ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆಗಿದ್ದ ಜೀವನ ಜತೆಗಾತಿ ದೇವಕಿಗೆ "ನಿಟ್ಟೆ-ಬಿಟ್ಟೆ, ಕಾರುಕಳ್ಳ, ಗೋಳಿಬಜೆ..." ನನ್ನ ಮಾಮೂಲೀ ಹಾಸ್ಯ ಉದ್ಗಾರಗಳು. ಅವನ್ನು ಕಳೆದು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ತನಿಖಾಠಾಣೆಯಲ್ಲಿ ಓಟ ನಿಧಾನಿಸಿದೆವು. ನೇರ ಮುಂದುವರಿಯುವ, ಅಂದರೆ ಭಗವತಿ ಘಾಟಿ (ಕುದುರೆಮುಖ ನಗರಕ್ಕೆ ಹೋಗುವ ದಾರಿ) ಏರುವ ಸಂಗತಿ, ಕಳೆದ ಸುಮಾರು ನಲ್ವತ್ತು ವರ್ಷಗಳಲ್ಲಿ
ನಾನು ಮಾಡಿದ್ದಕ್ಕೆ ಲೆಕ್ಕವಿಲ್ಲ. ಆದರೆ ಅದು ಬಿಟ್ಟು, ಅಲ್ಲೇ ಬಲ ತಿರುಗುವ, ಅಂದರೆ ಕೈಕಂಬ ಮನ್ನಿಸಿ ಮಾಳದತ್ತ ಮುಖ ಮಾಡಿದ್ದು, ತೀರಾ ಈಚೆಗೆ ಮತ್ತು ಇದು ಎರಡನೇ ಸಲ.
ನಾನು ಮಾಡಿದ್ದಕ್ಕೆ ಲೆಕ್ಕವಿಲ್ಲ. ಆದರೆ ಅದು ಬಿಟ್ಟು, ಅಲ್ಲೇ ಬಲ ತಿರುಗುವ, ಅಂದರೆ ಕೈಕಂಬ ಮನ್ನಿಸಿ ಮಾಳದತ್ತ ಮುಖ ಮಾಡಿದ್ದು, ತೀರಾ ಈಚೆಗೆ ಮತ್ತು ಇದು ಎರಡನೇ ಸಲ.
ತಿಂಗಳ ಹಿಂದಷ್ಟೇ ಗೆಳೆಯ ಡಾ| ಕೃಷ್ಣಮೋಹನ ಪ್ರಭು (ಕೃಶಿ) ಜೊತೆಯಲ್ಲಿ ಕಾರಿನಲ್ಲಿ ಮೂಡಬಿದ್ರೆಯಿಂದ ಹೀಗೇ ಬಂದಿದ್ದೆ. ದಾರಿ ಸ್ವಲ್ಪ ಒಳಹೋದಂತೆ ನೇರ ಇಳಿಜಾರಾಗಿತ್ತು. ಆಗ ಒಮ್ಮೆಲೆ ಎದುರಿನ ಕಡುಹಸಿರ ವಿಸ್ತಾರ ಕಣಿವೆ, ತೆಳು ಬಿಸಿಲಿನಲ್ಲಿ ಕಣ್ಣ ತುಂಬಿತ್ತು. ದಪ್ಪನಾಗಿ ಹಾಸಿದ್ದ
