Showing posts with label ಕೆ.ಪಿ ರಾವ್. Show all posts
Showing posts with label ಕೆ.ಪಿ ರಾವ್. Show all posts

29 January 2018

ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್


                                                                                                           - ಕೆ.ಪಿ.ರಾವ್ಕಂಡಂತೆ

 ಎಂಟನೆಯವಯಸ್ಸಿನದೇವರಾಯರುತಂದೆಬಾಗಲೋಡಿಕೃಷ್ಣರಾಯರೊಡನೆ.
(ಚಿತ್ರಕೃಪೆನರಸಿಂಗರೈಕಿನ್ನಿಕಂಬಳ. 1935 ಗ್ರೂಪ್ಫೋಟೋದಿಂದ.)
ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್ಕನ್ನಡ ಸಣ್ಣ ಕಥೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಉಳಿಸಿಹೋದವರು. ಪ್ರಖರ ವೈಚಾರಿಕತೆಯೊಂದಿಗೆ ಉತ್ಕಟ ಮಾನವ ಪ್ರೇಮವನ್ನು ಅವಲಂಬಿಸಿದ, ಕರಾವಳಿಯ ಮಾತುಗಾರಿಕೆಯಲ್ಲಿ ಸಾಮಾನ್ಯವಾದ ವ್ಯಂಗ್ಯಮಿಶ್ರಿತ ಹಾಸ್ಯ ಪ್ರಜ್ಞೆಯ ಅವರ ಕಥೆಗಳು ಕನ್ನಡದ ಸಾರಸ್ವತ ಲೋಕಕ್ಕೆ ಪ್ರಮುಖ ಕೊಡುಗೆಯೆಂದು ನಾನು ಭಾವಿಸಿದ್ದೇನೆ. ಎಳವೆಯಲ್ಲಿ ಪಂಜೆಯವರಿಂದ ಕಥಾ ರಚನೆಯ ಸ್ಫೂರ್ತಿ ಪಡೆದು, ಮಾಸ್ತಿಯವರ ಪ್ರೋತ್ಸಾಹದಿಂದ ಕನ್ನಡ ಕಥೆಗಳ ಬರವಣಿಗೆಗೆ ಮೊದಲಿಟ್ಟ ದೇವರಾಯರು ಮರೆಯಲಾಗದ ಸಾಹಿತ್ಯ ಸೃಷ್ಟಿ ಮಾಡಿದರು. ಭಾಗ್ಯವಶಾತ್ದೇವರಾಯರೂ ನಾನೂ ಒಂದೇ ಊರಿಗೆ ಸೇರಿದವರು, ಪ್ರತ್ಯಕ್ಷ ಮತ್ತು ಪರೋಕ್ಷ ಗುರುವಾಗಿ ನನಗೆ ಕಲಿಕೆಯ ದಾರಿತೋರಿಸಿದವರು.