Showing posts with label ಗೌರೀಶಂಕರ ಎ.ಪಿ. Show all posts
Showing posts with label ಗೌರೀಶಂಕರ ಎ.ಪಿ. Show all posts

23 November 2017

"ಅಣ್ಣ" ಎಂದದ್ದಿಲ್ಲ, ಚಿಕ್ಕತಮ್ಮ ಹೌದು!


(ಗೋವಿಂದಾಯ ನಮಃ ಭಾಗ ಎರಡು)
- ಎ.ಪಿ. ಗೌರೀಶಂಕರ

[ನಾಲ್ಕು ವಾರಗಳ ಹಿಂದೆ ಗತಿಸಿದ ನನ್ನ ಎರಡನೇ ಸೋದರಮಾವ - ಎ.ಪಿ. ಗೋವಿಂದಯ್ಯನವರ ಸ್ಮೃತಿ ಮಾಲಿಕೆಯಲ್ಲಿ ಇದು ಮೂರನೇದು. ನನ್ನದು ಸೇರಿದಂತೆ ಹಿಂದಿನೆರಡು ಅಥವಾ ಮಾವನ ಮಗ ರಾಧಾಕೃಷ್ಣನದೂ ಸೇರಿಸಿ ಹೇಳುವುದಿದ್ದರೆ ಮೂರರಲ್ಲೂ ಕನಿಷ್ಠ ಒಂದು ತಲೆಮಾರಿನ ಅಂತರದ ಬೆರಗಿದೆ. ಆದರೆ ಇಲ್ಲಿ ವರ್ಷಗಳ ಲೆಕ್ಕದಲ್ಲಿ ಹೇಳುವುದಿದ್ದರೆ ಗೋವಿಂದನಿಗೆ ಸುಮಾರು ಎರಡೇ ವರ್ಷ ಕಿರಿಯ, ಬಾಲ್ಯದ ಬಹುತೇಕ ಸಿಹಿ ಕಹಿಗಳನ್ನು ಒಟ್ಟಿಗೇ ಅನುಭವಿಸಿದ ಒತ್ತಿನ ತಮ್ಮ ಗೌರೀಶಂಕರರ ಅನುಭವ ಬೇರೇ ಸ್ತರದ್ದು. ಅದರ ಚಂದ ನೀವೇ ಓದಿ ನೋಡಿ - ಅಶೋಕವರ್ಧನ]

ನಾನು ಮಂಗಳೂರಿನಿಂದ ಪುತ್ತೂರ ಬಳಿಯ ನಮ್ಮ ಹಳ್ಳಿಮನೆಗೆ (ಜಿಂಕೆ ಮನೆ) ಹೋದಾಗೆಲ್ಲ, ಅಕ್ಕಪಕ್ಕದಲ್ಲೇ [ಚಿತ್ರ:ಸ್ವಂತ ಗ್ರಂಥಸಂಗ್ರಹದೆದುರು ಗೋವಿಂದ] ಮೂರೂ ಸೋದರರ ಮನೆಗಳಿಗೆ ಲೋಕಾಭಿರಾಮ ಮಾತುಕತೆಗೆಂದೇ ಹೋಗುವುದಿತ್ತು. ನನ್ನ ಚಿಕ್ಕ - ಅಣ್ಣ ಗೋವಿಂದನಿಗೆ, ಎರಡು ಮೂರು ವರ್ಷಗಳ ಹಿಂದೆ ಧ್ವನಿ ಬಿದ್ದು ಹೋಗಿತ್ತು. ಆ ನೆನಪಿನಲ್ಲೇ ಸುಮಾರು ಒಂದೂವರೆ ವರ್ಷದ ಹಿಂದೊಂದು ಸಂಜೆ,

03 June 2016

ಶಯರಾಬಾನೊ ಮತ್ತು ಚಂದ್ರಗಿರಿಯ ತೀರದಲ್ಲಿ

ಕತೆ, ಕಾವ್ಯ, ಕಾದಂಬರಿಗಳನ್ನು (ಏನನ್ನೂ) ನಾಟಕವಾಗಿ ಪ್ರಯೋಗಿಸುವುದರಲ್ಲಿ ನನಗೆ ತಿಳಿದಂತೆ ಬಹುಖ್ಯಾತಿ ಗಳಿಸಿದವರು ಬಿವಿ ಕಾರಂತ. ಇಂದು ಅದು ಹೊಸ ವಿಚಾರವಲ್ಲ. ಹಾಗೇ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಸುಮಾರು ಒಂದು ವರ್ಷಕ್ಕೂ ಮೊದಲೇ ರೂಪ ಕೋಟೇಶ್ವರರಿಂದ ರಂಗರೂಪಗಳಿಸಿದ್ದು, ನಯನ ಜೆ. ಸೂಡರಿಂದ ನಿರ್ದೇಶನಗೊಂಡು ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳ ಜನಪ್ರಿಯತೆಯನ್ನು ಗಳಿಸಿದ್ದೂ ಹೊಸತಲ್ಲ. ಆ ಪ್ರಯೋಗ, ಕಾದಂಬರಿ ಉಲ್ಲೇಖಿಸುವ ಈ ವಲಯಕ್ಕೇ ಬಂದದ್ದು, ಅದರ ಭಾವ ಇನ್ನೂ ಜೀವಂತವಾಗಿರುವ ಪರಿಸರದಲ್ಲೇ ದಿಟ್ಟವಾಗಿ ರಂಗವೇರಿದ್ದು, ಅದರ ಮೂಲ ಲೇಖಕಿ – ಸಾರಾ ಅವರ ಎದುರೇ ಪ್ರದರ್ಶನಕ್ಕೆ ನಿಂದದ್ದು ನಿಜಕ್ಕೂ ಹೊಸತು ಹಾಗೂ ಸಂತಸದ ವಿಚಾರ. `ಚಂದ್ರಗಿರಿಯ ತೀರದಲ್ಲಿ’ ನಾಟಕ ೨೭-೫-೨೦೧೬ರಂದು ಡಿವೈಎಫ್‍ಐ ಸಂಯೋಜನೆಯಲ್ಲಿ, ಮಂಗಳೂರು ಪುರಭವನದಲ್ಲಿ ಹೆಚ್ಚುಕಡಿಮೆ ತುಂಬಿದ ಗೃಹದಲ್ಲಿ ಪ್ರದರ್ಶನ ಕಂಡಿತು.