳೆಗಾಲಕ್ಕೂ ನಿರಾಕರಿಸುವುದಾಗಲಿಲ್ಲ. ವಿಸ್ತರಿಸುವುದಿಲ್ಲ, ಒಟ್ಟಾರೆ ಇವನ ಬಾಲ್ಯ ಬಹು ದೊಡ್ಡ ಪ್ರಭಾಪ್ರಕೃತಿ, ಅದರ ತಾಜಾತನದಲ್ಲಿ. ಇನ್ನವನ ಆದರ್ಶ...

ಅಭಯ ತನ್ನ ಅನುಭವ ಮತ್ತು ಅಭಿವ್ಯಕ್ತಿಗೆ ಇನ್ನೂ ಪುಣೆಯಲ್ಲಿ ಚಲಚಿತ್ರದ ಮಾಧ್ಯಮ ರೂಢಿಸಿಕೊಳ್ಳುತ್ತಿದ್ದಾಗಲೇ (ಎಫ್.ಟಿ.ಐ.ಐ) ಸೂಕ್ತ