Showing posts with label ವನ್ಯ ಸಂರಕ್ಷಣೆ. Show all posts
Showing posts with label ವನ್ಯ ಸಂರಕ್ಷಣೆ. Show all posts

21 January 2022

ಡಾ| ಕೃಷ್ಣಮೋಹನ ಪ್ರಭು ಇನ್ನಿಲ್ಲ

(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು ಪರಿಷ್ಕರಿಸಿ ಸಂಕಲಿಸಿದ್ದೇನೆ. ಫೇಸ್ ಬುಕ್ಕಿನಲ್ಲಿ ವಿಷಾದ ವ್ಯಕ್ತಪಡಿಸಿದವರು, ತಮ್ಮ ವಲಯದ ಇನ್ನಷ್ಟು ಮಂದಿಗೆ ಮುಟ್ಟಿಸಿದವರು ನೂರಾರು. ಅಲ್ಲಿ ಬಂದ ಕೆಲವು ವಿಷಯಕ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರತಿಕ್ರಿಯಾ ಅಂಕಣದಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ. ಹಾಗೇ ಸುದೀರ್ಘ ಟಿಪ್ಪಣಿಯನ್ನೇ ಕೊಟ್ಟ ‘ಪವಾಡ ವಿರೋಧಿ’ ನರೇಂದ್ರ ನಾಯಕ್ ಮತ್ತು ಹಿರಿಯ ವೈದ್ಯ ಮಿತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬರಹಗಳನ್ನು, ಅವರ ಅನುಮತಿಯೊಡನೆ ಇದಕ್ಕೆ ಅನುಬಂಧಗಳಾಗಿ ಬಳಸಿಕೊಂಡಿದ್ದೇನೆ)


ಕೃಶಿ ತೊರೆ ಬತ್ತಿಹೋಯ್ತು

ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ - ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು; ಮಿತ್ರವಲಯಕ್ಕೆ ಕೃಶಿ. ಮುಂದೆ ನನ್ನ ಮಾತಿನ ಚಪಲಕ್ಕೋ, ಕೃಶಿಯದೇ ಮಿತಿಯರಿಯದ ಕುತೂಹಲಕ್ಕೋ ನಮ್ಮೊಳಗೆ ಅಪೂರ್ವ ಗೆಳೆತನದ ಬಂಧ ಏರ್ಪಟ್ಟಿತ್ತು. ಮತ್ತದು ಸುಮಾರು ಮೂವತ್ತೇಳು ವರ್ಷಗಳ ಉದ್ದಕ್ಕೆ ದೃಢವಾಗಿ ಬೆಳೆದಿತ್ತು. ಆದರೆ ಈಚೆಗೆ (೧೧-೧-೨೦೨೨) ತೀರಾ ಅನಿರೀಕ್ಷಿತವಾಗಿ, ಅಕಾಲಿಕವಾಗಿ ಮತ್ತು ಯಾವತ್ತಿಗೂ ಕಡಿದು ಹೋಯ್ತು; ಕೃಶಿ ಇನ್ನಿಲ್ಲ!

04 September 2019

ದಿಡುಪೆ ದುರಂತದ ಪ್ರತ್ಯಕ್ಷದರ್ಶನ

ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ - ಮುಕ್ಕಾಲು ಗಂಟೆಯಷ್ಟೇ ಬಂತು - ಮೇಘಸ್ಫೋಟದಂಥ ಮಳೆ. ಚಾರ್ಮಾಡಿಯಿಂದ ದಿಡುಪೆಯವರೆಗಿನ ವಲಯಕ್ಕಷ್ಟೇ ಮಿತಿಗೊಂಡ ಬಾನಬೋಗುಣಿ ಕವುಚಿದಂತಹ ಈ ನೀರು ನಡೆಸಿದ ಉತ್ಪಾತಗಳು ಸಾಮಾನ್ಯ ಲೆಕ್ಕಕ್ಕೆ ಸಿಗುವಂತದ್ದಲ್ಲ. ಅದರ ಸಣ್ಣ ನೋಟವಾದರೂ ನಮಗೊಂದು ಪಾಠವೆಂದುಕೊಂಡೇ ನಾವು ನಾಲ್ವರು ಮೊನ್ನೆ (೨೫-೮-೧೯) ಕಾರೇರಿ ಹೋಗಿದ್ದೆವು.
ಮಂಗಳೂರು - ಬೆಳ್ತಂಗಡಿ ಮಾಡಿ, ಎಡದ ಬಂಗಾಡಿ - ಕಿಲ್ಲೂರು ದಾರಿಗಳಲ್ಲಾಗಿ ಮೊದಲು ನಿಂತ ಸ್ಥಳ ಕಾಜೂರು. 

30 April 2019

ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ


‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ ಇಳಿಯುವುದನ್ನೇ ಕಾದಿದ್ದಂತೆ, ಮೂಡಿಗೆರೆ ಬಸ್ ನಮ್ಮನ್ನು ತುಂಬಿಕೊಂಡಿತು. ಐದೂಮುಕ್ಕಾಲಕ್ಕೆ ರಕ್ಷಿದಿಯಲ್ಲಿದ್ದೆವು. ನಾಟಕ ಒಂಬತ್ತೂಕಾಲರ ಅಂದಾಜಿಗೆ ಮುಗಿದಿತ್ತು. ಮತ್ತೆ ಪ್ರಸಾದರ ಕೃಪೆಯಲ್ಲಿ ಸಕಲೇಶಪುರ, ಬಸ್ಸಿಡಿದು ಅಪರಾತ್ರಿಯಲ್ಲೇ ಮಂಗಳೂರಿಗೆ ಮರಳಿದ್ದೆವು. ಪ್ರತಿಯಾಗಿ ನಾನು ಪ್ರಸಾದರಿಗೆ ಕಳಿಸಿದ ಕೃತಜ್ಞತಾ ಸಂದೇಶದ ಭರತ ವಾಕ್ಯ ಹೀಗಿತ್ತು - ‘ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ಒಂದು ನಾಟಕವೇ ಅಲ್ಲ!’

04 February 2019

ಪರಿಸರ ವರ್ತಮಾನದ ತಲ್ಲಣಗಳು

[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಆಕಾಶವಾಣಿ ಮಂಗಳೂರು ಜಂಟಿಯಾಗಿ ಆಯೋಜಿಸಿ ಸಂತ ಏಗ್ನೆಸ್ ಕಾಲೇಜಿನಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ, ನಾನು ಮಂಡಿಸಿದ ಆಶಯ ಭಾಷಣ.] 

ಮಿತ್ರರೇ 

ನಾನು ಔಪಚಾರಿಕ ಭಾಷಣಕಾರನಲ್ಲ. ಮತ್ತೆ ಸ್ವಂತ ಅನುಭವಕ್ಕೆ ದಕ್ಕದೇ ಇರುವುದರ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಕೊರೆಯುವುದು ನನಗೆ ಒಗ್ಗುವುದೂ ಇಲ್ಲ. ಹಾಗಾಗಿ ನೂರೆಂಟು ವಿಚಾರಗಳ ಕಾಡಿನಲ್ಲಿ, ಇಂದಿನ ಗುರಿ ಕಳೆದುಹೋಗದಂತೆ ಬರೆದು ತಂದದ್ದನ್ನೇ ಆದಷ್ಟೂ ನಿಧಾನಕ್ಕೆ ಓದುತ್ತೇನೆ. 

31 December 2018

ಕಾಡಿಗೆ ಪೆಡಲಿ ಸಂಪೂರ್ಣಂ

(ಸೈಕಲ್ಲೇರಿ ವನಕೆ ಪೋಗುವಾ ೨) 


ಜೈಸಮಂಡ್, ಹವಾಮಹಲ್

ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ ಢಮ್ಮ ಢಕ್ಕದ ಗದ್ದಲ, ತಿಲಕ, ಹಾರಗಳ ಸ್ವಾಗತ ಸಜ್ಜುಗೊಳಿಸಿತ್ತು. ಭಾಗ್ದೋರಾದಲ್ಲಿ ತೊಡಗಿದ್ದ ಈ ನಾಟಕ, ಅಲ್ಲಲ್ಲಿ ಮರುಕಳಿಸಲಿದೆ ಎಂಬ ಸೂಚನೆ ನನಗೆ ಹಿಡಿಸಲಿಲ್ಲ, ನಾನು (ಇನ್ನೂ ಕೆಲವರು) ತಲೆತಪ್ಪಿಸಿಕೊಂಡೆ. "ನಾಮ ಎಂಥದ್ದೋ ಕೆಮಿಕಲ್ ಮಾರಾಯ್ರೇ, ತೊಳೆದರೆ ಸುಲಭವಾಗಿ ಹೋಗುದಿಲ್ಲ" ಎಂದು ಹರಿ ಹೇಳಿದ್ದು ನನಗೆ ಹೆಚ್ಚಿನ ಅನುಕೂಲವೇ ಆಯ್ತು. ನಿಜದಲ್ಲಿ, ಕಟ್ಟೆಯಾಚಿನ

20 December 2018

ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ

ಹೊಸ್ತಿಲಲ್ಲಿ ಮುಗ್ಗರಿಸಿದವ!

ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ - ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ "ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ" ಎಂದು ರಾಗ ತೆಗೆದರು. ಅರೆ, ಇದ್ಯಾವ ಹೊಸ ಯಕ್ಷ-ಪ್ರಸಂಗಾಂತ ಒಮ್ಮೆ ಬೆರಗಾದೆ. ಆದರೆ ಅವರು ಚರಣಗಳಲ್ಲಿ,
ನವೆಂಬರ್ ೨೯,೩೦ ಮತ್ತು ಡಿಸೆಂಬರ್ ೧,೨ ದಿನಗಳನ್ನು ಸೂಚಿಸಿದರು. ವ್ಯವಸ್ಥೆ ರಾಜಸ್ತಾನದ ಅರಣ್ಯ ಇಲಾಖೆಯ ವನ್ಯ ವಿಭಾಗದ್ದು. ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರವಾಸೀ ಸಂಸ್ಥೆ ‘ಲೆ ಟೂರ್ ಇಂಡಿಯಾ’ ಇತ್ತು. ಆದರೂ ಕೇವಲ ಒಂಬತ್ತೇ ಸಾವಿರ ರೂಪಾಯಿಗೆ ವನಧಾಮಕ್ಕೆ ಪ್ರವೇಶಾನುಮತಿ, ಮಾರ್ಗದರ್ಶನ, ಬೆಂಬಲ, ಊಟ, ವಾಸ, ಸ್ಥಳೀಯ ಪಯಣ.... ಎಂದೆಲ್ಲ ರಾಗ ತಾಳ ವಿಸ್ತರಿಸಿದಾಗ ನಾನೂ ಗೆಜ್ಜೆ ಕಟ್ಟಿ, ಹೆಜ್ಜೆ ಕೂಡಿಸಿದೆ. ಮಂಗಳೂರಿನ ತಂಡವೆಂಬ ಹೆಸರಿಗೆ, ಇನ್ನೋರ್ವ ಸೈಕಲ್ ಗೆಳೆಯ - ಅನಿಲ್ ಕುಮಾರ್ ಶಾಸ್ತ್ರಿ, (ಹಿಂದೂ ಪತ್ರಿಕೆಯ ಪ್ರತಿನಿಧಿ) ಸೇರಿಕೊಂಡರು. 

28 August 2018

ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ


ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ ಪ್ರಾಥಮಿಕ ರಕ್ಷಣೆ ಮತ್ತು ಪೋಷಣೆಗೆ ಸ್ವಯಂಸೇವಕರು ತೊಡಗಿಸಿಕೊಂಡದ್ದು ಹೃದಸ್ಪರ್ಷಿಯಾಗಿತ್ತು. ಅದರಲ್ಲೂ ಮುಂದುವರಿದಂತೆ ನಿರಾಶ್ರಿತರ ಪೂರ್ವಸ್ಥಿತಿಸ್ಥಾಪನೆಯಲ್ಲೂ ಪ್ರಜಾಪ್ರತಿನಿಧಿಗಳು ಮತ್ತು ಸರಕಾರ ಬಹ್ವಂಶ ನಿಧಾನಿಗಳೂ ಅದಕ್ಷರೂ (ಭ್ರಷ್ಟತೆಯಿಂದಾಗಿ) ಆಗುವುದು ಇಂದು ನಮ್ಮ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಈ ಜನ, ಆಸ್ತಿಗಳ ಬಹುದೊಡ್ಡ
ದುರಂತದಲ್ಲಿ ಆಡಳಿತ ದೊಡ್ಡ ಧ್ವನಿಯಲ್ಲಿ ದೂಷಿಸುವುದು ಪ್ರಕೃತಿಯನ್ನು! ಪ್ರಸ್ತುತ ಸನ್ನಿವೇಶದಲ್ಲಿ ಮೊದಲನೇ ಖಳಸ್ಥಾನದಲ್ಲಿ ನೀರಿಗಿದ್ದರೆ, ಎರಡನೇದು ನೆಲ. ಪ್ರಕೃತಿ ಎಲ್ಲಕ್ಕೂ ಅತೀತ; ಆರಾಧನೆಗೆ ಉಬ್ಬದು, ಅವಹೇಳನಕ್ಕೆ ಕುಗ್ಗದು, ಮೌನಿ. ಅಂಥ ಪ್ರಕೃತಿಯ ಮೇಲೆ, ನಿಜದಲ್ಲಿ ಎಲ್ಲ ಜೀವಾಜೀವಗಳ ಮೂಲಶಕ್ತಿಯ ಮೇಲೆ ತೀರ್ಪು ಕೊಡುವ ದಾರ್ಷ್ಟ್ಯ ನನ್ನದಲ್ಲ. ಆದರೆ ಅದರೊಡನೆ ಯಥಾಮಿತಿ ಮುಖಾಮುಖಿ ನಡೆಸಿ, ಸ್ವಲ್ಪವಾದರೂ ತಿಳಿದುಕೊಳ್ಳುವ ಹಂಬಲ ನನ್ನನ್ನು ಬಿಟ್ಟದ್ದಿಲ್ಲ. ಹಾಗಾಗಿ ನೀರು ಹಿಂಜರಿದದ್ದೇ

28 June 2018

ಮಣ್ಣಪಾಪು ಮನೆ ಮತ್ತು ಕಪ್ಪೆ ಶಿಬಿರ


ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆಗಿದ್ದ ಜೀವನ ಜತೆಗಾತಿ ದೇವಕಿಗೆ "ನಿಟ್ಟೆ-ಬಿಟ್ಟೆ, ಕಾರುಕಳ್ಳ, ಗೋಳಿಬಜೆ..." ನನ್ನ ಮಾಮೂಲೀ ಹಾಸ್ಯ ಉದ್ಗಾರಗಳು. ಅವನ್ನು ಕಳೆದು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ತನಿಖಾಠಾಣೆಯಲ್ಲಿ ಓಟ ನಿಧಾನಿಸಿದೆವು. ನೇರ ಮುಂದುವರಿಯುವ, ಅಂದರೆ ಭಗವತಿ ಘಾಟಿ (ಕುದುರೆಮುಖ ನಗರಕ್ಕೆ ಹೋಗುವ ದಾರಿ) ಏರುವ ಸಂಗತಿ, ಕಳೆದ ಸುಮಾರು ನಲ್ವತ್ತು ವರ್ಷಗಳಲ್ಲಿ
ನಾನು ಮಾಡಿದ್ದಕ್ಕೆ ಲೆಕ್ಕವಿಲ್ಲ. ಆದರೆ ಅದು ಬಿಟ್ಟು, ಅಲ್ಲೇ ಬಲ ತಿರುಗುವ, ಅಂದರೆ ಕೈಕಂಬ ಮನ್ನಿಸಿ ಮಾಳದತ್ತ ಮುಖ ಮಾಡಿದ್ದು, ತೀರಾ ಈಚೆಗೆ ಮತ್ತು ಇದು ಎರಡನೇ ಸಲ. 
ತಿಂಗಳ ಹಿಂದಷ್ಟೇ ಗೆಳೆಯ ಡಾ| ಕೃಷ್ಣಮೋಹನ ಪ್ರಭು (ಕೃಶಿ) ಜೊತೆಯಲ್ಲಿ ಕಾರಿನಲ್ಲಿ ಮೂಡಬಿದ್ರೆಯಿಂದ ಹೀಗೇ ಬಂದಿದ್ದೆ. ದಾರಿ ಸ್ವಲ್ಪ ಒಳಹೋದಂತೆ ನೇರ ಇಳಿಜಾರಾಗಿತ್ತು. ಆಗ ಒಮ್ಮೆಲೆ ಎದುರಿನ ಕಡುಹಸಿರ ವಿಸ್ತಾರ ಕಣಿವೆ, ತೆಳು ಬಿಸಿಲಿನಲ್ಲಿ ಕಣ್ಣ ತುಂಬಿತ್ತು. ದಪ್ಪನಾಗಿ ಹಾಸಿದ್ದ

02 April 2018

ವೈಲ್ಡ್ ಬೋರ್ ಕಾರಿಡಾರ್!!



ಕಾಡುಬಿದ್ದ ಕೃಷಿಭೂಮಿಗಳನ್ನು ಕಾಡಿಗೇ ಮರಳಿಸುವ ಯೋಜನೆಯ ಪ್ರಥಮ ಹೆಜ್ಜೆ ನಮ್ಮ `ಅಶೋಕವನ’ದ್ದು. (ಡಾ|ಕೃಷ್ಣಮೋಹನ್ ಮತ್ತು ನಾನು ಸ್ವಂತ ಹಣದಲ್ಲಿ ಕೊಂಡ ನೆಲ. ಹೆಚ್ಚಿನ ವಿವರಗಳಿಗೆ ನೋಡಿ: ಅಶೋಕವನ) ನನ್ನ ಪುಸ್ತಕದಂಗಡಿಯನ್ನು ಮುಚ್ಚಿದ ಮೇಲೆ, ಅದೇ ಬಿಸಿಲೆ ವಲಯದಲ್ಲಿ ಹೀಗೇ ಹಡಿಲುಬಿದ್ದ ಇನ್ನಷ್ಟು ಖಾಸಗಿ ಭೂಮಿಗಳನ್ನು, ಇನ್ನಷ್ಟು ವನ್ಯಾಸಕ್ತರ ಮಡಿಲಿಗೆ ಹಾಕಿ, ಸರಕಾರ ಮಾಡದ ವನ್ಯಸಂರಕ್ಷಣೆಯನ್ನು ಸಾಧಿಸುವ ಉತ್ಸಾಹವೂ ನಮ್ಮದಿತ್ತು. ಆದರೆ ಸರಕಾರ `ಎಲಿಫೆಂಟ್ ಕಾರಿಡಾರ್’ ಅರ್ಥಾತ್ ಆನೆಗಳೋಣಿ ಎಂಬ ಹುಸಿ

05 October 2017

ಜೀವವೈವಿಧ್ಯ ಗುರುತಿಸುವಲ್ಲಿ......

ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ ಹೆಜ್ಜೆಯ ಜೀವ ಕಲಾಪದ ದಾಖಲೆ ಮಾತ್ರ ಆಯ್ತು. ವರ್ಷದ ಇತರ ಋತುಮಾನಗಳಲ್ಲಿ ಇದೇ ಕಪ್ಪೆಗಳ ವರ್ತನೆ ಏನು? ಅದಕ್ಕೂ ಮುಖ್ಯವಾಗಿ ಒಟ್ಟಾರೆ ಪ್ರಾಣಿಪರಿಸರವನ್ನು ಗಾಢವಾಗಿ ಪ್ರಭಾವಿಸುವ ಸಸ್ಯಪರಿಸರದ ತಿಳುವಳಿಕೆ ಗಳಿಸಿದರೆ ಹೇಗೆ? ಎಂಬ ಪ್ರಶ್ನೆಗಳಿಗೆ ತೀರಾ ಸಣ್ಣ ಉತ್ತರವಾಗಿ, ಗುಬ್ಬಿ ಲ್ಯಾಬ್ಸ್ ಮೊನ್ನೆ ಮೂರು ದಿನ (ಸೆಪ್ಟೆಂಬರ್ ೧೫ರಿಂದ ೧೭, ೨೦೧೭) ಮತ್ತೆ ಬಿಸಿಲೆಯ ಅಶೋಕವನ ಕೇಂದ್ರಿತವಾಗಿ ಇನ್ನೊಂದೇ

21 June 2017

ಬಿಸಿಲೆಯಲ್ಲಿ ಪ್ರೇಮ ಪರ್ವ


“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ....” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ ಮಗುದೊಬ್ಬ. ಪೊದರ ತಳದ ಕೊಳೆತ ಎಲೆಗಂಟಿದ ಕಸಕ್ಕೂ ಕಿರಿದಾದ ಮೂರ್ತಿಯಾದರೇನು ಗಾನಗೋಷ್ಠಿಗೆ ಕುಂದಿಲ್ಲದ ಎತ್ತರದ ಧ್ವನಿಯವನೀತ, ಕೆರೆಗೆ ವಾಲಿದ ಹಸಿರಗೆಲ್ಲಿನಲ್ಲಿ ಜೋಕಾಲಿಯಾಡುತ್ತ ಸಮೂಹಗಾನಕ್ಕೆ ಕಂಠಕೊಟ್ಟವನಾತ. ಹಸಿರಂಗಿ ಹಳದಿ ಚಡ್ಡಿಯವನಂತೂ ಗಾನಲಹರಿಯಲ್ಲಿ ಆ ಎತ್ತರದಿಂದ ಇನ್ನೊಂದೇ ಬಿತ್ತರಕ್ಕೆ ತೇಲಾಡುತ್ತಿದ್ದ. ಒಡಕು ಬಂಡೆಯ ಇರುಕಿನಲ್ಲಿ, ಭಾರೀ ಮರದ ಬೊಡ್ಡೆಗಂಟಿ, ಸುಯ್ಗುಟ್ಟುವ ವಾಟೆಗೆ ನೇತುಬಿದ್ದಂತೆಲ್ಲ ಕಂಡ, ಕಾಣದ ತಾಣಗಳಿಂದ, ಸರ್ವವ್ಯಾಪೀ ಸ್ಥಿತಿಯಲ್ಲಿ, ಘೋರಾಂಧಕಾರವೇ ಮಧುರಭಾವ ತಳೆದಂತೆ, ಹನಿ ಕುಟ್ಟುವ ತಾಳಕ್ಕೆ, ಬಿಬ್ಬಿರಿಗಳು ಹಿಡಿದ ಶ್ರುತಿಗೆ ಪಲ್ಲವಿಸುತ್ತಿದ್ದ ರಾಗ ಒಂದೇ “ಬಾರೇ ಬಾರೇ ಬಾರೇ ಬಾರೇ......”

18 May 2017

ಕಬಿನಿಯಲ್ಲೊಂದು ಅಮೃತಮಥನ


ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು ಅದಕ್ಕೆ ಏಷ್ಯಾ ವಲಯಕ್ಕೇ ನಾಯಕತ್ವ ಕೊಟ್ಟು ಬೆಳೆಸಿದ್ದಾರೆ. ಉಲ್ಲಾಸ್ ತಮ್ಮ ವೈಜ್ಞಾನಿಕ ಪ್ರಕಟಣೆಗಳನ್ನು ಜಗತ್ತಿನಾದ್ಯಂತದ ವಿಜ್ಞಾನ ಸಂಸ್ಥೆ ಮತ್ತು ಗಂಭೀರ ವನ್ಯಪ್ರೇಮಿಗಳಿಗೆ ಕಳಿಸುವಂತೆ ನನಗೂ ಆಗಾಗ ಮಿಂಚಂಚೆ ಮೂಲಕ ಕಳಿಸುತ್ತಲೇ ಇರುತ್ತಾರೆ. ಅವರ ವನ್ಯಾಸಕ್ತಿಗೆ ಸಮರ್ಥ ಮುಂದುವರಿಕೆಯಂತೆ ವಿಕಸಿಸಿದ ಅವರ ಏಕೈಕ ಮಗಳು – ಕೃತಿಕಾರಂತ ಕೂಡಾ ಈಚೆಗೆ ಅದೇ ವಿಶ್ವಾಸದಿಂದ ತನ್ನ ವೈಜ್ಞಾನಿಕ ಪ್ರಬಂಧಗಳನ್ನು ನನಗೆ ಕಳಿಸುತ್ತಲಿದ್ದಾರೆ. ಈ ಪ್ರಬಂಧಗಳನ್ನು ನನ್ನ ತಿಳುವಳಿಕೆಯ ಭಾಗವಾಗಿಸಿಕೊಳ್ಳಲು ನನ್ನ ಸಂಸ್ಕಾರ, ಬಿಡುವು ಸಾಕಾಗುವುದಿಲ್ಲ. ಹಾಗಾಗಿ ಆ ಪ್ರಕಟಣೆಗಳನ್ನು ಬಹುತೇಕ ಗೌರವಪೂರ್ವಕವಾಗಿಯೇ ನಾನು ಕಡತಕ್ಕೆ ಜಾರಿಸಿ, ಮರೆತುಬಿಡುತ್ತಿದ್ದೆ.

02 September 2016

ದಿಕ್ಕೆಲ್ ಕಲ್ಲಿಗೆ ಲಗ್ಗೆ

(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ)
ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ ಕುತೂಹಲವಿರುತ್ತಿತ್ತು, ಆದರೆ ನನ್ನ ವೃತ್ತಿಯ ಸಮಯಮಿತಿಯಲ್ಲಿ ಪ್ರಾಕೃತಿಕ ಸತ್ಯಗಳನ್ನು ಮೀರಿದ ಇನ್ಯಾವುದರಲ್ಲೂ ತೊಡಗಿಕೊಳ್ಳಲು ನನಗೆ ಕಷ್ಟವೇ ಆಗುತ್ತಿತ್ತು; ಖಂಡಿತಕ್ಕೂ ತಿರಸ್ಕಾರವಿರಲಿಲ್ಲ. ಹಾಗೆ ಉಪಯುಕ್ತತೆಯನ್ನಷ್ಟೇ ಲೆಕ್ಕ ಹಾಕಿ ಉಳಿದುಕೊಂಡ ಸಂಬಂಧಗಳು ಮಾತ್ರ ಬಹುತೇಕ ಗಾಢವಾಗಿರುತ್ತಿತ್ತು. ಅಂಥಾ ಸಂಬಂಧಗಳಲ್ಲಿ ಅಮೆದಿಕ್ಕೆಲ್ ನೆಪದಿಂದ ಒದಗಿದ ನೆರಿಯ ಹೆಬ್ಬಾರರ ಕುಟುಂಬದ ಪರಿಚಯ, ನನಗೆ ಹೆಚ್ಚು ಸ್ಮರಣೀಯವಾಗಿರುವುದು ವನ್ಯಬಂಧದಿಂದ.

ನಾನು ಸುಮಾರು ೧೯೭೪ರಿಂದ ೧೯೮೫ರವರೆಗೆ, ಅಂದರೆ ನನ್ನ ಮಂಗಳೂರು ವಾಸದ ಮೊದಲ ದಿನಗಳಲ್ಲಿ ಕೇವಲ ಸಾಹಸ ಚಟುವಟಿಕೆಗಳ ತೋರಗಾಣ್ಕೆಯ ದಿನಚರಿ ಪುಸ್ತಕವನ್ನೇ ಇಟ್ಟಿದ್ದೆ. ಅದು ಡೈರಿಯೊಂದರಲ್ಲಿ ಯಾವ ಔಪಚಾರಿಕ ಅಂಚುಗಳನ್ನೂ ಉಳಿಸದೆ ಒತ್ತೊತ್ತಾಗಿ ತುಂಬಿದ, ಕೇವಲ ಟಿಪ್ಪಣಿ ರೂಪದ ದಾಖಲೆಯಾದರೂ ಸುಮಾರು ಎಪ್ಪತ್ತು ಪುಟಗಳಷ್ಟಿದೆ. ಮುಂದೆ, ಅಂದರೆ ಸುಮಾರು ೧೯೮೫ರಿಂದ ೨೦೦೦ದವರೆಗೆ ನನ್ನದೇ ನಕ್ಷೆಯೊಡನೆ ಅಂಕಿಸಂಕಿಗಳಕಾರ್ಡುಗಳನ್ನು ಮಾಡುತ್ತ ಬಂದೆ.

26 August 2016

ಚಾರ್ಮಾಡಿಯಿಂದ ಶಿರಾಡಿಗೆ


ಅಸಾಧ್ಯ ಅಮೆದಿಕ್ಕೆಲ್  ಸಾಹಸ ಕಥನಮಾಲಿಕೆಯಲ್ಲಿ ಎರಡನೇ ಭಾಗ

ಆರೋಹಣದ ಮಿತ್ರ ಬಳಗದಲ್ಲಿ ಆನೆಗಾವಲಿನ ಅಮೆದಿಕ್ಕೆಲ್ ಸವಾಲು ಎಸೆದೆ. ಪತ್ರಿಕೆಯ ಓದುಗರ ಅಂಕಣದಲ್ಲಿ ಎರಡೆರಡು ಕರೆ ಕೊಟ್ಟೆ – “ಚಾರ್ಮಾಡಿ – ಶಿರಾಡಿ ಚಾರಣಕ್ಕೆ ಬನ್ನಿ!” ಪರಿಚಿತ ಪ್ರಾಂಶುಪಾಲ, ಅಧ್ಯಾಪಕರ ಮೂಲಕ ಕೆಲವು ಕಾಲೇಜುಗಳ ವಿದ್ಯಾರ್ಥಿ ವೃಂದಕ್ಕೂ ಸಾಹಸಾವಕಾಶ ಮುಕ್ತಗೊಳಿಸಿದೆ. ನಾಡಿನ ವಿವಿಧ ಮೂಲೆಗಳಿಂದ, ಹಲವು ಜೀವನ ಸ್ತರದವರ ಪ್ರತಿಕ್ರಿಯೆ ಬಂತು. ನನ್ನ ಬಳಗದವರೇ (ಆರೋಹಣ ಪರ್ವತಾರೋಹಿಗಳು, ಸಾಹಸಿಗಳು) ಆದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಮೀರ ರಾವ್ ಮತ್ತು ಆತನ ತಮ್ಮ ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ಶೌರಿ ರಾವ್ ಮೊದಲು ನಾವಿದ್ದೇವೆ ಎಂದರು. ಮೀನುಗಾರಿಕಾ ಕಾಲೇಜಿನ ಲೋಕೇಶರಿಗೆ ಬಿಡುವಾಗದಿದ್ದರೂ ಅವರ ಅಧ್ಯಾಪಕ, ಹಾಸನ ಮೂಲದ ಶ್ರೀಕಂಠಯ್ಯ, ತಾನು ಕಡಿಮೆಯವನಲ್ಲ ಎಂದು ಸೇರಿಕೊಂಡರು. ಪಶ್ಚಿಮ ಘಟ್ಟಮಾಲೆಯ ತಪ್ಪಲಿನ ಮಾಳದವರೇ ಮುಕುಂದ ಚಿಪ್ಲೂಣಕರ್. ಕಾರ್ಪೊರೇಶನ್ ಬ್ಯಾಂಕಿನ ನೌಕರಿಯ ನೆಪದಲ್ಲಿ ಊರೂರು ತಿರುಗಿದವರು. ಅಲ್ಲೆಲ್ಲ ಮಾತು ಬರುವಾಗ, ಹೇಳಿಕೊಳ್ಳಲು ತಮ್ಮದೇ ಘಟ್ಟಮಾಲೆಯ ದಿಗ್ಗಜಗಳನ್ನು ಏರಿ ಅನುಭವಿಸಿಲ್ಲ ಎಂಬ ಕೊರಗು ಹೆಚ್ಚಿತ್ತಂತೆ. ಅದಕ್ಕೆ ಪರಿಹಾರವೆನ್ನುವಂತೆ ಮುಕುಂದ ಮೊದಲ ಸಮಯಾನುಕೂಲ ನೋಡಿಕೊಂಡು ಮಂಗಳೂರಿಗೇ ಬಂದು ನನ್ನಲ್ಲಿ ಹೆಸರು ದಾಖಲಿಸಿದ್ದರು.

19 August 2016

ಅಸಾಧ್ಯ ಅಮೆದಿಕ್ಕೆಲ್

(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ)
ಉತ್ತರನ ಸಾಹಸ!

ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ ಗೌರೀಶಂಕರರ ಗೆಳೆಯ-ಸಹೋದ್ಯೋಗಿ, ಸಾಹಿತ್ಯ, ಸಂಗೀತ, ಇತಿಹಾಸ, ನಕ್ಷಾಶಾಸ್ತ್ರವೇ ಮೊದಲಾದ ಹತ್ತೆಂಟು ಮುಖಗಳಲ್ಲಿ ತೀವ್ರ ಆಸಕ್ತ, ಹಿರಿಯ ಮಿತ್ರ - ಬಂದಾರು ಶ್ರೀಪತಿರಾಯರು ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಾಗ ಸಂಭ್ರಮಿಸಿದ್ದು ಸಹಜವೇ ಇತ್ತು. ಅವರ ಸೀಮಿತ ಹಣಕಾಸು, ಅವರನ್ನು ಅಂಗಡಿಯ ದೊಡ್ಡ ಗಿರಾಕಿಯೇನೂ ಮಾಡಲಿಲ್ಲ. ಆದರೆ ಅವರ ಶ್ರೀಮಂತ ಮನಸ್ಸು, ಅವರ ಮಂಗಳೂರು ಭೇಟಿಗಳಲ್ಲಿ `ಅತ್ರಿ ವಿಹಾರ’ವನ್ನು ಮಾತ್ರ ಕಡ್ಡಾಯ ಕಲಾಪ ಮಾಡಿತ್ತು. ಅವರು ಯಥಾನುಶಕ್ತಿ ಖರೀದಿ ಅವಶ್ಯ ಮಾಡುತ್ತಿದ್ದರು. ಅದಕ್ಕೂ ಮಿಗಿಲಾಗಿ ಹಾಗೆ ಬಂದಾಗೆಲ್ಲಾ ನನ್ನ  ಬೆಟ್ಟಕಾಡುಗಳ ಹುಚ್ಚಿಗೊಂದಿಷ್ಟು ಸುಳುಹು, ನಕ್ಷೆಗಳ ಕಿಚ್ಚಿಟ್ಟು ಹೋಗುತ್ತಿದ್ದರು. ಹಾಗೇ ಒಮ್ಮೆ “ಹತ್ತಿದರೆ ಅಮೆದಿಕ್ಕೆಲ್ ಅಯ್ಯ, ಒಂದು ಶಿಖರ” ಎಂದು ಉದ್ಗರಿಸಿದ್ದಿತ್ತು. ಮತ್ತೆ ರಾಯರು ಆವಿಷ್ಟರಾಗಿ ಅಂಗಡಿಯ ಗೀಚು-ಕಾಗದದ ಹರಕಿನ ಮೇಲೆ ನನ್ನದೇ ಪೆನ್ನು ಇಟ್ಟು ಗೆರೆ ಎಳೆಯುತ್ತಿದ್ದಾಗ ಬೆಳ್ತಂಗಡಿಯ ಕಗ್ಗಾಡಮೂಲೆ - ಶಿಶಿಲದಲ್ಲೇ ನಿಂತಂತಿದ್ದರು. ಉತ್ತರಮುಖಿಯಾಗಿ ನಿಂತು, ಕತ್ತೆತ್ತಿ ಸುದೂರದಲ್ಲಿ ಗಗನಕ್ಕಂಟಿದಂತಿದ್ದ ದಿಕ್ಕೆಲ್ ಕಲ್ಲನ್ನೇ ದಿಟ್ಟಿಸುತ್ತ ಆ ಮಹಾಮೇರುವಿನ ನಿಖರ ಸೂಕ್ಷ್ಮ ಬಳಕುಗಳನ್ನೇ ಕಾಗದದ ಸಣ್ಣ ಆಯಕ್ಕಿಳಿಸಿದ್ದರು!

24 June 2016

ದಟ್ಟಡವಿ, ಸಾಧಾರಣ ಮನೆ!

"ದಟ್ಟಡವಿ, ಸಾಧಾರಣ ಮನೆ!" ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ! ಎಲ್ಲೋ ಅನಂತನಾಗ್ ಅವರ ಹೊಸ ಸಿನಿಮಾ – ಗೋಧಿ ಬಣ್ಣ, ಸಾಧಾರಣ ಮೈಕಟ್ಟನ್ನು ತಪ್ಪಾಗಿ ಕೇಳಿಸಿಕೊಂಡೆನೋ ಅಂದರೆ ಇಲ್ಲ. ಇದು ಅವನ ಮುಂದಿನೊಂದು ಯೋಜನೆಯ ಬಹುಮುಖ್ಯ ಅಗತ್ಯ ಎಂದು ಮಾತ್ರ ತಿಳಿಯಿತು. ಹಾಗಾಗಿ ನನ್ನ ಅನುಭವ ಮತ್ತು ಸಂಪರ್ಕದ ಮಿತಿಯಲ್ಲಿ ಮುಂದಿನ ಎರಡು ದಿನ ನಾನೂ ಅದನ್ನೇ ಪುರಶ್ಚರಣ ಮಾಡುತ್ತಾ ಕಾರಿನೊಡನೆ ಅವನಿಗೆ ಜತೆಗೊಟ್ಟೆ.

ಬೆಳಿಗ್ಗೆ ಮನೆಯಲ್ಲೇ ಹೊಟ್ಟೆಭರ್ತಿ ಮಾಡಿ, ನಮ್ಮ ಸವಾರಿ ಹೊರಟಿತು. ಜೋಡುಮಾರ್ಗ, ಬೆಳ್ತಂಗಡಿ, ಉಜಿರೆ, ಮುಂಡಾಜೆ ಕಳೆದು ಇನ್ನೇನು ಘಟ್ಟ ಬಂತೆನ್ನುವಲ್ಲಿರುವ ಹಳ್ಳಿ ಕಕ್ಕಿಂಜೆ ನಮಗೆ ಮೊದಲ ಕವಲೂರು. ಸುಮಾರು ಮೂವತ್ತೆಂಟು ವರ್ಷಗಳ ಹಿಂದೆ, ಮಂಗಳೂರು ದಾವಣಗೆರೆ ಬಸ್ಸಿನಲ್ಲಿ ಅದೇ ಪ್ರಥಮ ಬಾರಿ ಎಂಬಂತೆ ನಾನು ಗೆಳೆಯ ಲೋಕೇಶನೊಡನೆ ಇಲ್ಲೇ ಬಂದಿಳಿದಿದ್ದೆ. ಆದರೆ ಅದು ಅಮಾವಾಸ್ಯೆಯ ಕಾರಿರುಳಿನ ಹನ್ನೊಂದು ಗಂಟೆ, ವಿದ್ಯುಚ್ಛಕ್ತಿಯ ಸೌಕರ್ಯ (ಅನಾನುಕೂಲ?) ತಿಳಿಯದ ವಲಯ, ಇದ್ದಿರಬಹುದಾದ ನಾಲ್ಕೆಂಟು ಗೂಡಂಗಡಿಗಳೂ ಮುಚ್ಚಿದ್ದ ಸಮಯ – ಕಂಡದ್ದೇನು?

25 March 2016

ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!


ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸುನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ ಜವಾಬ್ದಾರಿಯ ಕಟ್ಟುಪಾಡಿನಲ್ಲಿ ಎಲ್ಲ ಗೊಂದಲ. ಕಳೆದು, ಕೂಡಿಸಿ, ಉಂಟೂ ಇಲ್ಲಾ ಮಾಡಿ ಅಂತೂ ಶನಿವಾರ ಬೆಳಿಗ್ಗೆ ಐದೂವರೆಗೆ ಮಂಗಳೂರಿನ ನಂತೂರು ವೃತ್ತದಿಂದ ಹೊರಟವರು ಐದು ಮಂದಿವೇಣುವಿನೋದ್, ಅನಿಲ್ ಶೇಟ್, ಸಮರ್ಥ ರೈ, ಚಿನ್ಮಯ ದೇಲಂಪಾಡಿ ಮತ್ತು ನಾನು.


04 December 2015

ಎತ್ತಿನಹೊಳೆ ಯೋಜನೆ – ಇದುವರೆಗೆ

``ಎತ್ತಿನಹೊಳೆ ಯೋಜನೆಯ ಇಂದಿನ ಸ್ಥಿತಿ ನೋಡಲು ನಾಳೆ ಬೆಳಿಗ್ಗೆ ಕೆಲವು ಚೆನ್ನೈಗೆಳೆಯರು ಬರುತ್ತಿದ್ದಾರೆ. ನೀವೂ ಬಂದಿದ್ದರೆ ಚೆನ್ನಾಗಿತ್ತು'' ಹಾಸನದ ವಕೀಲ, ಹೊಂಗಡಳ್ಳದ ಮೂಲವಾಸಿ ಕಿಶೋರ್ ಕುಮಾರ್ ಚರವಾಣಿಸಿದರುತಾತ್ತ್ವಿಕ ಹೋರಾಟವನ್ನಷ್ಟೇ ನೆಚ್ಚುವ ನಿರೇನ್ ಜೈನ್ ಮತ್ತು ಎಚ್. ಸುಂದರ ರಾವ್ ಸೇರಿದಂತೆ ಮೂವರೂ ಹೋಗುವುದೆಂದು ಕಾರು ಹೊರಡಿಸಿದ್ದೆ. ಸುಂದರರಾಯರಿಗೆ ಅನ್ಯ ಕಾರ್ಯ ಒತ್ತಡ ಬಂದುದರಿಂದ ನಾವಿಬ್ಬರೇ ಹೋಗಬೇಕಾಯ್ತು. ಸಕಲೇಶಪುರದ ಐಬಿಯನ್ನು ನಾವು ಬೆಳಿಗ್ಗೆ ಸಕಾಲಕ್ಕೇ ತಲಪಿದ್ದೆವು. ಎತ್ತಿನಹೊಳೆ ಯೋಜನೆಯಲ್ಲಿ ಎತ್ತಂಗಡಿಯ ಬೆದರಿಕೆಯಿದ್ದ ಕೆಲವು ಕೃಷಿಕರು, ಕೆಲವು ಮಾಧ್ಯಮ ಪ್ರತಿನಿಧಿಗಳೂ ಹಾಜರಿದ್ದರು. ಚೆನ್ನೈಗೆಳೆಯರು ರಾತ್ರಿ ಯಾನದಲ್ಲಿ ಬೆಂಗಳೂರು, ಮೊದಲ ಬಸ್ಸಿನಲ್ಲಿ ಹಾಸನವಾಗಿ ಸಕಲೇಶಪುರಕ್ಕೆ ಬಂದು ತಲಪುವಾಗ ಗಂಟೆ ಹನ್ನೊಂದೇ ಆಗಿತ್ತು.

ಮೊದಲು ರೈಲ್ವೇ ನಿಲ್ದಾಣ ಹಾಯ್ದ ಮೇಲೆ ಸಿಗುವ ದಡಬಡ ದಾರಿಯ ಪಕ್ಕದಲ್ಲೇ ವಿಸ್ತಾರ ಗದ್ದೆಗಳು - ಬಹುತೇಕ ಹಡ್ಲು ಬಿದ್ದವಕ್ಕೆ, ಹೋದೆವು. ಅವಕ್ಕೆ ದೂರದಂಚು ಕಟ್ಟಿದಂತೆ ದಟ್ಟ ಕಾಡು. ಗದ್ದೆಗಳು ಹಡ್ಲು ಬೀಳಲು ಕಾರಣವೇನಿರಬಹುದು - ಕೃಷಿ ಆರ್ಥಿಕತೆಯ ಸೋಲೇ? ಪೇಟೆಯ ಒತ್ತಡವೇ? `ಅಭಿವೃದ್ಧಿ' ಆಮಿಶವೇ? ನಮಗೆ ಜೊತೆಗೊಟ್ಟ ಕೃಷಿಕರಲ್ಲೇ ಸ್ಪಷ್ಟ ಉತ್ತರವಿರಲಿಲ್ಲ. ಸದ್ಯ ಅದರ ತುಂಬಾ ಭಾರೀ ಉಕ್ಕಿನ ಕೊಳವೆಗಳು ಹರಡಿ ಬಿದ್ದಿದ್ದುವು. ಬಂದು ಬೀಳುವ ಕಬ್ಬಿಣದ ಕೊಳವೆಗಳಿಗೆ ತಂತಿಬಲೆ ಸುತ್ತಿ, ಕಾಂಕ್ರೀಟ್ ಲೇಪ ಹಾಕುವ ಪುಟ್ಟ ಕಾರ್ಯಾಗಾರವೂ ಅಲ್ಲೇ ಇತ್ತು. ಇಂಥದ್ದೇ ಇನ್ನೊಂದು ವ್ಯವಸ್ಥೆಯನ್ನು ನಾನು ಎರಡು ವಾರದ ಹಿಂದೆ ಮಂಜರಾಬಾದಿನಿಂದ ಬಿಸಿಲೆಯತ್ತ ಹೋಗುವ ದಾರಿಯ ಪಕ್ಕದ ಗುಡ್ಡೆಯಲ್ಲೂ ಕಂಡಿದ್ದೆ. ಕೃಷಿಕರು ತಿಳಿಸಿದಂತೆ, ಎತ್ತಿನಹೊಳೆ ವಲಯದಲ್ಲಿ ಒಟ್ಟು ನಾಲ್ಕು ಕಡೆ ಇಂಥ ಕಾರ್ಯಾಗಾರಗಳೇ ಇವೆಯಂತೆ. ಮುಂದುವರಿದು ಮತ್ತೆಷ್ಟೋ ಸಾರ್ವಜನಿಕ ಸ್ಥಳಗಳಲ್ಲಿ, ಅಂದರೆ ಕೊಳವೆ ಸಾಲು ಸಾಗಬೇಕಾದ ಜಾಡಿನಲ್ಲಿ ಪರಿಷ್ಕೃತ ಕೊಳವೆಗಳನ್ನು ಹಂಚಿ ಹಾಕಿದ್ದೂ ಆಗಿದೆಯಂತೆ. ಕೆಲವೆಡೆ ಹೂಳಲೂ ಶುರು ಮಾಡಿದ್ದರು! ಆದರೆ ಅಲ್ಲೂ ಮುಂದೆ ದಿನದುದ್ದಕ್ಕೆ ನಾವು ಕಂಡ ಇತರ ಜಾಗಗಳಲ್ಲೂ ನಮಗೆ ತಿಳಿಯದ ಕಾರಣಕ್ಕೆ ಕೆಲಸ ನಡೆದಿರಲಿಲ್ಲ, ಕಾರ್ಮಿಕರೂ ವಿಶೇಷ ಇರಲಿಲ್ಲ.

06 March 2015

ಸಂಚಿಯ ಮೊದಲ ಜ್ಞಾನ ಕಿರಣ – ಉಲ್ಲಾಸ ಕಾರಂತ

ನಶಿಸುತ್ತಿರುವ ನಮ್ಮ ಸುತ್ತಣ ಸಾಂಸ್ಕೃತಿಕ ಚಹರೆಗಳಿಗೆ ಕನಿಷ್ಠ ಮೂರು ಆಯಾಮದ (ದೃಶ್ಯ, ಧ್ವನಿ, ಸಾಹಿತ್ಯ) ವಸ್ತುನಿಷ್ಠ ದಾಖಲೀಕರಣವನ್ನು ಕೊಡಬೇಕು. ಅವು ವಿದ್ಯುನ್ಮಾನ ಮಾಧ್ಯಮದಲ್ಲಿ ಆಸಕ್ತರಿಗೆ ಸಾರ್ವಕಾಲಿಕವಾಗಿಯೂ ಉಚಿತವಾಗಿಯೂ ದೊರಕುವಂತೆ ಮಾಡುವುದು ಸಂಚಿ ಟ್ರಸ್ಟಿನ ಘನ ಉದ್ದೇಶ. [ನಮ್ (ಎನ್.ಎ.ಎಂ) ಇಸ್ಮಾಯಿಲ್, ಜಿ.ಎ. ಅಭಯಸಿಂಹ ಮತ್ತು ಎಚ್.ಎಲ್. ಓಂಶಿವಪ್ರಕಾಶ್ ಇದರ ವಿಶ್ವಸ್ಥರು.] ಅದರ ಅಂಗವಾಗಿ ತೊಡಗಿದ ಭಾಷಣ ಮಾಲಿಕೆ `ಜ್ಞಾನ ಸರಣಿ.’ ಇಂಗ್ಲಿಷ್ ಜಾಲಿಗರಿಗೆ ಆಪ್ತವಾದ ಟೆಡ್-ಟಾಕ್ಸ್ ಈ ಕನ್ನಡದ ಜ್ಞಾನಸರಣಿಗೆ ಸ್ಫೂರ್ತಿ. ಇದರಲ್ಲಿ ಮೊದಲ  ಕಲಾಪ ನಡೆಸಿಕೊಟ್ಟವರು ಅಂತಾರಾಷ್ಟ್ರೀಯ ಖ್ಯಾತಿಯ ವನ್ಯವಿಜ್ಞಾನಿ ಡಾ| ಉಲ್ಲಾಸ ಕಾರಂತ. ಖ್ಯಾತ ಅಂತಾರಾಷ್ಟ್ರೀಯ ಚಿತ್ರ ನಿರ್ಮಾತೃ ಶೇಖರ ದತ್ತಾತ್ರಿ, ಕೆಲವು ದಶಕಗಳಿಂದ ಕಾರಂತರ ಅಧ್ಯಯನ ಹಾಗೂ ಕ್ಷೇತ್ರ ಕಾರ್ಯಗಳ ಸಮರ್ಥ ದಾಖಲೀಕರಣವನ್ನು ನಡೆಸುತ್ತ ಬಂದಿದ್ದಾರೆ. ಅಯಾಚಿತವಾಗಿ ಅವರು ಉಲ್ಲಾಸರ ಮಾತುಗಳಿಗೆ ಪೂರಕ ಸಾಮಗ್ರಿ ಒದಗಿಸುವುದರೊಡನೆ, ಸಂದರ್ಭಕ್ಕೆ ಔಚಿತ್ಯಪೂರ್ಣ ಕೆಲವು ಮಾತುಗಳನ್ನೂ ಆಡಿದ್ದು ಕಲಾಪಕ್ಕೆ ಹೆಚ್ಚಿನ ಘನತೆಯನ್ನು ಕೊಟ್ಟಿತು. (೧೫-೨-೧೫ರ ಸಂಜೆ, ಬೆಂಗಳೂರಿನ ಬಾದಾಮಿ ಹೌಸಿನ ಸಭಾಂಗಣ.)

09 January 2015

ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

“ಎತ್ತಿನ ಹೊಳೆ ನೇತ್ರಾವತಿ ಅಲ್ಲ” -  ಸದಾನಂದ ಗೌಡರ ಸುಳ್ಳಿಗೆ ಈಚಿನ ಹಿರಿ ಸುಳ್ಳು ವಿನಯಕುಮಾರ್ ಸೊರಕೆಯವರದು – “ನದಿ ತಿರುವು ನೇತ್ರಾವತಿಯದ್ದೇ ಅಲ್ಲ, ಕುಮಾರಧಾರೆಯದ್ದು.” “ಜೈಶ್ರೀರಾಮ್” ಎನ್ನುತ್ತಲೇ ಬಂದವರು ಅಧಿಕಾರದ ಮದದಲ್ಲಿ, ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಇನ್ನೂರು ಮೆಗಾ ವಿದ್ಯುತ್ ಯೋಜನೆಯ ಅತ್ಯಾಚಾರಕ್ಕೆ ಇಳಿದಿದ್ದರು. (ಬಲಾತ್ಕಾರದಲ್ಲೇ ಅಡಿಗಲ್ಲು ಹಾಕಿದ್ದರು.) ದಿಲ್ಲಿಯಿಂದ ಜೈರಾಮ್ (ರಮೇಶ್) ಘೋಷ ಕೇಳಿದ್ದೇ ಹಸುರು ಸೆರಗನ್ನು ಬಿಟ್ಟು, ಕಲ್ಲು-ಕಿತ್ತೋಡಿದ್ದರು. ಆದರೆ ಇಂದು ನೇತ್ರಾವತಿಯ ಮೇಲಿನ ಕೆಟ್ಟ ದಿಟ್ಟಿಗೆ ಪಕ್ಷಾತೀತ ರಾಜಕೀಯದ ರೋಗವೇ ಬಡಿದಿದೆ. ಮುಕ್ಕಿಯಾ (?) ಮಂತ್ರಿ ಇನ್ನೂರು ಕೋಟಿ ಹರಿಸಿದ್ದು, ಸ್ವಂತ ಮಗ ಸಂಸತ್ಸ-ದಸ್ಯು (!) ಫಲಾನುಭವಿಯಾದದ್ದು – ನದಿ ತಿರುವಿನ ಹೆಸರಿನಲ್ಲೇ. ಚುನಾವಣಾ ಬನಾವಣೆಗಾಗಿ ವಿರೋಧಪಕ್ಷಿ ಮೊಯಿಲಿ ಚಿಕ್ಕಬಳ್ಳಾಪುರದಲ್ಲಿ (ಹುಟ್ಟದ ಮಗುವಿಗೆ ಕುಲಾವಿ ಹೊಲಿದಷ್ಟೇ ಜಾಣತನದಲ್ಲಿ) ಸಮೃದ್ಧ ನೀರಿನ `ಸ್ವಾಗತ ವ್ಯವಸ್ಥೆ’ಗೆ ಅಡಿಗಲ್ಲು ಹಾಕಿದ್ದೂ ಎತ್ತಿನಹೊಳೆ ಹೆಸರಿನಲ್ಲೇ.

ಪಕ್ಷ ರಾಜಕೀಯದಲ್ಲಿ ಚುನಾವಣೆಗಳ ಪಶ್ಚಾತ್-ಕಂಪನ ಇದ್ದದ್ದೇ. ಹಾಗೇ ಎತ್ತಿನಹೊಳೆಯ ಕುರಿತೂ ಖಂಡನೆ, ಮಂಡನೆಗಳು ನಡೆದಿದ್ದಂತೇ ಕೆಲಸ ನಿಧಾನಕ್ಕೆ ಶುರುವಾಗಿದೆ ಎಂಬ ಸುದ್ದಿ ಘಟ್ಟದ ಕೆಳಗಿನ ನಮ್ಮ ಕಿವಿಗೂ ಬಿತ್ತು. ಗುಂಡ್ಯ ೨೦೦ ಮೆಗಾವಾಟ್ ವಿದ್ಯುಚ್ಛಕ್ತಿ ಯೋಜನಾ ಕಾಲದಿಂದ ಬಹಳ ವ್ಯವಸ್ಥಿತವಾದ, ಕಾನೂನುಬದ್ಧವಾದ ಹೋರಾಟವನ್ನು ಸಂಘಟಿಸುತ್ತಾ ಬಂದಿರುವವರು ಹೊಂಗಡಳ್ಳ ಮೂಲದ, ಪ್ರಸ್ತುತ ಹಾಸನದಲ್ಲಿ ವಕೀಲ ವೃತ್ತಿ ನಿರತರಾಗಿರುವ ಕಿಶೋರ್ ಕುಮಾರ್. ಇವರು ಮಲ್ನಾಡು ಜನಪರ ಹೋರಾಟ ವೇದಿಕೆ ಹೆಸರಿನಲ್ಲಿ, ಸ್ವಂತ ಸಮಯ, ಖರ್ಚು ಹಾಕಿಕೊಂಡು ಊರಿನ ಮನೆಮನೆಗೆ ಸಾಲದೆಂಬಂತೆ, ನಿದ್ರೆಯಲ್ಲಿರುವ ಬೆಂಗಳೂರಿನಿಂದ ಮಂಗಳೂರಿನ ತನಕ ಓಡಾಡಿ ಅನ್ಯಾಯದ ವಿರುದ್ಧ ಜಾಗೃತಿ ನಡೆಸಿಯೇ ಇದ್ದಾರೆ. ಕಿಶೋರ್ ಕೂಡಾ “ಬನ್ನಿ, ಅಣೆಕಟ್ಟುಗಳ ನಿವೇಶನವನ್ನೂ ನಡೆದಿರುವ ಕೆಲಸವನ್ನೂ ಸ್ಪಷ್ಟವಾಗಿ ದಾಖಲಿಸೋಣ” ಎಂದರು.