Showing posts with label ಗಿರಿಧರ ಕೃಷ್ಣ. Show all posts
Showing posts with label ಗಿರಿಧರ ಕೃಷ್ಣ. Show all posts

20 July 2017

ಮಳೆಗಾಲದ ಮಲೆನಾಡ ಸುತ್ತಾಟ

ಗಿರಿಧರ ಕೃಷ್ಣ


[ಕರಾವಳಿ ಬಾಲ್ಯದ, ವೃತ್ತಿತಃ ಬೆಂಗಳೂರಿನ ಗಿರಿಧರ ಕೃಷ್ಣ ಪ್ರಕೃತಿಪರ ಚಟುವಟಿಕೆ ಪ್ರಿಯ. ಈ ಕಾಲಕ್ಕೆ `ಓದು ಕಳೆದು ಹೋದವರ’ ಗುಂಪಿನಲ್ಲಿ ನಿಲ್ಲದೇ ಗಿರಿ, ನನ್ನನ್ನೂ ಸ್ವಲ್ಪ ಓದಿಕೊಂಡದ್ದಕ್ಕೆ ಮತ್ತು ಅನುಸರಿಸುವ ಪ್ರಯತ್ನ ಮಾಡಿದ್ದಕ್ಕೆ, ಎರಡು ವರ್ಷಗಳ ಹಿಂದೆ ನಮ್ಮೊಡನೆ ಆತ ಕುದುರೆಮುಖ ಶಿಖರಕ್ಕೆ ಬಂದದ್ದೇ ದೊಡ್ಡ ಸಾಕ್ಷಿ. (ಇಲ್ಲಿದೆ ಪ್ರವೇಶಿಕೆ – ಕುದುರೆ ಕೆನೆಯುತಿದೆ ಕೇಳಿದಿರಾ!). ಅವರು ಸಿಕ್ಕಾಗೆಲ್ಲ, ಹಿಂದೆ ಸ್ವತಂತ್ರವಾಗಿ ನಡೆಸಿದ ಚಟುವಟಿಕೆಗಳ ಕೆಲವು ಸ್ವಾರಸ್ಯಗಳನ್ನು ನೆನಪಿಸಿಕೊಳ್ಳುವುದಿದೆ. ಆದರೆ ಸ್ವತಃ ಒಳ್ಳೇ ಓದುಗನಾಗಿಯೂ ತನ್ನ ಅನುಭವಕ್ಕೆ ಲಿಖಿತ ಅಭಿವ್ಯಕ್ತಿ ಕೊಡುವಲ್ಲಿ ಮಾತ್ರ ಎಂದೂ ಯೋಚಿಸಿದಂತಿರಲಿಲ್ಲ. ಈ ವಿಚಾರಲಹರಿಯ ಮುನ್ನೆಲೆಯಲ್ಲಿ, ಕಳೆದ ವರ್ಷ (೨೦೧೬ ಜುಲೈ) ಗಿರಿ ತನ್ನದೇ ಬಳಗ ಕಟ್ಟಿಕೊಂಡು ಮಳೆಗಾಲದ ಮಲೆನಾಡು ಸುತ್ತಾಟ ಸಣ್ಣದಾಗಿ ನಡೆಸಿದಾಗ ನಾನು ಹಿಡಿದುಕೊಂಡೆ. “ಇಂದಿನ ಕ್ಯಾಮರಾ ಕ್ರಾಂತಿಯಲ್ಲಿ ಹತ್ತು ಆಕರ್ಷಕ ಚಿತ್ರ ಫೇಸ್ ಬುಕ್ಕಿಗೆ ಯಾರೂ ಏರಿಸಿಯಾರು. ಅದನ್ನು ಗಳಿಸಲು ನಡೆಸಿದ ಸಾಹಸ ಎಷ್ಟು ಸಣ್ಣದಾದರೂ ಮತ್ತದರ ಸಾಮಾಜಿಕ ಉಪಯುಕ್ತತೆ ತೋರ ನೋಟಕ್ಕೆ ನಗಣ್ಯವಾಗಿ ಕಾಣಿಸಿದರೂ ದಾಖಲಿಸುವ ಅವಶ್ಯಕತೆ ಇದ್ದೇ ಇದೆ. ಬಹುಮಂದಿ ಇದರಲ್ಲಿ ಸೋಲುತ್ತಾರೆ. ತಾಕತ್ತಿದ್ದರೆ ನೀವು ಬರೆಯಿರಿ ನೋಡೋಣ” – ನನ್ನ ಸವಾಲು.