Showing posts with label ಮರ ಕೆತ್ತನೆ. Show all posts
Showing posts with label ಮರ ಕೆತ್ತನೆ. Show all posts

03 August 2019

ಅವತರಿಸಿದ ಗೌರೀಶಂಕರ!

(ಮರ ಕೆತ್ತನೆಯಲ್ಲಿ ಹೊಸ ಹೆಜ್ಜೆ)

ಧಾಂ ಧೂಂ ಸುಂಟರಗಾಳಿ 

ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ ಅಬ್ಬರಸಂಗೀತ ನಮ್ಮ ನಿದ್ರೆಗೆಡಿಸಿತು. ನೇರ ಹಿತ್ತಿಲಿನಲ್ಲಿ ಬರಲಿದ್ದ ವಸತಿಸಮೂಹದ ಜಿಂಕ್ ಶೀಟ್ ಗೋಡೆ ರೋಮಾಂಚನದಲ್ಲಿ ಗಲಗಲಿಸಿತು, ರೆಂಬೆಕೊಂಬೆಗಳು ಅದರ ಬೆನ್ನ ಚಪ್ಪರಿಸಿ ಕಣಕಣಿಸಿದವು. ನಿಗೂಢತೆ ಹೆಚ್ಚಿಸುವಂತೆ ಕರೆಂಟು ಹೋಯ್ತು; ಮಿಂಚಿನ ಛಮಕ್ಕಿಗೆ

13 July 2017

ಲಲಿತ ನಟನಾ ಶಿಲ್ಪ ಅಷ್ಟಪದಿ


(ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೨)

ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ ಕಡಿಮೆಯಾಗುತ್ತಿದ್ದಂತೇ `ರಕ್ಕಸ’ ಸಾಗುವಾನಿ ಬೊಡ್ಡೆಯೊಂದಿಗೆ ದೇವಕಿ  ಹೋರಾಟ ಸುರುಮಾಡಿದ್ದಳು. ರಕ್ಕಸ ಸುಮಾರು ಹತ್ತಿಂಚು ವ್ಯಾಸದ ಇನ್ಯಾವುದೋ ಮರದ ಗುತ್ತಿ ಬೇರುಗಳನ್ನು ತನ್ನ ಬೇರಜಾಲದ ಮರಣಾಂತಿಕ ಅಪ್ಪುಗೆಗೊಳಪಡಿಸಿತ್ತು. ಅದನ್ನು ಸಮೂಲ ಕಿತ್ತೆಸೆಯಬೇಕು. ಮರ ಬೆಳೆದ ವಠಾರದ ಜನ ಕಾಲಕಾಲಕ್ಕೆ ನಿರ್ಲಕ್ಷ್ಯದಲ್ಲಿ ಕಲ್ಲಚೂರುಗಳು, ಬೂದಿ, ಸಿಮೆಂಟು ತುಂಡುಗಳಾದಿ ವಿವರಿಸಲಾಗದ ಹಾಳಮೂಳಗಳೆಲ್ಲವನ್ನೂ ಆ ಸಾಗುವಾನಿ ಬುಡಕ್ಕೆ ಹಾಕಿದ್ದಿರಬೇಕು. ಆ ಬರಗೇಡಿ ಮರ ಸಹಜ ಮಣ್ಣಿನೊಡನೆ ಅವನ್ನೆಲ್ಲ ತನ್ನ ಉಡಿಯೊಳಗೆ ಗಂಟು ಕಟ್ಟಿಕೊಂಡಿತ್ತು. ಸತ್ತುಹೋದ ನಿಗೂಢ ಲಕ್ಷಾಧಿಪತಿ ಬಿಕ್ಷುಕನ ಕತೆ ಕೇಳಿದ್ದೀರಲ್ಲಾ? ದೇವಕಿಗೆ ಆ ಬಿಕ್ಷುಕನ ಜೋಳಿಗೆಯೊಳಗೆ ಕೈ ಹಾಕುವ ಕೆಲಸ. ಕೊಳಕನ್ನು ಕಳೆದು, ಸಿರಿಯನ್ನು

06 July 2017

ಕಲ್ಪವೃಕ್ಷದಲ್ಲಿ ಚತುರ್ಮುಖಗಳು


ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೧
ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ ಉರುಫ್ ಎಣ್ಮುಗಂ! ಕಾಯಿಲಸ್ಥ ಬಡಕಲು ಮರದ, ತುಸು ಸೊಟ್ಟವ ಮತ್ತಿನವ, ಅನ್ವರ್ಥ ನಾಮ – ಡೊಂಕ. ಕೊನೆಯವ ಹಾಗೂ ಇದ್ದವುಗಳಲ್ಲಿ ಸಣ್ಣವ – ಪುಟ್ಟ. ಏನೀ ಚತುರ್ಮುಖರ ವಿಶೇಷ ಎನ್ನುವುದಕ್ಕೆ ಪೂರ್ವಭಾವಿಯಾಗಿ ಸುಮಾರು ಮೂರು ವರ್ಷಗಳ ಹಿಂದಕ್ಕೆ, ನಮ್ಮನೆ ಅಭಯಾದ್ರಿಗೇ ನಿಮ್ಮನ್ನು ಒಯ್ಯುತ್ತೇನೆ. 

`ಅಭಯನ ಬೆಟ್ಟ’ ಎಂಬರ್ಥದ ಮನೆ ಹೆಸರೇ ಸೂಚಿಸುವಂತೆ