(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! - ಉತ್ತರಾರ್ಧ)
ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ ಹೆದ್ದಾರಿಗಳಲ್ಲೇ ಇತ್ತು. ಅಂದರೆ ನಾವು ಬಂದಿದ್ದ ಹೆದ್ದಾರಿ ೧೦೭ರಲ್ಲಿ ರುದ್ರಪ್ರಯಾಗಕ್ಕೆ ಮರಳಿ, ಡೆಹ್ರಾಡೂನಿನಿಂದ ಬಂದಿದ್ದ ಹೆದ್ದಾರಿ ೭ರಲ್ಲಿ ಎಡ ತಿರುವು ತೆಗೆದುಕೊಂಡು, ಕರ್ಣಪ್ರಯಾಗ್ ಎಂದೆಲ್ಲ ಮುಂದುವರಿಯಬೇಕಿತ್ತು. ಅಲ್ಲಿನ ದಾರಿ-ದುರವಸ್ಥೆಯಲ್ಲಿ ನಮಗೆ ‘ಹೆದ್ದಾರಿ’ ಎನ್ನುವ ವಿಶೇಷಣವೇ ತಮಾಷೆಯಾಗಿ ಕೇಳುತ್ತಿತ್ತು. ಸಾಲದ್ದಕ್ಕೆ ನಕ್ಷೆಯಲ್ಲಿ ಅದೊಂದು ಬಳಸಂಬಟ್ಟೆ ಎಂದೂ ಕಾಣಿಸಿತು. ಬದಲಿಗೆ, ರುದ್ರಪ್ರಯಾಗದ ಅರ್ಧ
ದಾರಿಯಲ್ಲೇ ಸಿಗುವ ಊಖಿಮಠದ ಎಡದಾರಿ ಹಿಡಿದು, ಕರ್ಣ ಪ್ರಯಾಗದಿಂದಲೂ ಮುಂದಿನ ಚಮೋಲಿಗೆ ಹೋಗುತ್ತಿದ್ದ ದಾರಿ ಉತ್ತಮ ಒಳದಾರಿ ಎಂದೇ ಅನಿಸಿತು. "ಏನಲ್ಲದಿದ್ದರೂ ಅದರ ಡಾಮರ್ ಒಳ್ಳೇದಿದೆ" ಎಂದೇ ಹಿಂದೆ ಹೋದವರ ಅನುಭವದ ನುಡಿ ಸೇರಿಕೊಂಡಿತು. ಕೊನೆಯಲ್ಲಿ ಕಿಮೀ ಲೆಕ್ಕದ ಉಳಿತಾಯ ನಿಜವಾದರೂ (೧೩ ಕಿಮೀ!) ತುಂಬ ಸಪುರ ಮತ್ತು ವಿಪರೀತ ತಿರುವುಮುರುವುಗಳಿದ್ದುದರಿಂದ ಸತಾವಣೆಯ ಅಂಶವೇ ಹೆಚ್ಚು.
ದಾರಿಯಲ್ಲೇ ಸಿಗುವ ಊಖಿಮಠದ ಎಡದಾರಿ ಹಿಡಿದು, ಕರ್ಣ ಪ್ರಯಾಗದಿಂದಲೂ ಮುಂದಿನ ಚಮೋಲಿಗೆ ಹೋಗುತ್ತಿದ್ದ ದಾರಿ ಉತ್ತಮ ಒಳದಾರಿ ಎಂದೇ ಅನಿಸಿತು. "ಏನಲ್ಲದಿದ್ದರೂ ಅದರ ಡಾಮರ್ ಒಳ್ಳೇದಿದೆ" ಎಂದೇ ಹಿಂದೆ ಹೋದವರ ಅನುಭವದ ನುಡಿ ಸೇರಿಕೊಂಡಿತು. ಕೊನೆಯಲ್ಲಿ ಕಿಮೀ ಲೆಕ್ಕದ ಉಳಿತಾಯ ನಿಜವಾದರೂ (೧೩ ಕಿಮೀ!) ತುಂಬ ಸಪುರ ಮತ್ತು ವಿಪರೀತ ತಿರುವುಮುರುವುಗಳಿದ್ದುದರಿಂದ ಸತಾವಣೆಯ ಅಂಶವೇ ಹೆಚ್ಚು.



[ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು ನೆನಪಿನ ಹಂಡೆಯ ಕೊನೆಯ ಎರಡು ಚೊಂಬು ಮೊಗೆದು "ತೀರ್ಥಳ್ಳಿ ಗೋವಿಂದಾನೆ ಗೋವಿಂದಾ ಗೋsssssವಿಂದಾ" ಎಂದು ಕಥೆ ಮುಗಿಸುವುದರಲ್ಲಿದ್ದಾಗ ಗಣಕಕ್ಕೆ ಕಣ್ಣು ಕತ್ತಲಿಟ್ಟಿತು. ಯುಕ್ತ ಚಿಕಿತ್ಸೆ ಮುಗಿಯುವಾಗ ಕುಟ್ಟಿಟ್ಟದಷ್ಟೂ ಖಾಲಿಯಾಗಿ ಮತ್ತೆ ನಾಂದಿಗೀತೆಗೆ ಬಂದು ನಿಂತಿದ್ದೆ!! ಸಂಕಲ್ಪ ಸಿದ್ಧಿಗೆ ಮತ್ತೆ ಒಂದು ವಾರ ತಪಸ್ಸು ಮಾಡಿದ್ದೇನೆ. ಮರುರೂಪಣೆಯಲ್ಲಿ ಹೊಸಸಿದ್ಧಿಗಳು ಒದಗಿವೆ. ಪ್ರಸಿದ್ಧಿಗೆ ನಿಮ್ಮ ಸಮ-ಸಿದ್ಧಿಯೊಡನೆ ಓದಿನ ಕೊನೆಯಲ್ಲಿ ಮಾತಿನ ತೊಡವು ಕೊಡ್ತೀರಲ್ಲಾ?]
