(ಕಿನ್ನಿಕಂಬಳದ
ಮೂಲಮೂರಿ ಮತ್ತು ಕರಾವಳಿಯ ಕಥನ - ಉತ್ತರಾರ್ಧ)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೩)
-
ಕೆ. ಮಹಾಲಿಂಗ ಭಟ್
‘ಮಾನವೀಯತೆ - ಅಹಿಂಸೆ’ ಮೌಲ್ಯಗಳನ್ನು
ಮರುಶೋಧಿಸುವ ಬಾಗಲೋಡಿ ಗುಣವೇ ಪವಾಡ ಪುರುಷದಂಥ ಪ್ರಸಿದ್ಧ ಕತೆಯನ್ನು ಕೊಟ್ಟಿದೆ. ಸಾಹಿತ್ಯ ಪರಿಷತ್ತಿಗಾಗಿ
ಕೆ. ನರಸಿಂಹಮೂರ್ತಿ ಸಂಪಾದನೆಯಲ್ಲಿಯೂ (ಕೃತಿ: ಅತ್ಯುತ್ತಮ ಸಣ್ಣ ಕತೆಗಳು) ಗಿರಡ್ಡಿಯವರ ಮರೆಯಬಾರದ
ಹಳೆಯ ಕತೆಗಳು ಸಂಕಲನದಲ್ಲಿಯೂ ಇದು ಬಂದಿದೆ. ಬಾಗಲೋಡಿಯವರು ಇತಿಹಾಸ ಲೋಕಕ್ಕೆ ಪ್ರವೇಶಿಸುವಾಗ ಕಾಲದ
ಖಂಡಾಂತರಗಳನ್ನು ದಾಟಿ ನಿರ್ಮಿಸುವ ಪುರಾತನ ವಾತಾವರಣಕ್ಕೂ ಅವರದ್ದೇ ಆದ ಛಾಪೊಂದು ಇರುತ್ತವೆಂಬುದಕ್ಕೆ
ಇದು ಸಾಕ್ಷಿ. ಸರ್ವಾರ್ಥಸಿದ್ಧಿ ಎಂಬ ಭಿಕ್ಕು, ತಾನು ಕೊಲೆಯ ಹಿಂಸೆಯೊಂದನ್ನು ನಡೆಸಿ ಅಹಿಂಸೆಯನ್ನು
ಉಳಿಸಿದ್ದ ಸತ್ಯವನ್ನು ತನ್ನ ಕೊನೆಯುಸಿರಿನ ಜೊತೆಯಲ್ಲಿ ಸ್ಫೋಟಿಸುವ ಕತೆ ಇದು. ಹೆಸರುಗಳು, ಪರಿಭಾಷೆಗಳು,
ವಿವರಗಳ ಮೂಲಕ ಬೌದ್ಧ ಚಾರಿತ್ರಿಕ ವಾತಾವರಣದ ಹಿನ್ನೆಲೆಯಲ್ಲಿ ಈ ಮಹಾನ್ ಅಹಿಂಸಾಮೂರ್ತಿ ಭಿಕ್ಕು ಕ್ರೂರ,
ಮೂರ್ಖ ರಾಜನನ್ನು ಕೊಂದುಬಿಟ್ಟಿದ್ದ ಸತ್ಯವನ್ನು ಕತೆ ತೆರೆಯಿಸುತ್ತದೆ. "ನಾನೀ ಕಥೆಯನ್ನು ನಿನಗೆ
ಹೇಳಿದುದು ಪಶ್ಚಾತ್ತಾಪದಿಂದಲ್ಲ, ಆತ್ಮಲಾಂಛನದಿಂದಲ್ಲ, ಸರ್ವಥಾ ಅಲ್ಲ.... ನಿನಗೆ ಕರ್ತವ್ಯಜ್ಞಾನಕ್ಕಾಗಿರಲಿ
ಎಂದು ಹೇಳಿದ್ದೇನೆ," ಎನ್ನುತ್ತಾನೆ ಬೌದ್ಧ ಸಂನ್ಯಾಸಿ. ಅಹಿಂಸೆ ಕರುಣೆಗಳಂಥ ಭಿಕ್ಕುವಿನ ಮೂಲವಾಸನೆಗಳು
ಇಲ್ಲಿ ಹೊಸ ಅರ್ಥ ಪಡೆದು ಹೊಳೆವ ‘ಪವಾಡ’ ಸಾಧಿಸುತ್ತವೆ. ದೇವರಾಯರ ವ್ಯಂಗ್ಯ ವಿನೋದವೂ ಚಾರಿತ್ರಿಕ
ಕಾಲದ ನಿರ್ಮಾಣವೂ ಮಾನವೀಯತೆಯ ಪ್ರತಿಪಾದನೆಗಾಗಿ ‘ಮಾನಸಿಕ ದೂರ’ ಒಂದನ್ನು ನಿರ್ಮಿಸುತ್ತವೆ. ಈ ಒಂದು
ವಿಶಿಷ್ಟ ‘ಓರೆನೋಟ’ದ ಮೂಲಕ ರೂಢಿಸಿಕೊಂಡ




.jpg)